ಆ್ಯಪ್ನಗರ

ಚೆನ್ನಮ್ಮನ ದೇಶಪ್ರೇಮ ಮಹಿಳೆಯರಿಗೆ ಆದರ್ಶ

ಸ್ವಾತಂತ್ರ್ಯ ಹೋರಾಟದ ಮೊದಲು ಕಿಚ್ಚು ಹಚ್ಚಿದ್ದು ಮಹಿಳೆಯರು. ಅದರಲ್ಲೂ ಮೊದಲು ಕೇಳಿಬರುವ ಹೆಸರು ಕಿತ್ತೂರು ರಾಣಿ ಚೆನ್ನಮ್ಮನದು. ಅವರ ಧೈರ್ಯ, ದೇಶಪ್ರೇಮ ಮಹಿಳೆಯರಿಗೆ ಆದರ್ಶವಾಗಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.

Vijaya Karnataka 24 Oct 2018, 5:00 am
ತುಮಕೂರು: ಸ್ವಾತಂತ್ರ್ಯ ಹೋರಾಟದ ಮೊದಲು ಕಿಚ್ಚು ಹಚ್ಚಿದ್ದು ಮಹಿಳೆಯರು. ಅದರಲ್ಲೂ ಮೊದಲು ಕೇಳಿಬರುವ ಹೆಸರು ಕಿತ್ತೂರು ರಾಣಿ ಚೆನ್ನಮ್ಮನದು. ಅವರ ಧೈರ್ಯ, ದೇಶಪ್ರೇಮ ಮಹಿಳೆಯರಿಗೆ ಆದರ್ಶವಾಗಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.
Vijaya Karnataka Web chennammas patriot roll model to womens
ಚೆನ್ನಮ್ಮನ ದೇಶಪ್ರೇಮ ಮಹಿಳೆಯರಿಗೆ ಆದರ್ಶ


ನಗರದ ಬಾಲಭವನದಲ್ಲಿ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚೆನ್ನಮ್ಮನಂತೆ ಧೈರ್ಯವಂತರಾಗಬೇಕು:

ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೆದಕಿದರೆ ಕಿತ್ತೂರು ರಾಣಿ ಚೆನ್ನಮ್ಮನ ದೇಶಪ್ರೇಮ, ಧೈರ್ಯ, ಹೋರಾಟದ ಕಿಚ್ಚು ನಮಗೆ ಗೋಚರಿಸುತ್ತದೆ. ಬ್ರಿಟಿಷ್‌ ಅಧಿಕಾರಿಗಳ ವಿರುದ್ಧ ಸಮರ್ಥವಾಗಿ ಹೋರಾಡಿ, ಬ್ರಿಟಿಷರ ಎದೆ ನಡುಗಿಸಿದ ದಿಟ್ಟ ಮಹಿಳೆ ಚೆನ್ನಮ್ಮ. ಮಹಿಳೆಯರು ಚೆನ್ನಮ್ಮನ ಇತಿಹಾಸ ತಿಳಿದುಕೊಂಡು, ಅವರ ರೀತಿಯೇ ಧೈರ್ಯವಂತರಾಗಬೇಕು. ಚೆನ್ನಮ್ಮನ ದಿಟ್ಟತನ, ಕೆಚ್ಚೆದೆಯ ಹೋರಾಟ, ಧೈರ್ಯವಂತಿಕೆ, ಸ್ವಾತಂತ್ರ್ಯ ಹೋರಾಟ ಹಾಗೂ ಅವರ ಕಾಲದ ಆಡಳಿತದ ಬಗ್ಗೆ ಪ್ರತಿಯೊಬ್ಬರು ತಿಳಿಯಬೇಕು. ಆ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ನೆಲ, ಜಲ, ಸಮಾಜ ರಕ್ಷ ಣೆಗೆ ಮುಂದಾಗಬೇಕು. ಅದರಂತೆ ನಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವ ಗುಣ ರೂಢಿಸಿಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ಮಾತನಾಡಿ, ಕನ್ನಡನಾಡಿನ ವೀರ ಮಹಿಳೆಯರಲ್ಲಿ ಮೊದಲು ಕಾಣಿಸುವ ಹೆಸರು ರಾಣಿ ಚೆನ್ನಮನದು. ಕಿತ್ತೂರು ಸಂಸ್ಥಾನದ ಸ್ವಾತಂತ್ರ ರಕ್ಷ ಣೆಗಾಗಿ ಬ್ರಿಟಿಷರ ಬೃಹತ್‌ ಸೈನ್ಯದ ವಿರುದ್ಧ ಹೋರಾಟ ನಡೆಸಿ, ಅಲ್ಲಿ ತೋರಿದ ಧೈರ್ಯ, ಸಾಹಸ, ಕೆಚ್ಚೆದೆ ಹಾಗೂ ದೇಶಪ್ರೇಮ ಇಂದಿಗೂ ಚೆನ್ನಮ್ಮನ ಕೀರ್ತಿಯನ್ನು ಅಜರಾಮರವಾಗಿಸಿದೆ. ಅವರ ಧೈರ್ಯ ಮಹಿಳೆಯರಿಗೆ ಆದರ್ಶವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷೆ ಶೈಲಾ ನಾಗರಾಜು, ಪಾಲಿಕೆ ಸದಸ್ಯ ನವೀನ ಅರುಣ್‌, ಅನ್ನಪೂರ್ಣ ನಂಜಪ್ಪ, ವಾರ್ತಾ ಇಲಾಖೆ ಹಿರಿಯ ಸಹಾಯಕ ಡಿ.ಮಂಜುನಾಥ್‌, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್‌ಕುಮಾರ್‌, ಜಿಲ್ಲಾಧಿಕಾರಿ ಕಚೇರಿ ಲೆಕ್ಕಾಧಿಕಾರಿ ಗೋಪಾಲಯ್ಯ, ಆರ್‌ಎಚ್‌ಎ ನರಸಿಂಹಮೂರ್ತಿ, ನಟರಾಜ್‌ ಮತ್ತಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ