ಆ್ಯಪ್ನಗರ

ಯುಜಿಡಿ ಕಾಮಗಾರಿ ವೇಳೆ ಭೂಮಿಯಡಿ ಹೂತು ಹೋದ ಕಾರ್ಮಿಕ : ರಕ್ಷಣಾ ಕಾರ್ಯ ಯಶಸ್ವಿ

ಯುಜಿಡಿ ಕಾಮಗಾರಿ ನಡೆಯುವಾಗ ಕಾರ್ಮಿಕನೊಬ್ಬ ಭೂಮಿಯೊಳಗೆ ಹೂತು ಹೋದ ದಾರುಣ ಘಟನೆ ನಡೆದಿದೆ. ತುಮಕೂರಿನ ಅಮಾನಿಕೆರೆ ಬಳಿ ಕಾಮಗಾರಿ ನಡೆಯುವಾಗ ಈ ಘಟನೆ ನಡೆದಿದೆ. ಅಪಾಯದಲ್ಲಿ ಸಿಲುಕಿದ್ದ ಕಾರ್ಮಿಕನನ್ನು ರಕ್ಷಿಸಲಾಗಿದೆ.

Vijaya Karnataka Web 22 Nov 2019, 5:25 pm
ತುಮಕೂರು: ಯುಜಿಡಿ ಕಾಮಗಾರಿ ನಡೆಯುವಾಗ ಕಾರ್ಮಿಕನೊಬ್ಬ ಭೂಮಿಯೊಳಗೆ ಹೂತು ಹೋದ ದಾರುಣ ಘಟನೆ ನಡೆದಿದೆ. ನಗರ ಅಭಿವೃದ್ಧಿ ಹಾಗೂ ಒಳಚರಂಡಿ ಮಂಡಳಿಯಿಂದ ಯುಜಿಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ನಡೆಯುತ್ತಿದ್ದಾಗಲೇ, ನೋಡು ನೋಡುತಿದ್ದಂತೆ ಕಾರ್ಮಿಕ ಮಣ್ಣಿನೊಳಗೆ ಹೂತು ಹೋದರು. ನಗರದ ಅಮಾನಿಕೆರೆ ಬಳಿ ಕಾಮಗಾರಿ ನಡೆಯುವಾಗ ಈ ಘಟನೆ ನಡೆದಿದೆ.
Vijaya Karnataka Web tumkur ugd accedent
ಭೂಮಿಯೊಳಗೆ ಸಿಲುಕಿರುವ ಕಾರ್ಮಿಕ


ಸುಮಾರು ಎದೆಮಟ್ಟದವರೆಗೆ ಮಣ್ಣಿನೊಳಗೆ ಹೂತು ಹೋಗಿದ್ದ ಕಾರ್ಮಿಕನನ್ನು ಕಂಡು ಇತರೆ ಕಾರ್ಮಿಕರು ಒಂದು ಕ್ಷಣ ಕಳವಳಗೊಂಡರು. ಕೂಡಲೇ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಸುಮಾರು 45 ನಿಮಿಷಗಳ ಕಾರ್ಯಾಚರಣೆ ನಂತರ ಕಾರ್ಮಿಕನನ್ನು ರಕ್ಷಿಸಲಾಯಿತು. ಜೆಸಿಬಿ ಮೂಲಕ ಹಾಗೂ ಇತರೆ ಕಾರ್ಮಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ರಕ್ಷಣಾ ಕಾರ್ಯ ಮಾಡಲಾಯಿತು.

ವಿಡಿಯೋ: ಈಜು ಬಾರದ ಬಾಲಕನ ನೀರಲ್ಲಿ ಮುಳುಗಿಸಿ ಚಿತ್ರಹಿಂಸೆ ಕೊಡುತ್ತಿರುವ ಯುವಕರು!

ಸಾರ್ವಜನಿಕರೊಂದಿಗೆ ವಾಗ್ವಾದಕ್ಕಿಳಿದ ಇಂಜಿನಿಯರ್
ಎಲ್ಲರೂ ಕಾರ್ಮಿಕನ ರಕ್ಷಣ ಮಾಡುವತ್ತ ಗಮನಹರಿಸಿದ್ದರೆ, ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದ್ದ ಇಂಜಿನಿಯರ್‌ ಸಾರ್ವಜನಿಕರೊಂದಿಗೆ ವಾಗ್ವಾದಕ್ಕಿಳಿದಕ್ಕೆ ಇಳಿದಿದ್ದರು. ಇದರಿಂದ ಒಂದ ಕ್ಷಣ ಸ್ಥಳದಲ್ಲಿ ಗೊಂದಲ ಏರ್ಪಟ್ಟಿತು. ಸಾರ್ವಜನಿಕರು ವಿಡಿಯೋ ಮಾಡಲು ಮುಂದಾದಾಗ ಇಂಜಿನಿಯರ್‌ ಅದನ್ನು ತಡೆಯಲು ಮುಂದಾದರು. ವೀಡಿಯೋ ಮಾಡಬೇಡಿ, ಕಾರ್ಮಿಕನ ತಪ್ಪಿನಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ