ಆ್ಯಪ್ನಗರ

ಕಾರ್ಯಕರ್ತೆ ಹುದ್ದೆಗೆ ಪೈಪೋಟಿ: ಅಂಗನವಾಡಿಗೆ ಬೀಗ

ಅಂಗನವಾಡಿ ಕಾರ್ಯಕರ್ತೆ ಹುದ್ದೆಯನ್ನು ಸ್ಥಳೀಯರಿಗೆ ನೀಡಬೇಕೆಂದು ಪಟ್ಟುಹಿಡಿದು ಕೆಲ ಗ್ರಾಮಸ್ಥರು ಅಂಗನವಾಡಿಗೆ ಬೀಗ ಹಾಕಿದ್ದ ಘಟನೆ ವರದಿಯಾಗಿದೆ.

Vijaya Karnataka 15 Nov 2018, 5:00 am
ಕೊಡಿಗೇನಹಳ್ಳಿ (ಮಧುಗಿರಿ ತಾ): ಅಂಗನವಾಡಿ ಕಾರ್ಯಕರ್ತೆ ಹುದ್ದೆಯನ್ನು ಸ್ಥಳೀಯರಿಗೆ ನೀಡಬೇಕೆಂದು ಪಟ್ಟುಹಿಡಿದು ಕೆಲ ಗ್ರಾಮಸ್ಥರು ಅಂಗನವಾಡಿಗೆ ಬೀಗ ಹಾಕಿದ್ದ ಘಟನೆ ವರದಿಯಾಗಿದೆ.
Vijaya Karnataka Web competitation for anganvadi post
ಕಾರ್ಯಕರ್ತೆ ಹುದ್ದೆಗೆ ಪೈಪೋಟಿ: ಅಂಗನವಾಡಿಗೆ ಬೀಗ


ಪುರವರ ಹೋಬಳಿ ಕೇಂದ್ರದ 1ನೇ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿಯಾಗಿದ್ದು, ತೆರವಾದ ಸ್ಥಾನಕ್ಕೆ ಪಕ್ಕದ ಗಂಕಾರನಹಳ್ಳಿಯ ಹೇಮಲತಾ ಎಂಬುವವರಿಗೆ ನೀಡಿಲಾಗಿದೆ ಎಂದು ವಿರೋಧಿಸಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಆ ಜಾಗದಲ್ಲಿ ಸ್ಥಳೀಯರಾದ ವಿಧವೆ ಮಹಾಲಕ್ಷ ್ಮಮ್ಮ ಎಂಬುವವರಿಗೆ ನೇಮಿಸಬೇಕು, ಇಲ್ಲದಿದ್ದರೆ ಬೀಗ ತೆರೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ತಕ್ಷ ಣ ಸಿಡಿಪಿಒ ಕೆಂಪಹನುಮಯ್ಯ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು.

ನಂತರ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿಯಾದಾಗ ಸುತ್ತಮುತ್ತಲಿನ 3 ಕಿ. ಮೀ. ಅಂತರದಲ್ಲಿರುವ ಯಾವುದಾದರೂ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಸಹಾಯಕಿಯರು ಅರ್ಜಿ ಸಲ್ಲಿಸಿದರೆ ಅಂತಹವರಿಗೆ ಬಡ್ತಿ ನೀಡುವಂತೆ ಜಿಲ್ಲಾಧಿಕಾರಿ ಆದೇಶವಿದೆ. ಅದರಂತೆ ಇಲ್ಲಿನ ಹುದ್ದೆ ಭರ್ತಿಯಾಗಿದೆ. ಇದರಲ್ಲಿ ಯಾವುದೇ ರಾಜಕೀಯ ನಡೆದಿಲ್ಲ ಎಂದು ಗ್ರಾಮಸ್ಥರ ಮನವೊಲಿಸಿ ಅಂಗನವಾಡಿ ಬೀಗವನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕೆಟಿ ಮಂಜುಳಾ ರಂಗಸ್ವಾಮಿ, ಮುಖಂಡರಾದ ಜಯಣ್ಣ, ಟಿ.ಎಲ್‌. ನರಸಿಂಹಮೂರ್ತಿ, ಖಾಸೀಂ ಸಾಬ್‌, ರಾಜಣ್ಣ, ಈರಮ್ಮ, ಅಶ್ವತ್ಥಮ್ಮ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ