ಮತದಾರರು, ಕಾರ್ಯಕರ್ತರಿಗೆ ಎಚ್ಡಿಡಿಯಿಂದ ಅಭಿನಂದನೆ
ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆÜ ಎಂದು ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
Vijaya Karnataka 19 Apr 2019, 5:00 am
ತುಮಕೂರು:
ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆÜ ಎಂದು ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ಮತದಾನ ಮುಗಿದ ಬಳಿಕ ಗುರುವಾರ ನಗರದ ಗಾಂಧಿನಗರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಉತ್ತಮವಾದ ಕಾರ್ಯ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಹ ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿದ್ದರು. ಫಲಿತಾಂಶ ಒಳ್ಳೆದು ಬರುತ್ತದೆ ಎಂಬ ವಿಶ್ವಾಸವಿದೆ. ಪ್ರತಿಯೊಬ್ಬರೂ ಉತ್ತಮವಾಗಿಯೇ ಸ್ವಂದಿಸಿದ್ದಾರೆÜ. ಒಟ್ಟಾಗಿ ಮೈತ್ರಿ ಪಕ್ಷ ದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಬಿಜೆಪಿ ವಿರುದ್ಧ ನಾವು ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಮೈತ್ರಿ ಪಕ್ಷ ದ ಒಗ್ಗಟ್ಟಿನ ಶಕ್ತಿ ಬಗ್ಗೆ ಪರೋಕ್ಷ ವಾಗಿ ಬಿಜೆಪಿಗೆ ಈಗಾಗಲೇ ಏನು ಎಂಬುದು ಗೊತ್ತಾಗಿದೆ ಎಂದು ಟಾಂಗ್ ನೀಡಿದರು.
ದೇವೇಗೌಡ ಅವರ ಆಗಮನಕ್ಕೆ ಸಂಜೆ ನೂರಾರು ಕಾರ್ಯಕರ್ತರು ಕಾದು ನಿಂತಿದ್ದರು. ಅವರು ಬರುತ್ತಿದ್ದಂತೆ ದೇವೇಗೌಡ್ರಿಗೆ ಜೈ ಎಂದು ಘೋಷಣೆ ಮೊಳಗಿಸಿದರು. ಬಳಿಕ ದೇವೇಗೌಡ ಅವರು ಕಾರಿನಲ್ಲಿಯೇ ಕೈಬೀಸುವ ಮೂಲಕ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆÜ ಎಂದು ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ಮತದಾನ ಮುಗಿದ ಬಳಿಕ ಗುರುವಾರ ನಗರದ ಗಾಂಧಿನಗರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಉತ್ತಮವಾದ ಕಾರ್ಯ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಹ ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿದ್ದರು. ಫಲಿತಾಂಶ ಒಳ್ಳೆದು ಬರುತ್ತದೆ ಎಂಬ ವಿಶ್ವಾಸವಿದೆ. ಪ್ರತಿಯೊಬ್ಬರೂ ಉತ್ತಮವಾಗಿಯೇ ಸ್ವಂದಿಸಿದ್ದಾರೆÜ. ಒಟ್ಟಾಗಿ ಮೈತ್ರಿ ಪಕ್ಷ ದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಬಿಜೆಪಿ ವಿರುದ್ಧ ನಾವು ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಮೈತ್ರಿ ಪಕ್ಷ ದ ಒಗ್ಗಟ್ಟಿನ ಶಕ್ತಿ ಬಗ್ಗೆ ಪರೋಕ್ಷ ವಾಗಿ ಬಿಜೆಪಿಗೆ ಈಗಾಗಲೇ ಏನು ಎಂಬುದು ಗೊತ್ತಾಗಿದೆ ಎಂದು ಟಾಂಗ್ ನೀಡಿದರು.
ದೇವೇಗೌಡ ಅವರ ಆಗಮನಕ್ಕೆ ಸಂಜೆ ನೂರಾರು ಕಾರ್ಯಕರ್ತರು ಕಾದು ನಿಂತಿದ್ದರು. ಅವರು ಬರುತ್ತಿದ್ದಂತೆ ದೇವೇಗೌಡ್ರಿಗೆ ಜೈ ಎಂದು ಘೋಷಣೆ ಮೊಳಗಿಸಿದರು. ಬಳಿಕ ದೇವೇಗೌಡ ಅವರು ಕಾರಿನಲ್ಲಿಯೇ ಕೈಬೀಸುವ ಮೂಲಕ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.