ಕೊರಟಗೆರೆ: ತಾಪಂ ಕಚೇರಿಯ ಸಿಬ್ಬಂದಿ ಸೇರಿ ಒಟ್ಟು 19 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗುರುವಾರ ಕೊರೊನಾ ಮುಕ್ತವಾಗಿದ್ದ ಕೊರಟಗೆರೆಗೆ ಕರಾಳ ದಿನವಾಗಿದೆ.
ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಜನರ ತನಿಖೆಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಕೊರಟಗೆರೆ ಪಟ್ಟಣದ ತಾಪಂ ಕಚೇರಿಯ 39 ವರ್ಷದ ಸಿಬ್ಬಂದಿ, ಪಾತಗಾನಹಳ್ಳಿಯ 26 ವರ್ಷದ ಯುವಕ, ಎಲೆರಾಂಪುರದ 26 ವರ್ಷದ ಮಹಿಳೆ, ಟಿ.ಗೊಲ್ಲಹಳ್ಳಿಯ 61 ವರ್ಷದ ವೃದ್ಧ, ಕರೆಕಲ್ಲಹಟ್ಟಿ ತಾಂಡಾದ 32 ವರ್ಷದ ಮಹಿಳೆ, ಎನ್.ಜಿ.ಹಳ್ಳಿಯ 48 ವರ್ಷದ ಪುರುಷ, ಗಟ್ಲಹಳ್ಳಿಯ 52 ವರ್ಷದ ಪುರುಷ, ಕುರುಬರಪಾಳ್ಯದ 38 ವರ್ಷದ ಪುರುಷ, ಎಂ.ಜಿ.ಗುಣಿಯ 33 ವರ್ಷದ ಪುರುಷನಿಗೆ ಸೊಂಕು ದೃಢಪಟ್ಟಿದೆ.
ಜಂಪೇನಹಳ್ಳಿಯ 39 ವರ್ಷದ ಪುರುಷ, ಎತ್ತಗಾನಹಳ್ಳಿಯ 78 ವರ್ಷದ ವೃದ್ಧೆ, ಅಜ್ಜಿಹಳ್ಳಿ 23 ವರ್ಷದ ಯುವಕ, ಎಲೆರಾಂಪುರದ 10 ವರ್ಷದ ಮಗು, ವೆಂಕಣ್ಣನಹಳ್ಳಿಯ 48 ವರ್ಷದ ಪುರುಷ, ಮೀಣಸಂದ್ರದ 18 ವರ್ಷದ ಯುವಕ, ಎಂ.ವೆಂಕಟಾಪುರದ 20 ವರ್ಷದ ಯುವತಿ, ಕತ್ತಿನಾಗೇನಹಳ್ಳಿಯ 55 ವರ್ಷದ ಪುರುಷ, ಮುದ್ದೇನಹಳ್ಳಿಯ 60 ವರ್ಷದ ವೃದ್ಧ ಮತ್ತು ಚಿಕ್ಕನಹಳ್ಳಿಯ 35 ವರ್ಷದ ಪುರುಷನಿಗೆ ಕೊರೊನಾ ಪಾಸಿಟಿವ್ ಬಂದಿದೆ.
ರೆಡ್ಡಿಕಟ್ಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ-15 ಜನ, ಬೆಂಗಳೂರು- 2, ಕೊರಟಗೆರೆ-1, ತುಮಕೂರು ಕೊರೊನಾ ಆಸ್ಪತ್ರೆಗೆ ಒಬ್ಬರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೊರಟಗೆರೆ ತಾಪಂ ಕಚೇರಿ ಸೇರಿ ತಾಲೂಕಿನ 18 ಗ್ರಾಮಗಳನ್ನು ಸೀಲ್ಡೌನ್ ಮಾಡಲಾಗಿದೆ. ರೆಡ್ಡಿಕಟ್ಟೆ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ ಮಧುಗಿರಿ ಎಸಿ ಡಾ.ನಂದಿನಿದೇವಿ, ಡಿವೈಎಸ್ಪಿ ಪ್ರವೀಣ್, ಕೊರಟಗೆರೆ ತಹಸೀಲ್ದಾರ್ ಗೋವಿಂದರಾಜು, ಟಿಎಚ್ಒ ವಿಜಯಕುಮಾರ್, ಸಿಪಿಐ ನದಾಫ್, ಪಿಎಸ್ಐ ಮುತ್ತುರಾಜು, ಪಿಡಿಒ ಯಶೋಧಾ ಭೇಟಿ ನೀಡಿ ಪರಿಶೀಲಿಸಿದರು.
ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಜನರ ತನಿಖೆಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಕೊರಟಗೆರೆ ಪಟ್ಟಣದ ತಾಪಂ ಕಚೇರಿಯ 39 ವರ್ಷದ ಸಿಬ್ಬಂದಿ, ಪಾತಗಾನಹಳ್ಳಿಯ 26 ವರ್ಷದ ಯುವಕ, ಎಲೆರಾಂಪುರದ 26 ವರ್ಷದ ಮಹಿಳೆ, ಟಿ.ಗೊಲ್ಲಹಳ್ಳಿಯ 61 ವರ್ಷದ ವೃದ್ಧ, ಕರೆಕಲ್ಲಹಟ್ಟಿ ತಾಂಡಾದ 32 ವರ್ಷದ ಮಹಿಳೆ, ಎನ್.ಜಿ.ಹಳ್ಳಿಯ 48 ವರ್ಷದ ಪುರುಷ, ಗಟ್ಲಹಳ್ಳಿಯ 52 ವರ್ಷದ ಪುರುಷ, ಕುರುಬರಪಾಳ್ಯದ 38 ವರ್ಷದ ಪುರುಷ, ಎಂ.ಜಿ.ಗುಣಿಯ 33 ವರ್ಷದ ಪುರುಷನಿಗೆ ಸೊಂಕು ದೃಢಪಟ್ಟಿದೆ.
ಜಂಪೇನಹಳ್ಳಿಯ 39 ವರ್ಷದ ಪುರುಷ, ಎತ್ತಗಾನಹಳ್ಳಿಯ 78 ವರ್ಷದ ವೃದ್ಧೆ, ಅಜ್ಜಿಹಳ್ಳಿ 23 ವರ್ಷದ ಯುವಕ, ಎಲೆರಾಂಪುರದ 10 ವರ್ಷದ ಮಗು, ವೆಂಕಣ್ಣನಹಳ್ಳಿಯ 48 ವರ್ಷದ ಪುರುಷ, ಮೀಣಸಂದ್ರದ 18 ವರ್ಷದ ಯುವಕ, ಎಂ.ವೆಂಕಟಾಪುರದ 20 ವರ್ಷದ ಯುವತಿ, ಕತ್ತಿನಾಗೇನಹಳ್ಳಿಯ 55 ವರ್ಷದ ಪುರುಷ, ಮುದ್ದೇನಹಳ್ಳಿಯ 60 ವರ್ಷದ ವೃದ್ಧ ಮತ್ತು ಚಿಕ್ಕನಹಳ್ಳಿಯ 35 ವರ್ಷದ ಪುರುಷನಿಗೆ ಕೊರೊನಾ ಪಾಸಿಟಿವ್ ಬಂದಿದೆ.
ರೆಡ್ಡಿಕಟ್ಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ-15 ಜನ, ಬೆಂಗಳೂರು- 2, ಕೊರಟಗೆರೆ-1, ತುಮಕೂರು ಕೊರೊನಾ ಆಸ್ಪತ್ರೆಗೆ ಒಬ್ಬರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೊರಟಗೆರೆ ತಾಪಂ ಕಚೇರಿ ಸೇರಿ ತಾಲೂಕಿನ 18 ಗ್ರಾಮಗಳನ್ನು ಸೀಲ್ಡೌನ್ ಮಾಡಲಾಗಿದೆ. ರೆಡ್ಡಿಕಟ್ಟೆ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ ಮಧುಗಿರಿ ಎಸಿ ಡಾ.ನಂದಿನಿದೇವಿ, ಡಿವೈಎಸ್ಪಿ ಪ್ರವೀಣ್, ಕೊರಟಗೆರೆ ತಹಸೀಲ್ದಾರ್ ಗೋವಿಂದರಾಜು, ಟಿಎಚ್ಒ ವಿಜಯಕುಮಾರ್, ಸಿಪಿಐ ನದಾಫ್, ಪಿಎಸ್ಐ ಮುತ್ತುರಾಜು, ಪಿಡಿಒ ಯಶೋಧಾ ಭೇಟಿ ನೀಡಿ ಪರಿಶೀಲಿಸಿದರು.