ಆ್ಯಪ್ನಗರ

ತುಮಕೂರು ಜಿಲ್ಲೆಯಲ್ಲಿ ನೀರಿಗೆ ಹೋದ ಗ್ರಾಮಸ್ಥರಿಗೆ ದಂಡ: ಕ್ರಮಕ್ಕೆ ಡಿಸಿಗೆ ಒತ್ತಾಯ

ಕುಡಿಯುವ ನೀರಿಗೆ ಆಂಧ್ರ ಗಡಿಯ ಗ್ರಾಮಕ್ಕೆ ಹೋದ ಪಾವಗಡ ತಾಲೂಕಿನ ಗ್ರಾಮಸ್ಥರಿಗೆ 3,500 ರೂ. ದಂಡ ವಿಧಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆಂಧ್ರ ಪೊಲೀಸರ ಕಾಟ ಹೆಚ್ಚಾಗಿದೆ ಎಂದು ಸಹ ಆರೋಪಿಸಿದ್ದಾರೆ.

Vijaya Karnataka Web 24 Apr 2020, 11:57 pm
ಪಾವಗಡ: ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟುವ ಸಲುವಾಗಿ ದೇಶದಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ ಜಾರಿಯಾದ ಪರಿಣಾಮ ಕುಡಿಯುವ ನೀರು ತರಲು ಆಂಧ್ರ ಗಡಿಗೆ ಹೋದ ಕೊಡಮೊಡುಗು ಗ್ರಾಮದ ಜನರಿಗೆ ಆಂಧ್ರ ಪೊಲೀಸರು ತಲಾ 3,500 ದಂಡ ವಿಧಿಸಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಏ.18ರ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web water bccl


ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೊಡಮೊಡುಗು ಗ್ರಾಪಂಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುಹೊಗಿ ಹಲವು ದಿನಗಳೇ ಕಳೆದಿವೆ. ಗ್ರಾಪಂ ಹಾಗೂ ಶುದ್ಧ ಕುಡಿಯುವ ನೀರಿನ ವಿಭಾಗದ ನಿರ್ಲಕ್ಷತೆಯಿಂದ ಫ್ಲೋರೈಡ್‌ ಮುಕ್ತ ನೀರಿಗಾಗಿ ಗ್ರಾಪಂ ಸಮೀಪದ ಆಂಧ್ರ ಗಡಿಯ ರೊದ್ದಂ ಕೊಟ್ಟಾಲು ಗ್ರಾಮಕ್ಕೆ ನೀರಿಗಾಗಿ ತೆರಳಿದ್ದ ಜನರನ್ನು
ಅಲ್ಲಿನ ಜನತೆ ಮತ್ತು ಪೊಲೀಸರು ತಡೆದು, ಆವಾಚ್ಯ ಶಬ್ದಗಳಿಂದ ನಿಂದಿಸಿ ತಲಾ 3,500 ದಂಡ ಕಟ್ಟಿಸಿಕೊಂಡು ಕೊನೆಗೆ ಎಚ್ಚರಿಕೆ ನೀಡಿ ವಾಪಸ್‌ ಕಳಿಸಿದ್ದಾರೆ.

ಕೊಡಮೊಡುಗು ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಕೆಟ್ಟ ಕಾರಣ ನಾವು ಫ್ಲೋರೈಡ್‌ ಮುಕ್ತ ನೀರಿಗಾಗಿ ರೊದ್ದಂ ಕೊಟ್ಟಾಲು ಗ್ರಾಮಕ್ಕೆ ತೆರಳಿದ್ದೆವು. ನಾವು ಮದ್ಯಕ್ಕಾಗಿ ಅಲ್ಲಿಗೆ ಹೋಗಿರಲಿಲ್ಲ. ನೀರಿಗಾಗಿ ಹೋದ ನಮಗೆ ಅವರು ದಂಡ ವಿಧಿಸುವುದಾದರೆ, ಮದ್ಯಕ್ಕಾಗಿ ಆಂಧ್ರ ಗಡಿಯಿಂದ ಬರುವ ಜನರಿಗೆ ಪಾವಗಡ ಪೊಲೀಸರು ಏಕೆ ದಂಡ ವಿಧಿಸುತ್ತಿಲ್ಲ ಎಂದು ಕೊಡಮೊಡುಗು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ತುಮಕೂರು: ಗುಜರಾತಿನಿಂದ ಬಂದು ಮಸೀದಿಯಲ್ಲಿದ್ದ ವ್ಯಕ್ತಿಗೆ ಪಾಸಿಟಿವ್, ಪಿಎಚ್‌ ಕಾಲೋನಿ ಸೀಲ್‌ ಡೌನ್‌

ಜಿಲ್ಲಾಧಿಕಾರಿ ಗಮನ ಹರಿಸಲಿ
ಆಂಧ್ರ ಪೊಲೀಸರ ಕಾಟ ಮೊದಲಿನಿಂದಲೂ ಹೆಚ್ಚಾಗಿದೆ. ಸಾಕಷ್ಟು ಬಾರಿ ಸಭೆಗಳಲ್ಲಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಅಲ್ಲಿನ ಪೊಲೀಸರ ಕಾರ್ಯ ನಿರ್ವಹಣೆ ನೋಡಿ ನಮ್ಮ ಪೊಲೀಸರು ಕಲಿಯಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿನ ಪೊಲೀಸರ ದುರ್ವರ್ತನೆಗೆ ಕಡಿವಾಣ ಹಾಕಬೇಕು. ವಸೂಲಿ ಮಾಡಿರುವ ದಂಡ ವಾಪಸಿಗೆ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಿರಾಶ್ರಿತರ ಕೇಂದ್ರದಲ್ಲಿರುವ ಐವರು ಗರ್ಭಿಣಿಯರಿಗೆ ತುಮಕೂರು ಜಿಲ್ಲಾಡಳಿತದಿಂದ ಸೀಮಂತ ಕಾರ್ಯ!
ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು ಲಾಕ್‌ಡೌನ್‌ ಇದ್ದರೂ ಅನಂತಪುರದಿಂದ ಸಾಮಗ್ರಿಗಳನ್ನು ತರಿಸಿ ಘಟಕ ರಿಪೇರಿ ಮಾಡಿಸಿ, ಜನತೆಗೆ ಶುದ್ಧ ಕುಡಿಯುವ ನೀರುನೀಡಲಾಗುತ್ತಿದೆ.
- ಜಿ. ನರಸಿಂಹಮೂರ್ತಿ, ತಾಪಂ ಇಒ, ಪಾವಗಡ
ಕೊರೊನಾ ಎಫೆಕ್ಟ್‌: ಸಪ್ತಪದಿ ಸಾಮೂಹಿಕ ವಿವಾಹ ಮೇ 24ಕ್ಕೆ ಮುಂದೂಡಿಕೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ