ತುಮಕೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ತುಮಕೂರಿನಲ್ಲೂ ಮೈತ್ರಿ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ತುಮಕೂರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಚುನಾವಣೆಗಳಲ್ಲೂ ಬಹುಮತ ಪಡೆಯದ ಬಿಜೆಪಿಗೆ ಜೆಡಿಎಸ್ ಸಹಕಾರ ನೀಡಿದ್ದರಿಂದಲೇ ಅಧಿಕಾರಕ್ಕೆ ಬರುತ್ತಿದೆ. ಜೆಡಿಎಸ್ಗೆ ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆಯಿಲ್ಲ. ಹೀಗಾಗಿಯೇ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲ್ಲ. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದರು.
ಜಿಲ್ಲೆಗೆ ನೀರಾವರಿ ಕಲ್ಪಿಸಲು ಸಿದ್ದರಾಮಯ್ಯ ಕಾರಣ. ನಾಲೆ ವಿಸ್ತರಣೆಯಿಂದ ಮಂಡ್ಯ ಮತ್ತು ತುಮಕೂರಿಗೆ ಅನುಕೂಲವಾಯಿತು. ಒಕ್ಕಲಿಗರಿಗೆ ಸ್ವಾಭಿಮಾನವೇ ಮುಖ್ಯ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಮತ ಹಾಕಲು ಜನ ನಿರ್ಧರಿಸಿದ್ದಾರೆ. ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳು ಹೊರಗಿನಿಂದ ಬಂದವರು. ಸಿದ್ದರಾಮಯ್ಯ ಸರಕಾರವಿದ್ದಾಗ ರೈತರಿಗೆ ನೀಡಿದ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಡಿಸಿಸಿ ಬ್ಯಾಂಕ್ ಮಾಡಿದೆ. ಇದರ ನಿರ್ದೇಶಕರಾಗಿ ಜನರ ಧ್ವನಿಯಾಗಿರುವ ಆರ್. ರಾಜೇಂದ್ರ ಅವರನ್ನು ಗೆಲ್ಲಿಸಿ ಎಂದು ಚಲುವರಾಯಸ್ವಾಮಿ ಮತದಾರರಿಗೆ ಕರೆ ನೀಡಿದರು.
ಅನಿಲ್ ಮನೆ ಮಗನಂತೆ: ಮಾಜಿ ಶಾಸಕ ಕೆ. ಎನ್. ರಾಜಣ್ಣ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಅನಿಲ್ ಮನೆ ಮಗನಂತೆ, ಬಿಜೆಪಿ ಅಭ್ಯರ್ಥಿ ಎಲ್ಲಿದ್ದರೋ ಗೊತ್ತಿಲ್ಲ ಎಂದರು.
ರಾಜಕೀಯ ಬೇಸಾಯವಿದ್ದಂತೆ. ಒಂದೇ ದಿನಕ್ಕೆ ಎಲ್ಲವನ್ನೂ ಸಾಧಿಸುತ್ತೇವೆಂದು ತಿಳಿದಿರುವುದು ಈಗ ಬಂದಿರುವ ಅಭ್ಯರ್ಥಿಗಳು. ಆರ್. ರಾಜೇಂದ್ರ ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದರೂ ಜನರ ನಡುವೆಯೇ ಇದ್ದು ನಿಸ್ವಾರ್ಥ ಸೇವೆ ಮಾಡಿದ್ದಾನೆ. ಜನರ ಅಭಿಮತ ಕೈ ಪರವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನಲ್ಲಿ ಗುಂಪುಗಾರಿಕೆಯಿದೆ ಎಂದು ಅಪ ಪ್ರಚಾರ ಮಾಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ, ಒಳ ಸಂಚುಗಳೂ ಇಲ್ಲ. ಪಕ್ಷದಲ್ಲಿ ಒಗ್ಗಟ್ಟಿದೆ. ಎಲ್ಲರೂ ಪ್ರತಿಸ್ಪರ್ಧಿಗಳೇ. ಪ್ರಮುಖ ಹೋರಾಟ ಬಿಜೆಪಿ ವಿರುದ್ಧಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ಎನ್. ರಾಜಣ್ಣ, ಅಭ್ಯರ್ಥಿ ಆರ್. ರಾಜೇಂದ್ರ, ಮಾಜಿ ಎಂಎಲ್ಸಿ ಸಿ. ಆರ್. ಮನೋಹರ್ ಇದ್ದರು.
ಪ್ರಕರಣ ಮುಚ್ಚಿಟ್ಟಿದ್ದಾರೆ
ಬಲವಂತದಿಂದ ಕೆಲಸಕ್ಕೆ ರಾಜೀನಾಮೆ ಕೊಡಿಸಿ ಜೆಡಿಎಸ್ ಅಭ್ಯರ್ಥಿಯನ್ನು ಚುನಾವಣೆ ಕಣಕ್ಕೆ ತಂದಿದ್ದಾರೆ. 10 ವರ್ಷ ಕೆಲಸ ಮಾಡಿದ್ದ ಅವರು 500 ಕೋಟಿ ಹಣ ಮಾಡಿದ್ದಾರೆ. ಅಫಿಡವಿಟ್ನಲ್ಲಿ ಒಂದು ಪ್ರಕರಣವನ್ನು ಮರೆ ಮಾಚಿದ್ದಾರೆ. ಇಂತಹ ವ್ಯಕ್ತಿಗೆ ಮತ ಹಾಕಿದರೆ ಜನರ ಸಮಸ್ಯೆಗೆ ಧ್ವನಿಯಾಗುತ್ತಾರೆಯೇ ಎಂದು ಎನ್. ಚೆಲುವರಾಯ ಸ್ವಾಮಿ ಪ್ರಶ್ನಿಸಿದರು.
ರಾಜಣ್ಣ ಮನೆಗೆ ಕಾಂತರಾಜು, ವಾಸು
ಎಂಎಲ್ಸಿ ಬೆಮಲ್ ಕಾಂತರಾಜು ಮತ್ತು ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಅವರು ಮಾಜಿ ಶಾಸಕ ಕೆ. ಎನ್. ರಾಜಣ್ಣ ಅವರ ಮನೆಗೆ ಭೇಟಿ ನೀಡಿ, ಕೆಲ ಹೊತ್ತು ಚರ್ಚಿಸಿದರು.
ಡಿಕೆಶಿ, ಸಿದ್ದರಾಮಯ್ಯ ಶನಿವಾರ ಕುಣಿಗಲ್ಗೆ ಭೇಟಿ
ಕಾಂಗ್ರೆಸ್ ಅಭ್ಯರ್ಥಿ ಆರ್. ರಾಜೇಂದ್ರ ಮಾತನಾಡಿ, ಡಿಸೆಂಬರ್ 4 ಶನಿವಾರದಂದು ಕುಣಿಗಲ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಚಾರ ನಡೆಯಲಿದೆ ಎಂದರು. ಜಿಲ್ಲೆಯ ಎಲ್ಲಾ ನಾಯಕರ ಬೆಂಬಲವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾರ್ಯಕರ್ತರು ಸಾಕಷ್ಟು ಶ್ರಮಿಸುತ್ತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.
ಜಿಲ್ಲೆಗೆ ನೀರಾವರಿ ಕಲ್ಪಿಸಲು ಸಿದ್ದರಾಮಯ್ಯ ಕಾರಣ. ನಾಲೆ ವಿಸ್ತರಣೆಯಿಂದ ಮಂಡ್ಯ ಮತ್ತು ತುಮಕೂರಿಗೆ ಅನುಕೂಲವಾಯಿತು. ಒಕ್ಕಲಿಗರಿಗೆ ಸ್ವಾಭಿಮಾನವೇ ಮುಖ್ಯ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಮತ ಹಾಕಲು ಜನ ನಿರ್ಧರಿಸಿದ್ದಾರೆ. ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳು ಹೊರಗಿನಿಂದ ಬಂದವರು. ಸಿದ್ದರಾಮಯ್ಯ ಸರಕಾರವಿದ್ದಾಗ ರೈತರಿಗೆ ನೀಡಿದ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಡಿಸಿಸಿ ಬ್ಯಾಂಕ್ ಮಾಡಿದೆ. ಇದರ ನಿರ್ದೇಶಕರಾಗಿ ಜನರ ಧ್ವನಿಯಾಗಿರುವ ಆರ್. ರಾಜೇಂದ್ರ ಅವರನ್ನು ಗೆಲ್ಲಿಸಿ ಎಂದು ಚಲುವರಾಯಸ್ವಾಮಿ ಮತದಾರರಿಗೆ ಕರೆ ನೀಡಿದರು.
ಅನಿಲ್ ಮನೆ ಮಗನಂತೆ: ಮಾಜಿ ಶಾಸಕ ಕೆ. ಎನ್. ರಾಜಣ್ಣ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಅನಿಲ್ ಮನೆ ಮಗನಂತೆ, ಬಿಜೆಪಿ ಅಭ್ಯರ್ಥಿ ಎಲ್ಲಿದ್ದರೋ ಗೊತ್ತಿಲ್ಲ ಎಂದರು.
ರಾಜಕೀಯ ಬೇಸಾಯವಿದ್ದಂತೆ. ಒಂದೇ ದಿನಕ್ಕೆ ಎಲ್ಲವನ್ನೂ ಸಾಧಿಸುತ್ತೇವೆಂದು ತಿಳಿದಿರುವುದು ಈಗ ಬಂದಿರುವ ಅಭ್ಯರ್ಥಿಗಳು. ಆರ್. ರಾಜೇಂದ್ರ ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದರೂ ಜನರ ನಡುವೆಯೇ ಇದ್ದು ನಿಸ್ವಾರ್ಥ ಸೇವೆ ಮಾಡಿದ್ದಾನೆ. ಜನರ ಅಭಿಮತ ಕೈ ಪರವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನಲ್ಲಿ ಗುಂಪುಗಾರಿಕೆಯಿದೆ ಎಂದು ಅಪ ಪ್ರಚಾರ ಮಾಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ, ಒಳ ಸಂಚುಗಳೂ ಇಲ್ಲ. ಪಕ್ಷದಲ್ಲಿ ಒಗ್ಗಟ್ಟಿದೆ. ಎಲ್ಲರೂ ಪ್ರತಿಸ್ಪರ್ಧಿಗಳೇ. ಪ್ರಮುಖ ಹೋರಾಟ ಬಿಜೆಪಿ ವಿರುದ್ಧಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ಎನ್. ರಾಜಣ್ಣ, ಅಭ್ಯರ್ಥಿ ಆರ್. ರಾಜೇಂದ್ರ, ಮಾಜಿ ಎಂಎಲ್ಸಿ ಸಿ. ಆರ್. ಮನೋಹರ್ ಇದ್ದರು.
ಪ್ರಕರಣ ಮುಚ್ಚಿಟ್ಟಿದ್ದಾರೆ
ಬಲವಂತದಿಂದ ಕೆಲಸಕ್ಕೆ ರಾಜೀನಾಮೆ ಕೊಡಿಸಿ ಜೆಡಿಎಸ್ ಅಭ್ಯರ್ಥಿಯನ್ನು ಚುನಾವಣೆ ಕಣಕ್ಕೆ ತಂದಿದ್ದಾರೆ. 10 ವರ್ಷ ಕೆಲಸ ಮಾಡಿದ್ದ ಅವರು 500 ಕೋಟಿ ಹಣ ಮಾಡಿದ್ದಾರೆ. ಅಫಿಡವಿಟ್ನಲ್ಲಿ ಒಂದು ಪ್ರಕರಣವನ್ನು ಮರೆ ಮಾಚಿದ್ದಾರೆ. ಇಂತಹ ವ್ಯಕ್ತಿಗೆ ಮತ ಹಾಕಿದರೆ ಜನರ ಸಮಸ್ಯೆಗೆ ಧ್ವನಿಯಾಗುತ್ತಾರೆಯೇ ಎಂದು ಎನ್. ಚೆಲುವರಾಯ ಸ್ವಾಮಿ ಪ್ರಶ್ನಿಸಿದರು.
ರಾಜಣ್ಣ ಮನೆಗೆ ಕಾಂತರಾಜು, ವಾಸು
ಎಂಎಲ್ಸಿ ಬೆಮಲ್ ಕಾಂತರಾಜು ಮತ್ತು ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಅವರು ಮಾಜಿ ಶಾಸಕ ಕೆ. ಎನ್. ರಾಜಣ್ಣ ಅವರ ಮನೆಗೆ ಭೇಟಿ ನೀಡಿ, ಕೆಲ ಹೊತ್ತು ಚರ್ಚಿಸಿದರು.
ಡಿಕೆಶಿ, ಸಿದ್ದರಾಮಯ್ಯ ಶನಿವಾರ ಕುಣಿಗಲ್ಗೆ ಭೇಟಿ
ಕಾಂಗ್ರೆಸ್ ಅಭ್ಯರ್ಥಿ ಆರ್. ರಾಜೇಂದ್ರ ಮಾತನಾಡಿ, ಡಿಸೆಂಬರ್ 4 ಶನಿವಾರದಂದು ಕುಣಿಗಲ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಚಾರ ನಡೆಯಲಿದೆ ಎಂದರು. ಜಿಲ್ಲೆಯ ಎಲ್ಲಾ ನಾಯಕರ ಬೆಂಬಲವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾರ್ಯಕರ್ತರು ಸಾಕಷ್ಟು ಶ್ರಮಿಸುತ್ತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.