ಆ್ಯಪ್ನಗರ

ಮಧುಗಿರಿಯಲ್ಲಿ ಜನಸ್ನೇಹಿ ಅಧಿಕಾರಿಯ ತೇಜೋವಧೆ, ಆರೋಪ: ಕನ್ನಡಪರ ಸಂಘಟನೆಗಳ ಒಕ್ಕೂಟ ಖಂಡನೆ

ಪಟ್ಟಣದ ನೃಪತುಂಗ ವೃತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರನ್ನು ಸರ್ಕಲ್ ಇನ್ಸ್‌ಪೆಕ್ಟರ್ ಬೂಟು ಕಾಲಿನಿಂದ ಒದ್ದಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದ್ದು ಅದು ಸತ್ಯಕ್ಕೆ ದೂರವಾಗಿದೆ. ಜನಸ್ನೇಹಿ ಪೊಲೀಸ್ ಅಧಿಕಾರಿಯನ್ನು ತೇಜೋವಧೆ ಮಾಡುವವರು ಮೂರ್ಖರು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

Vijaya Karnataka Web 25 Jan 2021, 8:15 pm
ಮಧುಗಿರಿ ತಾ (ತುಮಕೂರು): ಮಧುಗಿರಿಯ ಪೊಲೀಸ್ ಅಧಿಕಾರಿ ಸಿಪಿಐ ಎಂ.ಎಸ್ ಸರ್ದಾರ್ ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿದ್ದು, ಅವರ ತೇಜೋವಧೆ ಮಾಡುವವರು ಮೂರ್ಖರು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಪಟ್ಟಣದಲ್ಲಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಪದಾಧಿಕಾರಿಗಳು ಸಿಪಿಐ ಸರ್ದಾರ್ ಬಂದಾಗಿನಿಂದಲೂ ಪಟ್ಟಣದ ಎಲ್ಲ ವೃತ್ತಗಳನ್ನು ಸ್ವಯಂ ಪ್ರೇರಣೆಯಿಂದ ಜೀರ್ಣೋದ್ಧಾರ ಮಾಡಿಸಿದ್ದು, ಟ್ರಾಫಿಕ್ ಮುಕ್ತ ಮಧುಗಿರಿ ಮಾಡಲು ಶ್ರಮಿಸಿದ್ದಾರೆ. ಇದರಿಂದ ಹಲವಾರು ಅಪಘಾತಗಳು ತಪ್ಪಿದ್ದು, ಜನಸಾಮಾನ್ಯದ ಜೀವಕ್ಕೆ ರಕ್ಷಣೆ ಸಿಕ್ಕಿದೆ.

ಇಂತಹ ಪ್ರಾಮಾಣಿಕ ಅಧಿಕಾರಿ ಕಾರ್ಯ ನಿಮಿತ್ತ ಕೆಲಸದಲ್ಲಿದ್ದಾಗ ಪಾನಮತ್ತನಾಗಿ ದ್ವಿಚಕ್ರ ಸವಾರನೊಬ್ಬ ಪೊಲೀಸ್ ವಾಹನವನ್ನು ಹಿಂದೆ ಹಾಕಿದ್ದಾನೆ. ನಂತರ ಹಿಡಿದು ದಂಡ ವಿಧಿಸುವಾಗ ಮಾಸ್ಕ್ ಕೂಡ ಹಾಕದೆ ಸಿಪಿಐರವರನ್ನೇ ಏಕವಚನದಲ್ಲಿ ನಿಂದಿಸಿದ್ದಾನೆ.
ಸಾಮಾಜಿಕ ಅಂತರವಿಲ್ಲದ್ದನ್ನೂ ಗಮನಿಸಿ ದೂರ ನಿಲ್ಲು ಎಂದು ತಳ್ಳಿದಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದನ್ನೇ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣದಲ್ಲಿ ತಿರುಚಿ ತಮ್ಮದೇ ವ್ಯಾಖ್ಯಾನದಲ್ಲಿ ಸಿಪಿಐ ಸರ್ದಾರ್ ಬೂಟುಗಾಲಿನಲ್ಲಿ ಒದ್ದಿದ್ದಾರೆಂದು ಅಪಪ್ರಚಾರ ಮಾಡಿರುವುದು ಖಂಡನೀಯವೆಂದಿದ್ದಾರೆ.
ಮಧುಗಿರಿಯಲ್ಲಿ ಬೈಕ್‌ ಸವಾರನಿಗೆ ಬೂಟುಗಾಲಿನಿಂದ ಒದ್ದ ಸಿಪಿಐ..! ವಿಡಿಯೋ ವೈರಲ್‌
ಈ ಬಗ್ಗೆ ಯಾವುದೇ ದಾಖಲೆಯಿಲ್ಲದೆ ಇಂತಹ ಪ್ರಾಮಾಣಿಕ ಅಧಿಕಾರಿಯ ತೇಜೋವಧೆ ಮಾಡಲು ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುವವರನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕು ಎಂದು ತಾಲೂಕು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರ್ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕುಮಾರ್, ಬಾಬು, ಹರೀಶ್, ಕಾಂತರಾಜು, ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ