ಆ್ಯಪ್ನಗರ

ಪ್ರೀತಿ ಹೆಸರಲ್ಲಿ ನಂಬಿಸಿ ಯುವತಿಗೆ ಮೋಸ; ಆರೋಪಿ ನಾಪತ್ತೆ

ಪ್ರೀತಿಯ ನೆಪದಲ್ಲಿ ಯುವತಿಯೊಬ್ಬಳನ್ನು ನಂಬಿಸಿ, ಗರ್ಭಿಣಿಯಾದ ನಂತರ ಪರಾರಿಯಾಗಿದ್ದ ಯುವಕನ ಮನೆಯ ಮುಂದೆ ವಂಚನೆಗೊಳಗಾದ ಯುವತಿಯು ನ್ಯಾಯಕ್ಕಾಗಿ ಧರಣಿ ಕುಳಿತ ಘಟನೆ ತಾಲೂಕಿನ ಬಡವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬುಳಸಂದ್ರ ಗ್ರಾಮದಲ್ಲಿ ನಡೆದಿದೆ.

Vijaya Karnataka 5 Nov 2018, 5:00 am
ಮಧುಗಿರಿ: ಪ್ರೀತಿಯ ನೆಪದಲ್ಲಿ ಯುವತಿಯೊಬ್ಬಳನ್ನು ನಂಬಿಸಿ, ಗರ್ಭಿಣಿಯಾದ ನಂತರ ಪರಾರಿಯಾಗಿದ್ದ ಯುವಕನ ಮನೆಯ ಮುಂದೆ ವಂಚನೆಗೊಳಗಾದ ಯುವತಿಯು ನ್ಯಾಯಕ್ಕಾಗಿ ಧರಣಿ ಕುಳಿತ ಘಟನೆ ತಾಲೂಕಿನ ಬಡವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬುಳಸಂದ್ರ ಗ್ರಾಮದಲ್ಲಿ ನಡೆದಿದೆ.
Vijaya Karnataka Web crime news
ಪ್ರೀತಿ ಹೆಸರಲ್ಲಿ ನಂಬಿಸಿ ಯುವತಿಗೆ ಮೋಸ; ಆರೋಪಿ ನಾಪತ್ತೆ


ಬುಳಸಂದ್ರ ಗ್ರಾಮದ ದೊಡ್ಡಯ್ಯ ಎಂಬುವರ ಮಗ ಸಿದ್ದಲಿಂಗಪ್ಪ ಎಂಬಾತ ಕಳೆದ ಎರಡು ವರ್ಷದ ಹಿಂದೆ ಚನ್ನಪಟ್ಟಣ ಮೂಲದ ಯುವತಿ ಸರಸ್ವತಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡು ಪ್ರೀತಿಸಿದ್ದಾನೆ. ಆ ಬಳಿಕ ಆಕೆಗೆ ನಿಗದಿಯಾಗಿದ್ದ ಮದುವೆ ತಪ್ಪಿಸಿ, ಕರೆತಂದು ಬೆಂಗಳೂರಿನಲ್ಲಿ ಮದುವೆಯಾಗಿದ್ದಾನೆ. ಸುಮಾರು ತಿಂಗಳ ಕಾಲ ಈ ಜೋಡಿ ಬೆಂಗಳೂರಿನ ಹೆಗ್ಗೇರೆ ಬಳಿ ಮನೆಯೊಂದರಲ್ಲಿ ಸಂಸಾರ ನಡೆಸಿತ್ತು. ಆದರೆ ಈಕೆ ಗರ್ಭಿಣಿಯಾಗುತ್ತಿದ್ದಂತೆ ಸಿದ್ದಲಿಂಗಪ್ಪ ಆಕೆಯನ್ನು ಮಧುಗಿರಿಗೆ ಕರೆತಂದು ಗರ್ಭಪಾತ ಮಾಡಿಸಲು ಯತ್ನಿಸಿದ್ದು, ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾಳೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿದ್ದಲಿಂಗಪ್ಪ ಕೆಲಸ ಮಾಡುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಯಾರಿಗೂ ಸಿಗದೇ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಗಂಡನಿಗಾಗಿ ಒಂದು ತಿಂಗಳಿನಿಂದ ಕಾದು ಕುಳಿತಿದ್ದ ಮಹಿಳೆ, ಆತ ಬಾರದೆ ಇದ್ದಾಗ ಬುಳಸಂದ್ರದಲ್ಲಿರುವ ಸಿದ್ದಲಿಂಗಪ್ಪನ ಮನೆ ಎದುರು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾಳೆ. ಕುಟುಂಬಸ್ಥರಿಗೆ ಈ ಮದುವೆ ಇಷ್ಟವಿಲ್ಲದ್ದರಿಂದ ಸಿದ್ದಲಿಂಗಪ್ಪಗೆ ಬೇರೆ ಮದುವೆ ಮಾಡಲು ಆತನ ಕುಟುಂಬಸ್ಥರೇ ಆತನನ್ನ ಬಚ್ಚಿಟಿದ್ದಾರೆ ಎನ್ನುವ ಆರೋಪವನ್ನೂ ಸಹ ಮಹಿಳೆ ಮಾಡಿದ್ದಾಳೆ.

ಸದ್ಯ ಸರಸ್ವತಿ ನ್ಯಾಯಕ್ಕಾಗಿ ಕಾನೂನಿನ ಮೊರೆಹೋಗಿದ್ದು, ಬೆಂಗಳೂರಿನ ಅಕ್ಕೂರು ಪೊಲೀಸ್‌ ಠಾಣೆ ಹಾಗೂ ಮಧುಗಿರಿಯ ಬಡವನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.

ಈ ಕುರಿತಂತೆ ಸರಸ್ವತಿಯ ಆರೋಪವನ್ನ ತಳ್ಳಿಹಾಕಿರೋ ಸಿದ್ದಲಿಂಗಪ್ಪನ ತಂದೆ ದೊಡ್ಡಯ್ಯ, ಈ ಬಗ್ಗೆ ತಮಗೇನೂ ಗೊತ್ತಿಲ್ಲ. ಮಗ ಎಲ್ಲಿದ್ದಾನೆ ಎಂದು ಗೊತ್ತಿಲ್ಲ. ಮದುವೆಯಾದ ಮೇಲೆ ಒಂದು ಬಾರಿ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದೆ. ಆ ಬಳಿಕ ನಾನು ಅವನನ್ನು ನೋಡೇ ಇಲ್ಲಾ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ