ಆ್ಯಪ್ನಗರ

ಹೆಂಡತಿಯ ರುಂಡ-ಮುಂಡ ಬೇರ್ಪಡಿಸಿದ್ದ ಗಂಡನಿಗೆ ಗಲ್ಲು

ಕೊಲೆಗಾರ ತಂದೆ ವಿರುದ್ಧ ಪ್ರತ್ಯಕ್ಷ ಸಾಕ್ಷಿ ಹೇಳಿದ ಮಗಳು, ಆತನಿಗೆ ಮರಣ ದಂಡನೆ ವಿಧಿಸಿದ ಜಿಲ್ಲಾ ನ್ಯಾಯಲಯ.

ವಿಕ ಸುದ್ದಿಲೋಕ 30 May 2017, 6:26 pm
ಮಧುಗಿರಿ: ತನ್ನ ತಾಯಿಯನ್ನು ಹತ್ಯೆ ಮಾಡಿದ್ದ ತಂದೆಯ ವಿರುದ್ಧ ಮಗಳೇ ಪ್ರತ್ಯೆಕ್ಷ ಸಾಕ್ಷಿ ನುಡಿದಿದ್ದು, ಅಪರಾಧಿಗೆ ಜಿಲ್ಲಾ ನ್ಯಾಯಲಯ ಗಲ್ಲು ಶಿಕ್ಷೆ ವಿಧಿಸಿದೆ.
Vijaya Karnataka Web death sentence for wife murderer
ಹೆಂಡತಿಯ ರುಂಡ-ಮುಂಡ ಬೇರ್ಪಡಿಸಿದ್ದ ಗಂಡನಿಗೆ ಗಲ್ಲು

ಚೂರಿಯಿಂದ ಹೆಂಡತಿಯ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿ ಪರಾರಿಯಾಗಿದ್ದ ನಂಜಪ್ಪನಿಗೆ ಮಂಗಳವಾರ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರು ಮರಣ ದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ.

ತಿರುಮಣಿ ಪೊಲೀಸ್‌ ಠಾಣಾ ವ್ಯಾಪ್ತಿಯ ನಾಗಲಮಡಿಕೆ ಸಮೀಪವಿರುವ ವಲ್ಲೂರು ಗ್ರಾಮದಲ್ಲಿ 2015ರ ಅಕ್ಟೋಬರ್‌ 15ರಂದು ಕೊಲೆ ನಡೆದಿತ್ತು. ಸೀಮಾಂದ್ರದ ಹಿಂದೂಪುರ ಸಮೀಪದ ಮದ್ದಲಚೆರುವು ಗ್ರಾಮದಲ್ಲಿ ನಂಜಪ್ಪ ತನ್ನ ಹೆಂಡತಿ ಲಕ್ಷ್ಮೀದೇವಿ ಅವರನ್ನು ಕತ್ತು ಸೀಳಿ ಕೊಲೆ ಮಾಡಿದ್ದ. ಮಗಳ ಎದುರಲ್ಲೇ ರುಂಡ-ಮುಂಡ ಬೇರ್ಪಡಿಸಿ ಹೇಯತೆ ಪ್ರದರ್ಶಿಸಿದ್ದ.

ತಿರುಮಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸಿಪಿಐ ಗಳಾದ ಶೇಷಾದ್ರಿ, ಆನಂದ್‌ ಮತ್ತು ಸತ್ಯನಾರಾಯಣ ಸ್ವಾಮಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಜಿ.ಟಿ.ರಂಗಪ್ಪ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ