ಆ್ಯಪ್ನಗರ

ಲಾರಿ ಚಾಲಕನ ಕೊಲೆಗಾರರ ಬಂಧನ

ರಾಜ್ಯ ಹೆದ್ದಾರಿ 33ರಲ್ಲಿ ಹಣಕ್ಕಾಗಿ ಲಾರಿ ಚಾಲಕನನ್ನು ಕೊಲೆ ಮಾಡಿ ಕಬ್ಬಿಣ ತುಂಬಿದ ಲಾರಿಯೊಂದಿಗೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಕುಣಿಗಲ್‌ ಪೊಲೀಸರು ಬಂಧಿಸಿದ್ದಾರೆ.

Vijaya Karnataka 2 Jan 2019, 5:00 am
ಕುಣಿಗಲ್‌ : ರಾಜ್ಯ ಹೆದ್ದಾರಿ 33ರಲ್ಲಿ ಹಣಕ್ಕಾಗಿ ಲಾರಿ ಚಾಲಕನನ್ನು ಕೊಲೆ ಮಾಡಿ ಕಬ್ಬಿಣ ತುಂಬಿದ ಲಾರಿಯೊಂದಿಗೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಕುಣಿಗಲ್‌ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web detention of truck drivers killers
ಲಾರಿ ಚಾಲಕನ ಕೊಲೆಗಾರರ ಬಂಧನ


ಬೆಂಗಳೂರಿನ ಆಸೀಫ್‌ ಅಲಿಯಾಸ್‌ ಆರೀಫ್‌(41), ಪಿರಿಯಾಪಟ್ಟಣದ ನಾಸಿರ್‌ ಶರೀಫ್‌ ಅಲಿಯಾಸ್‌ ಚಿಲುಮುಲ(25)ಹಾಗೂ ಮೈಸೂರಿನ ಮುಬಾರಕ್‌ ಪಾಷಾ ಅಲಿಯಾಸ್‌ ಮುಬಾರಕ್‌(21) ಬಂಧಿತ ಆರೋಪಿಗಳು. ಮತ್ತೊಬ್ಬ ಪ್ರಮುಖ ಆರೋಪಿ ಅಕ್ರಂ ಪಾಶ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಕೊಲೆಯಾದ ಲಾರಿ ಚಾಲಕ ಯಾರೆಂದು ಗುರುತಿಸಲು ಇಲ್ಲಿವರೆಗೂ ಸಾಧ್ಯವಾಗಿಲ್ಲ. ಆದರೆ ಕೊಲೆಯಾದ ವ್ಯಕ್ತಿ ಗುರುತು ಪತ್ತೆಗೂ ಮುನ್ನವೇ ಆರೋಪಿಗಳನ್ನು ಬಂಧಿಸಿರುವುದು ವಿಶೇಷವಾಗಿದೆ.

ಡಿ.9ರಂದು ಮಧ್ಯಾಹ್ನ ಚಿಕ್ಕಕೆರೆಯಲ್ಲಿ ತೇಲುತ್ತಿದ್ದ ಅಪರಿಚಿತ ಶವದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಬಸ್‌ಪೇಟೆ ಎಸ್‌.ಕೆ ಸ್ಟೀಲ್‌ ಹೋಲ್‌ಸೇಲ್‌ ಅಂಗಡಿಯಿಂದ ಕಬ್ಬಿಣ ತುಂಬಿದ ಲಾರಿ ಮೈಸೂರಿಗೆ ತೆರಳುತ್ತಿದ್ದ ವೇಳೆ ಲಾರಿ ಸಮೇತ ಅಪಹರಿಸಿದ್ದ ಕಳ್ಳರ ಗುಂಪು, ಕಬ್ಬಿಣ ಕಳವು ಮಾಡಿದ್ದಲ್ಲದೇ ಸಿಕ್ಕಿಬೀಳುವ ಅನುಮಾನದಲ್ಲಿ ಚಾಲಕನ ಕತ್ತು ಕೊಯ್ದು ಚಿಕ್ಕಕೆರೆಯಲ್ಲಿ ಎಸೆದು ಹೋಗಿದ್ದರು.

ಕೃತ್ಯಕ್ಕೆ ಬಳಸಿದ ಇನೋವಾ ಕಾರು, ಲಾಂಗ್‌ ಮತ್ತು ಒಂದು ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿ ತನ್ನ ವಿಳಾಸವನ್ನು ಎಸ್‌.ಕೆ.ಸ್ಟೀಲ್‌ ಮಾಲೀಕರಿಗೆ ತಪ್ಪಾಗಿ ಕೊಟ್ಟಿದ್ದರಿಂದ ಆತನ ಪತ್ತೆ ಹಚ್ಚುವುದೇ ಈಗ ಪೊಲೀಸರಿಗೆ ಸವಾಲಾಗಿದೆ. ಸಿಪಿಐ ಅಶೋಕ್‌ ಕುಮಾರ್‌ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾಧ ಅನಿಲ್‌ ಕುಮಾರ್‌, ಪುಟ್ಟೇಗೌಡ, ಮಂಜುನಾಥ್‌, ಪೇದೆಗಳಾದ ರವಿ, ಯೋಗೇಶ್‌, ಮಹಮ್ಮದ್‌, ಜಿಲಾನಿ, ಪರಮೇಶ್ವರ್‌, ರಂಗಸ್ವಾಮಿ ಕಾರ್ಯಾಚರಣೆ ನಡೆಸ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ