ಕುಣಿಗಲ್: ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಅಡ್ಡಿಪಡಿಸುವ ಕಾರ್ಯಕರ್ತರು, ಮುಖಂಡರು ಹಾಗೂ ಅಧಿಕಾರಿಗಳು ಯಾರೇ ಆದರೂ ಸರಿ ಅವರು ತಮ್ಮ ಮುಂದಿನ ಜಾಗವನ್ನು ನೋಡಿಕೊಳ್ಳಬಹುದು, ನಮ್ಮ ಅಭ್ಯಂತರ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಖಡಕ್ ಎಚ್ಚರಿಕೆ ನೀಡಿದರು.
ಕುಣಿಗಲ್ ತಾಲೂಕಿನ ಗಿರಿಗೌಡನಪಾಳ್ಯ ಗೇಟ್ ಬಳಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಡಾ.ರಂಗನಾಥ್ ಅವರ ಮೇಲೆ ವಿಶ್ವಾಸವಿಟ್ಟು ಪಕ್ಷ ಬೇಧ, ಜಾತಿ, ಸಮುದಾಯ ಮರೆತು ಮತ ನೀಡಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಅವರನ್ನು ಗೆಲ್ಲಿಸಿದ್ದಾರೆ. ಈ ಸಂಬಂಧ ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಶಾಸಕ ಡಾ.ರಂಗನಾಥ್ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಅವರಿಗೆ ರಾಜಕೀಯ ಗೊತ್ತಿಲ್ಲ, ಗೊತ್ತಾಗುವುದು ಬೇಡ. ಅವರು ಸಾಮಾನ್ಯ ವ್ಯಕ್ತಿಯಾಗೇ ಇರಲಿ. ರಾಜಕೀಯ ಅಂದರೇ ನಾಟಕ, ಸುಳ್ಳು, ಡಬ್ಬಲ್ ಗೇಮ್, ಅದನ್ನು ಅವರಿಗೆ ಕಲಿಸಬೇಡಿ. ನಮ್ಮ ಗುರಿ ಒಂದೇ ಕುಣಿಗಲ್ ತಾಲೂಕನ್ನು ಸಮಗ್ರ ಅಭಿವೃದ್ಧಿಪಡಿಸುವುದು ಎಂದರು.
ವೈಕೆಆರ್ ಹುಚ್ಚಮಾಸ್ತಿಗೌಡ ಅವರಂತೆ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಕುಣಿಗಲ್ ತಾಲೂಕನ್ನು ಅಭಿವೃದ್ಧಿಪಡಿಸಲು ನಿಮ್ಮ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಯೋಚನೆ ಮಾಡಿ ತಾಲೂಕಿನ ಅಭಿವೃದ್ಧಿಯ ಬಗ್ಗೆ ಕನಸು ಇರಲಿ. ಈ ಸಂಬಂಧ ನಮ್ಮ ಅಭಿವೃದ್ಧಿ ವಿಚಾರದಲ್ಲಿ ಯಾರೂ ಅಡೆತಡೆ ಮಾಡಬೇಡಿ ಎಂದು ಪಕ್ಷ ದ ಕಾರ್ಯಕರ್ತರು, ಮುಖಂಡರು ಸೇರಿದಂತೆ ಅಧಿಕಾರಿಗಳಿಗೂ ಎಚ್ಚರಿಕೆಯ ಚಾಟಿ ಬೀಸಿದರು.
ತಾಲೂಕಿನ ಅಭಿವೃದ್ಧಿಯ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸಹಕಾರ ಕೊಡಿ, ರಾಜಕೀಯ ಮಾಡಬೇಡಿ. ಚುನಾವಣೆ ಬಂದಾಗ ರಾಜಕೀಯ ಮಾಡಿ ನಮಗೆ ಬೇಸರ ಇಲ್ಲ ಎಂದು ತಿಳಿಸಿದ ಅವರು, ಮೊದಲಿಗೆ ತಾಲೂಕು ಅಡಳಿತದಲ್ಲಿ ಸುಧಾರಣೆ ತರಬೇಕಾಗಿದೆ. ತಾಲೂಕು ಕಚೇರಿ ಸೇರಿದಂತೆ ಗ್ರಾಪಂ ಕಚೇರಿಯಲ್ಲಿಯೂ ರೈತರಿಗೆ ಸಾಮಾನ್ಯ ವ್ಯಕ್ತಿಗೂ ಗೌರವ ಸಲ್ಲಬೇಕಾಗಿದೆ. ಈ ಸಂಬಂಧ ಜೂ.23ರಂದು ಕೆಡಿಪಿ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ಖುದ್ದು ತಾವು ಭಾಗಿಯಾಗಿ ಅಡಳಿತ ಸರಿಪಡಿಸುವ ಕೆಲಸ ಮಾಡಲಾಗುವುದೆಂದು ತಿಳಿಸಿದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಸಾಮಾನ್ಯ ರೈತ ಕುಟುಂಬದ ಮಗನಾದ ತಾವು ಕುಣಿಗಲ್ ತಾಲೂಕಿನಲ್ಲಿ ಇಷ್ಟೊಂದು ಅಭಿಮಾನ ಸಂಪಾದಿಸುತ್ತೇನೆ ಎಂದು ಕನಸು ಕಂಡಿರಲಿಲ್ಲ. ತಾಲೂಕಿನ ಮಹಿಳೆಯ ಆಶಯದಂತೆ ಎರಡು ತಿಂಗಳಲ್ಲಿ ಅಕ್ರಮ ಮದ್ಯ ಮಾರಾಟ ಮುಕ್ತ ತಾಲೂಕು ಮಾಡುವುದು. ತಾಲೂಕಿನ ಪಾಲಿನ ಹೇಮಾವತಿ ನೀರು ಹರಿಸುವುದು ಹಾಗೂ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡುವುದರ ಜತೆಗೆ ಕೃಷಿಕರಿಗೆ ನೀರಾವರಿ ಯೋಜನೆ ಕಲ್ಪಿಸುವುದೇ ತಮ್ಮ ಮುಖ್ಯ ಗುರಿ ಎಂದು ತಿಳಿಸಿದರು.
ಬಾಡೂಟ ಮೂಲಕ ಅಭಿನಂದನೆ
ಶಾಸಕ ಡಾ.ರಂಗನಾಥ್ ತಮ್ಮ ಗೆಲುವಿಗೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗು ಮುಖಂಡರಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಒಂದು ರೀತಿಯಲ್ಲಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವೂ ಹೌದು, ಇನ್ನೊಂದು ಕಡೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸುವ ಪೂರ್ವಬಾವಿ ಸಭೆಯೂ ಅದಾಗಿತ್ತು. ಸಮಾರಂಭದಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ಬಹುತೇಕ ಮುಖಂಡರು ಭಾಷಣ ಮಾಡಿದ್ದು ವಿಶೇಷವಾಗಿತ್ತು.
ಬಾಕ್ಸ್
ಮಧ್ಯದಲ್ಲಿ ಕೈ ಬಿಡಬೇಡಿ
ಸಂಸದ ಡಿ.ಕೆ. ಸುರೇಶ್ ಅವರ ಭಾಷಣಕ್ಕೂ ಮುನ್ನ ಮುಂದಿನ ಕೇಂದ್ರ ಸಚಿವರಾದ ಡಿ.ಕೆ.ಸುರೇಶ್ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ಮಾತಿಗೆ ತಿರುಗೇಟು ನೀಡಿದ ಸಂಸದ ಡಿ.ಕೆ.ಸುರೇಶ್, ರೈಲು ಹತ್ತಿಸುವುದನ್ನು ಮೊದಲು ಬಿಡಿ, ನಾನೇನು ಹತ್ತುವುದಿಲ್ಲ. ಆದರೆ ನೂತನ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರನ್ನು ಹತ್ತಿಸಿ ಮಧ್ಯದಲ್ಲಿ ಕೈ ಬಿಡಬೇಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಜಿಪಂ ಸದಸ್ಯೆ ಅನಸೂಯಮ್ಮ ವೈಕೆಆರ್, ತಾಪಂ ಸದಸ್ಯರಾದ ಐ.ಎ.ವಿಶ್ವನಾಥ್, ಕೆಂಪೇಗೌಡ, ರಾಜು, ಪುರಸಭೆ ಅಧ್ಯಕ್ಷೆ ನಳಿನಾ, ಉಪಾಧ್ಯಕ್ಷ ಅರುಣ್ ಕುಮಾರ್, ಮುಖಂಡರಾದ ಕೆಂಪೀರೇಗೌಡ, ಅಡಿಟರ್ ನಾಗರಾಜು, ಶಿವರಾಮಿ, ರೆಹಮಾನ್ ಷರೀಫ್, ಹಾಲವಾಗಲ ಸ್ವಾಮಿ, ಬೋರೇಗೌಡ, ಐ.ಜಿರಮೇಶ್, ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ರಂಗಣ್ಣಗೌಡ, ವೆಂಕಟರಾಮು, ನಗರ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಮುಂತಾದವರು ಹಾಜರಿದ್ದರು.
ಕುಣಿಗಲ್ ತಾಲೂಕಿನ ಗಿರಿಗೌಡನಪಾಳ್ಯ ಗೇಟ್ ಬಳಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಡಾ.ರಂಗನಾಥ್ ಅವರ ಮೇಲೆ ವಿಶ್ವಾಸವಿಟ್ಟು ಪಕ್ಷ ಬೇಧ, ಜಾತಿ, ಸಮುದಾಯ ಮರೆತು ಮತ ನೀಡಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಅವರನ್ನು ಗೆಲ್ಲಿಸಿದ್ದಾರೆ. ಈ ಸಂಬಂಧ ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಶಾಸಕ ಡಾ.ರಂಗನಾಥ್ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಅವರಿಗೆ ರಾಜಕೀಯ ಗೊತ್ತಿಲ್ಲ, ಗೊತ್ತಾಗುವುದು ಬೇಡ. ಅವರು ಸಾಮಾನ್ಯ ವ್ಯಕ್ತಿಯಾಗೇ ಇರಲಿ. ರಾಜಕೀಯ ಅಂದರೇ ನಾಟಕ, ಸುಳ್ಳು, ಡಬ್ಬಲ್ ಗೇಮ್, ಅದನ್ನು ಅವರಿಗೆ ಕಲಿಸಬೇಡಿ. ನಮ್ಮ ಗುರಿ ಒಂದೇ ಕುಣಿಗಲ್ ತಾಲೂಕನ್ನು ಸಮಗ್ರ ಅಭಿವೃದ್ಧಿಪಡಿಸುವುದು ಎಂದರು.
ವೈಕೆಆರ್ ಹುಚ್ಚಮಾಸ್ತಿಗೌಡ ಅವರಂತೆ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಕುಣಿಗಲ್ ತಾಲೂಕನ್ನು ಅಭಿವೃದ್ಧಿಪಡಿಸಲು ನಿಮ್ಮ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಯೋಚನೆ ಮಾಡಿ ತಾಲೂಕಿನ ಅಭಿವೃದ್ಧಿಯ ಬಗ್ಗೆ ಕನಸು ಇರಲಿ. ಈ ಸಂಬಂಧ ನಮ್ಮ ಅಭಿವೃದ್ಧಿ ವಿಚಾರದಲ್ಲಿ ಯಾರೂ ಅಡೆತಡೆ ಮಾಡಬೇಡಿ ಎಂದು ಪಕ್ಷ ದ ಕಾರ್ಯಕರ್ತರು, ಮುಖಂಡರು ಸೇರಿದಂತೆ ಅಧಿಕಾರಿಗಳಿಗೂ ಎಚ್ಚರಿಕೆಯ ಚಾಟಿ ಬೀಸಿದರು.
ತಾಲೂಕಿನ ಅಭಿವೃದ್ಧಿಯ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸಹಕಾರ ಕೊಡಿ, ರಾಜಕೀಯ ಮಾಡಬೇಡಿ. ಚುನಾವಣೆ ಬಂದಾಗ ರಾಜಕೀಯ ಮಾಡಿ ನಮಗೆ ಬೇಸರ ಇಲ್ಲ ಎಂದು ತಿಳಿಸಿದ ಅವರು, ಮೊದಲಿಗೆ ತಾಲೂಕು ಅಡಳಿತದಲ್ಲಿ ಸುಧಾರಣೆ ತರಬೇಕಾಗಿದೆ. ತಾಲೂಕು ಕಚೇರಿ ಸೇರಿದಂತೆ ಗ್ರಾಪಂ ಕಚೇರಿಯಲ್ಲಿಯೂ ರೈತರಿಗೆ ಸಾಮಾನ್ಯ ವ್ಯಕ್ತಿಗೂ ಗೌರವ ಸಲ್ಲಬೇಕಾಗಿದೆ. ಈ ಸಂಬಂಧ ಜೂ.23ರಂದು ಕೆಡಿಪಿ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ಖುದ್ದು ತಾವು ಭಾಗಿಯಾಗಿ ಅಡಳಿತ ಸರಿಪಡಿಸುವ ಕೆಲಸ ಮಾಡಲಾಗುವುದೆಂದು ತಿಳಿಸಿದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಸಾಮಾನ್ಯ ರೈತ ಕುಟುಂಬದ ಮಗನಾದ ತಾವು ಕುಣಿಗಲ್ ತಾಲೂಕಿನಲ್ಲಿ ಇಷ್ಟೊಂದು ಅಭಿಮಾನ ಸಂಪಾದಿಸುತ್ತೇನೆ ಎಂದು ಕನಸು ಕಂಡಿರಲಿಲ್ಲ. ತಾಲೂಕಿನ ಮಹಿಳೆಯ ಆಶಯದಂತೆ ಎರಡು ತಿಂಗಳಲ್ಲಿ ಅಕ್ರಮ ಮದ್ಯ ಮಾರಾಟ ಮುಕ್ತ ತಾಲೂಕು ಮಾಡುವುದು. ತಾಲೂಕಿನ ಪಾಲಿನ ಹೇಮಾವತಿ ನೀರು ಹರಿಸುವುದು ಹಾಗೂ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡುವುದರ ಜತೆಗೆ ಕೃಷಿಕರಿಗೆ ನೀರಾವರಿ ಯೋಜನೆ ಕಲ್ಪಿಸುವುದೇ ತಮ್ಮ ಮುಖ್ಯ ಗುರಿ ಎಂದು ತಿಳಿಸಿದರು.
ಬಾಡೂಟ ಮೂಲಕ ಅಭಿನಂದನೆ
ಶಾಸಕ ಡಾ.ರಂಗನಾಥ್ ತಮ್ಮ ಗೆಲುವಿಗೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗು ಮುಖಂಡರಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಒಂದು ರೀತಿಯಲ್ಲಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವೂ ಹೌದು, ಇನ್ನೊಂದು ಕಡೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸುವ ಪೂರ್ವಬಾವಿ ಸಭೆಯೂ ಅದಾಗಿತ್ತು. ಸಮಾರಂಭದಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ಬಹುತೇಕ ಮುಖಂಡರು ಭಾಷಣ ಮಾಡಿದ್ದು ವಿಶೇಷವಾಗಿತ್ತು.
ಬಾಕ್ಸ್
ಮಧ್ಯದಲ್ಲಿ ಕೈ ಬಿಡಬೇಡಿ
ಸಂಸದ ಡಿ.ಕೆ. ಸುರೇಶ್ ಅವರ ಭಾಷಣಕ್ಕೂ ಮುನ್ನ ಮುಂದಿನ ಕೇಂದ್ರ ಸಚಿವರಾದ ಡಿ.ಕೆ.ಸುರೇಶ್ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ಮಾತಿಗೆ ತಿರುಗೇಟು ನೀಡಿದ ಸಂಸದ ಡಿ.ಕೆ.ಸುರೇಶ್, ರೈಲು ಹತ್ತಿಸುವುದನ್ನು ಮೊದಲು ಬಿಡಿ, ನಾನೇನು ಹತ್ತುವುದಿಲ್ಲ. ಆದರೆ ನೂತನ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರನ್ನು ಹತ್ತಿಸಿ ಮಧ್ಯದಲ್ಲಿ ಕೈ ಬಿಡಬೇಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಜಿಪಂ ಸದಸ್ಯೆ ಅನಸೂಯಮ್ಮ ವೈಕೆಆರ್, ತಾಪಂ ಸದಸ್ಯರಾದ ಐ.ಎ.ವಿಶ್ವನಾಥ್, ಕೆಂಪೇಗೌಡ, ರಾಜು, ಪುರಸಭೆ ಅಧ್ಯಕ್ಷೆ ನಳಿನಾ, ಉಪಾಧ್ಯಕ್ಷ ಅರುಣ್ ಕುಮಾರ್, ಮುಖಂಡರಾದ ಕೆಂಪೀರೇಗೌಡ, ಅಡಿಟರ್ ನಾಗರಾಜು, ಶಿವರಾಮಿ, ರೆಹಮಾನ್ ಷರೀಫ್, ಹಾಲವಾಗಲ ಸ್ವಾಮಿ, ಬೋರೇಗೌಡ, ಐ.ಜಿರಮೇಶ್, ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ರಂಗಣ್ಣಗೌಡ, ವೆಂಕಟರಾಮು, ನಗರ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಮುಂತಾದವರು ಹಾಜರಿದ್ದರು.