ಆ್ಯಪ್ನಗರ

ಸಂಜೆಗತ್ತಲಿನಲ್ಲಿ ನಿದ್ರಾವಸ್ಥೆಯಲ್ಲಿದೆ ಕೆರೆ ಏರಿ, ಹುಷಾರ್‌...?

ಸೂರ್ಯಾಸ್ತವಾದೊಡನೆ ಕೆರೆ ಏರಿ ಕತ್ತಲು ತೊಲಗಿಸಿ ವಿದ್ಯುತ್‌ ದೀಪಗಳು ಬೆಳಗಬೇಕು ಎಂಬುದು ಇಲ್ಲಿನ ಮಟ್ಟಿಗೆ ಸಂಪೂರ್ಣ ಸತ್ಯವಲ್ಲ! ಏಕೆಂದರೆ ಇಲ್ಲಿ ಅಳವಡಿಸಿರುವ ಬೀದಿ ದೀಪಗಳು ಅಂಧಕಾರದಲ್ಲಿರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ.

Vijaya Karnataka 28 Aug 2018, 8:58 pm
*ಸಿರಾಜ್‌ ಅಹಮದ್‌ ಕೆ.ಎ
Vijaya Karnataka Web doddamalur lake story
ಸಂಜೆಗತ್ತಲಿನಲ್ಲಿ ನಿದ್ರಾವಸ್ಥೆಯಲ್ಲಿದೆ ಕೆರೆ ಏರಿ, ಹುಷಾರ್‌...?

ಕೊಡಿಗೇನಹಳ್ಳಿ: ಸೂರ್ಯಾಸ್ತವಾದೊಡನೆ ಕೆರೆ ಏರಿ ಕತ್ತಲು ತೊಲಗಿಸಿ ವಿದ್ಯುತ್‌ ದೀಪಗಳು ಬೆಳಗಬೇಕು ಎಂಬುದು ಇಲ್ಲಿನ ಮಟ್ಟಿಗೆ ಸಂಪೂರ್ಣ ಸತ್ಯವಲ್ಲ! ಏಕೆಂದರೆ ಇಲ್ಲಿ ಅಳವಡಿಸಿರುವ ಬೀದಿ ದೀಪಗಳು ಅಂಧಕಾರದಲ್ಲಿರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ.

ಹೌದು, ಹೋಬಳಿಯ ದೊಡ್ಡಮಾಲೂರು ಕೆರೆ ಏರಿಯನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ವೆಂಕಟಾಪುರದಿಂದ ದೊಡ್ಡಮಾಲೂರಿನವರೆಗೆ 1 ಕಿ.ಮೀ. ಕೆರೆ ಏರಿ ವಿಸ್ತರಣೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 2015ರಲ್ಲಿ 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಒಟ್ಟು 25 ವಿದ್ಯತ್‌ ಬೀದಿ ದೀಪಗಳನ್ನು ಅಳವಡಿಸಿದೆ.

ಆದರೆ, ಕೆರೆ ಏರಿ ಅಭಿವೃದ್ಧಿಯಾದ ಮೂರು ವರ್ಷದಲ್ಲಿ 25 ಬೀದಿ ದೀಪಗಳು ಕೆಟ್ಟು ಹೋಗಿರುವುದು ಒಂದೆಡೆಯಾದÃ,æ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕೆಲವೊಂದರಲ್ಲಿ ಬಲ್ಬ್ಗಳೇ ಕಾಣೆಯಾಗಿವೆ. ಇನ್ನು ರಸ್ತೆ ಗುಂಡಿ ಬಿದ್ದಿದ್ದು, ತ್ಯಾಪೆ ಹಾಕಲಾಗುತ್ತಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಬೆಳ್ಳಂಬೆಳಗ್ಗೆ ಸುತ್ತಮುತ್ತ ಹಳ್ಳಿಗರು ಹೂವು, ಹಣ್ಣು ಮಾರಲು ಹಲವಾರು ಹೋಬಳಿ ಕೇಂದ್ರಕ್ಕೆ ಇದೇ ರಸ್ತೆಯಲ್ಲಿ ಬರುತ್ತಾರೆ. ಹೊಟ್ಟೆಪಾಡಿಗೆ ನಾಲ್ಕಾರು ಕಾಸು ದುಡಿದು ಹಿಂದಿರುಗಬೇಕಾದರೆ ಸಂಜೆ 7 ಗಂಟೆಯಾಗುತ್ತದೆ. ಸಂಜೆಯಾದರೆ ಹೂ ವ್ಯಾಪಾರಿಗಳು ಹಾಗೂ ಹಣ್ಣಿನ ವ್ಯಾಪಾರಿಗಳು ಕೆರೆ ಏರಿ ಮೇಲೆ ಪಾದ ಬೆಳೆಸಲು ಬಹುತೇಕ ಹಿಂದೇಟು ಹಾಕುವಂತಾಗಿದೆ ಇಲ್ಲಿನ ಸ್ಥಿತಿ.

ಕಾಮಗಾರಿ ಮುಗಿದ ಮೇಲೆ ಇದರ ಜವಾಬ್ದಾರಿ ಸಂಬಂಧಪಟ್ಟ ಗ್ರಾಪಂಗೆ ಹಸ್ತಾಂತರವಾಗುತ್ತದೆ. ಅಳವಡಿಸಿರುವ ಬೀದಿ ದೀಪಗಳ ನಿರ್ವಹಣಾ ಜವಾಬ್ದಾರಿ ಸಹ ಗ್ರಾಪಂನದಾಗಿದ್ದರೂ ಯಾವ ಅಧಿಕಾರಿಯೂ ಇದರತ್ತ ಗಮನಹರಿಸುತ್ತಿಲ್ಲಎಂಬುದು ಇಲ್ಲಿನವರ ಆರೋಪ.

ವಾಯುವಿಹಾರಿಗಳಿಗೆ ತೊಂದರೆ: ಈ ಭಾಗದಲ್ಲಿ ಯಾವುದೇ ಪಾರ್ಕ್‌ ಹಾಗೂ ಕ್ರೀಡಾಂಗಣ ಇಲ್ಲದ ಕಾರಣ ನಿತ್ಯ ಬೆಳಗ್ಗೆ ವಾಯುವಿಹಾರಕ್ಕೆ ತೆರಳುವವರಿಗೆ ಈ ಕೆರೆ ಏರಿಯ ಕತ್ತಲು ಸಮಸ್ಯೆಯಾಗಿದೆ. ಕೆಲ ಹಿರಿಯರು ಕತ್ತಲಿನಲ್ಲಿ ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ.

ನಮಗ್ಯಾಕೆ ಬೇಕು?: ಕೆರೆ ಏರಿಯು ಎರಡು ಪಂಚಾಯಿತಿಗಳ ಮಧ್ಯಭಾಗದಲ್ಲಿದ್ದು, ದೊಡ್ಡಮಾಲೂರು ಗ್ರಾಪಂಗೆ ಸೇರಿದ್ದು ಅಂತ ಕೆಲವರು, ಚಿಕ್ಕಮಾಲೂರು ಗ್ರಾಪಂ ಸೇರಿದ್ದು ಅಂತ ಮತ್ತೆ ಕೆಲವರು. ಹೀಗೆ ಒಬ್ಬರ ಮೇಲೊಬ್ಬರು ದೂರುತ್ತಾ, ಕಾಲೆ ಕಳೆಯುತ್ತಿದ್ದು ಯಾರಿಗೆ ಸೇರಿದೆ ಎಂಬುದು ಎರಡು ಗ್ರಾಪಂ ಅಧಿಕಾರಿಗಳಿಗೆ ಇನ್ನೂ ಗೊಂದಲವಾಗಿ ಕಾಡುತ್ತಿದೆ. ನಮಗ್ಯಾಕೆ ಬೇಕು ಎಂದು ಒಬ್ಬರ ಮೇಲೊಬ್ಬರು ಜಾಣತನ ತೋರುತ್ತಿದ್ದು, ಕಾಮಗಾರಿ ಮುಗಿಸಿದ ಗುತ್ತಿಗೆದಾರ ಯಾರಿಗೆ ಹಸ್ತಾಂತರಿಸಿದ್ದಾನೆ ಎಂಬುದು ಇಲ್ಲಿನ ಯಕ್ಷ ಪ್ರಶ್ನೆಯಾಗಿದೆ.

ಕೋಟ್‌

ಮಳೆ ಬಂದಿರುವ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಗುಂಡಿಗಳು ಬಿದ್ದಿದ್ದು, ಅದನ್ನು ಮುಚ್ಚಲಾಗಿದೆ. ಕಾಮಗಾರಿ ಮುಗಿದ ನಂತರ ದೊಡ್ಡಮಾಲೂರು ಗ್ರಾಪಂಗೆ ಹಸ್ತಾಂತರಿಸಲಾಗಿದೆ.
-ತಿಪ್ಪೇಸ್ವಾಮಿ ಪಿಡಬ್ಲ್ಯೂಡಿ, ಎಇಇ

ನಮ್ಮ ಇಲಾಖೆಯಿಂದ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆ ಇಲ್ಲ. ಬೀದಿ ದೀಪಗಳ ನಿರ್ವಹಣೆ ಜವಾಬ್ದಾರಿ ಗ್ರಾಪಂಗೆ ಸೇರಿದ್ದು, ನಮ್ಮಿಂದ ತೊಂದರೆ ಇದ್ದರೆ ಇಂದೇ ಕಳುಹಿಸಿಕೊಡುತ್ತೇನೆ.
-ಪ್ರವೀಣಕುಮಾರ್‌, ಬೆಸ್ಕಾಂ ಪ್ರಭಾರ ಎಇಇ

ಕೆರೆ ಏರಿಯ ಅರ್ಧಭಾಗದ ಲೈಟಿಂಗ್ಸ್‌ ಮಾತ್ರ ನಮಗೆ ಸೇರಿದ್ದು, ಸೆನ್ಸಾರ್‌ ಟೈಮಿಂಗ್‌ ಸೆಟ್‌ ಮಾಡಿಸಬೇಕಿದೆ. ಅವರಿಗೆ ಹೇಳಿದ್ದೇನೆ, ಶೀಘ್ರದಲ್ಲೇ ದುರಸ್ತಿಗೊಳಿಸುತ್ತೇವೆ.
-ದೊಡ್ಡಮಾಲೂರು ಪಿಡಿಒ

ಶಿವರಾಜು ಎಂಬ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಇದೀಗ ನಿವೃತ್ತರಾಗಿದ್ದು, ಹಿಂದೆ ಚರ್ಚಿಸಿದಾಗ ದೊಡ್ಡಮಾಲೂರು ಗ್ರಾಪಂಗೆ ಹಸ್ತಾಂತರವಾಗಿದೆ ಎಂದು ತಿಳಿಸಿದ್ದರು. ಲೈಟಿಂಗ್‌ ಸಂಬಂಧಪಟ್ಟ ವಿಷಯ ಗ್ರಾಪಂನದ್ದು, ರಸ್ತೆಯ ಜವಾಬ್ದಾರಿ ನಮ್ಮ ಇಲಾಖೆಯದ್ದಾಗಿರುತ್ತದೆ.
-ಹೆಸರು ಹೇಳಲಿಚ್ಛಿಸಿದ ಪಿಡಬ್ಲ್ಯೂಡಿ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ