ಆ್ಯಪ್ನಗರ

ಹನಿ ನೀರಾವರಿಗೆ ಹೆಚ್ಚು ಒತ್ತು ನೀಡಲು ಕರೆ: ರೇಷ್ಮೆ ಇಲಾಖೆ ವತಿಯಿಂದ ಜನಸ್ಪಂದನಾಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ

ಸರಕಾರದಿಂದ ಬರುವ ಯಾವುದೇ ಯೋಜನೆಗಳನ್ನು ಪಡೆಯಲು ಮಧ್ಯವರ್ತಿಗಳ ಮೊರೆ ಹೋಗಬಾರದೆಂದು ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಆಯೋಜಿಸಿದ್ದು ಎರಡನೇ ಹಂತದಲ್ಲಿ ಪಂಚಾಯಿತಿ ವಾರು ಹಮ್ಮಿಕೊಳ್ಳಲಾಗುವುದು, ಕೊರೊನಾದಿಂದ ಕಾರ್ಖಾನೆಗಳು ಬಂದ್ ಆದ ಪರಿಣಾಮ ರೇಷ್ಮೆ ಬೆಳೆ ಇಳಿಕೆಯಾಗಿತ್ತು,

Vijaya Karnataka Web 1 Oct 2020, 10:21 pm
ಕೊಡಿಗೇನಹಳ್ಳಿ (ಮಧುಗಿರಿ ತಾ): ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯವಿದೆ ಆದರೆ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿದರೆ ಕಡಿಮೆ ಕರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು ಎಂದು ರೇಷ್ಮೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ ವೈ.ಕೆ ಬಾಲಕೃಷ್ಣಪ್ಪ ತಿಳಿಸಿದರು.
Vijaya Karnataka Web ಜನಸ್ಪಂದನಾ
ಜನಸ್ಪಂದನಾ


ಹೋಬಳಿಯ ದೇವರತೋಪಿನಲ್ಲಿ ರೇಷ್ಮೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಹನಿ ನೀರಾವರಿ ಅಳವಡಿಸಿರುವ ರೈತರಿಗೆ 1 ಕೋಟಿ 10 ಲಕ್ಷ ಸಹಾಯ ಧನ ಬಿಡುಗಡೆ ಮಾಡಲಾಗಿದೆ, ಸರಕಾರ ನೀಡುವ ಪ್ರೋತ್ಸಾಹ ಧನವನ್ನು ಈಗಾಗಲೇ ಮಾರುಕಟ್ಟೆಗೆ ಕಳುಹಿಸಿಲಾಗಿದ್ದು ಅತಿ ಶೀಘ್ರದಲ್ಲೇ ಬೆಳೆಗಾರರ ಖಾತೆಗೆ ಜಮೆಯಾಗುತ್ತದೆ ಎಂದರು.

ಸರಕಾರದಿಂದ ಬರುವ ಯಾವುದೇ ಯೋಜನೆಗಳನ್ನು ಪಡೆಯಲು ಮಧ್ಯವರ್ತಿಗಳ ಮೊರೆ ಹೋಗಬಾರದೆಂದು ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಆಯೋಜಿಸಿದ್ದು ಎರಡನೇ ಹಂತದಲ್ಲಿ ಪಂಚಾಯಿತಿ ವಾರು ಹಮ್ಮಿಕೊಳ್ಳಲಾಗುವುದು, ಕೊರೊನಾದಿಂದ ಕಾರ್ಖಾನೆಗಳು ಬಂದ್ ಆದ ಪರಿಣಾಮ ರೇಷ್ಮೆ ಬೆಳೆ ಇಳಿಕೆಯಾಗಿತ್ತು, ಇದೀಗ ಬೇಡಿಕೆ ಹೆಚ್ಚಾಗುತ್ತಿದ್ದು ಬೆಲೆ ಏರಿಕೆಯಾಗುವ ಭರವಸೆ ಇದೆ, ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ವಿಜ್ಞಾನಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದರು.

ಸಹಾಯಕ ನಿರ್ದೇಶಕ ಸಿ.ಎ ನಾಗರಾಜು ಮಾತನಾಡಿ ಹಿಪ್ಪು ನೇರಳೆ ಬಹು ವಾರ್ಷಿಕ ಬೆಳೆಯಾಗಿದ್ದು ಮಣ್ಣಿನ ಫಲವತ್ತತೆ, ಶುಚಿತ್ವ ಇದರ ಜತೆ ಮಣ್ಣಿನ ಪರೀಕ್ಷೆ ಮಾಡಿಸಬೇಕು ಸುಣ್ಣಕಟ್ಟು ರೋಗ ಮತ್ತು ಎಲೆ ಸುರುಳಿ ರೋಗ ನಿಯಂತ್ರಿಸಿದ ಹೆಚ್ಚು ಇಳುವರಿ ಪಡೆಯಬಹುದು, ರೋಗ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು ಔಷಧಿ ಪೂರೈಕೆಗಾಗಿ ಅನುದಾನ ಕೋರಲಾಗಿದೆ ಎಂದರು.

24/7 ಕರ್ತವ್ಯ
ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ರೈತರಿಗೆ ತೊಂದರೆಯಾಗಬಾರದೆಂದು ಇಂದಿನಿಂದ 7 ವರೆಗೆ 24/7 ಕರ್ತವ್ಯ ನಿರ್ವಹಿಸಲು ತೀರ್ಮಾನಿಸಿದ್ದು ಶನಿವಾರ ಭಾನುವಾರ ಕೆಲಸ ಮಾಡಿದ್ದು ಸರಕಾರಿ ವ್ಯವಸ್ಥೆ ಬಿಗಿಯಾಗಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿ ಸರಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು, ನೂರಕ್ಕೆ ನೂರು ಭಾಗ ಹನಿ ನೀರಾವರಿ ಅಳವಡಿಸಿ ನೀರಿನ ಮಹತ್ವ ಕಾಪಾಡಿಕೊಳ್ಳಿ ಎಂದು ಅಧಿಕಾರಿಗಳು ಮನವಿ ಮಾಡಿದರು.

ಸಭೆಯಲ್ಲಿ ರೈತರು ಸಂತಸದಿಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಕೆ.ಸಿ ನರಸರೆಡ್ಡಿ, ರೇಷ್ಮೆ ನಿಸ್ತಾರಣಾಧಿಕಾರಿಗಳಾದ ಎಸ್, ರಾಜು, ಬಿ,ಜಿ ಗಂಗಾಧರಯ್ಯ, ಎಂ,ವಿ ರಾಮಕೃಷ್ಣ, ರೈತ ಮುಖಂಡರಾದ ಅಂಜಿನಪ್ಪ ಚಿಕ್ಕಣ್ಣ, ರಾಜಗೋಪಾಲ ರೆಡ್ಡಿ, ಜೈರಾಮಣ್ಣ ಹಾಗೂ ರೈತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ