ತುರುವೇಕೆರೆ:
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ತಾಲೂಕು ಆಡಳಿತ ಈ ನಿಟ್ಟಿನಲ್ಲಿ ಕೈಗೊಂಡಿರುವ ಪೂರ್ವತಯಾರಿ, ಪರಿವೀಕ್ಷ ಣೆಗಾಗಿ ಶನಿವಾರ ಜಿಲ್ಲಾಧಿಕಾರಿ ರಾಕೇಶ್ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೃಷ್ಣವಂಶಿ ಅವರು ತಾಲೂಕಿಗೆ ಭೇಟಿ ನೀಡಿದ್ದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಎಆರ್ಒ, ಚುನಾವಣಾ ಸಿಬ್ಬಂದಿ ಹಾಗೂ ಸ್ಥಳೀಯ ಸಿಪಿಐ, ಎಸ್ಐ ಸೇರಿದಂತೆ ಇನ್ನಿತರ ಅಧಿಕಾರಿಗಳ ಜತೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯಕ್ರಮ, ಈಗಾಗಲೇ ನಡೆಸಿರುವ ಪೂರ್ವತಯಾರಿ ಸಿದ್ಧತೆ ಕುರಿತಂತೆ ಚರ್ಚಿಸಿದರು. ಆನಂತರ ತಾಲೂಕಿನ ಸೊರವನಹಳ್ಳಿ ವೃತ್ತ, ಗುಡ್ಡೇನಹಳ್ಳಿ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ, ತಪಾಸಣೆ ವಿಚಾರದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗೆಗೆ ಅಲ್ಲಿನ ಸಿಬ್ಬಂದಿ ಜತೆ ಚರ್ಚೆ ಮಾಡಿದರು.
ಚುನಾವಣೆಗಾಗಿ ತಾಲೂಕಿನಾದ್ಯಂತ ಗುರುತಿಸಿರುವ 229 ಮತಗಟ್ಟೆಗಳಲ್ಲಿ ಪೂರಕ ಸೌಲಭ್ಯಗಳೊಂದಿಗೆ ಕೈಗೊಳ್ಳಬೇಕಾದ ಸಿದ್ಧತೆಗಳು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಸಮುಚ್ಛಯದಲ್ಲಿ ಉದ್ದೇಶಿಸಿರುವ ಚುನಾವಣಾ ಮಸ್ಟರಿಂಗ್ ಹಾಗೂ ಡಿ.ಮಸ್ಟರಿಂಗ್ ಕಾರ್ಯಗಳ ಸ್ಥಳಗಳನ್ನು ವೀಕ್ಷಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಬಗೆಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಯೀಂ ಉನ್ನಿಸಾ, ಎ.ಆರ್.ಒ ಶಶಿಧರ್, ತಾಪಂ ಇಒ ಗಂಗಾಧರ್, ಸಿಪಿಐ ಮೊಹಮದ್ ಸಲೀಂ, ಎಸ್ಐ ರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ತಾಲೂಕು ಆಡಳಿತ ಈ ನಿಟ್ಟಿನಲ್ಲಿ ಕೈಗೊಂಡಿರುವ ಪೂರ್ವತಯಾರಿ, ಪರಿವೀಕ್ಷ ಣೆಗಾಗಿ ಶನಿವಾರ ಜಿಲ್ಲಾಧಿಕಾರಿ ರಾಕೇಶ್ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೃಷ್ಣವಂಶಿ ಅವರು ತಾಲೂಕಿಗೆ ಭೇಟಿ ನೀಡಿದ್ದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಎಆರ್ಒ, ಚುನಾವಣಾ ಸಿಬ್ಬಂದಿ ಹಾಗೂ ಸ್ಥಳೀಯ ಸಿಪಿಐ, ಎಸ್ಐ ಸೇರಿದಂತೆ ಇನ್ನಿತರ ಅಧಿಕಾರಿಗಳ ಜತೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯಕ್ರಮ, ಈಗಾಗಲೇ ನಡೆಸಿರುವ ಪೂರ್ವತಯಾರಿ ಸಿದ್ಧತೆ ಕುರಿತಂತೆ ಚರ್ಚಿಸಿದರು. ಆನಂತರ ತಾಲೂಕಿನ ಸೊರವನಹಳ್ಳಿ ವೃತ್ತ, ಗುಡ್ಡೇನಹಳ್ಳಿ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ, ತಪಾಸಣೆ ವಿಚಾರದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗೆಗೆ ಅಲ್ಲಿನ ಸಿಬ್ಬಂದಿ ಜತೆ ಚರ್ಚೆ ಮಾಡಿದರು.
ಚುನಾವಣೆಗಾಗಿ ತಾಲೂಕಿನಾದ್ಯಂತ ಗುರುತಿಸಿರುವ 229 ಮತಗಟ್ಟೆಗಳಲ್ಲಿ ಪೂರಕ ಸೌಲಭ್ಯಗಳೊಂದಿಗೆ ಕೈಗೊಳ್ಳಬೇಕಾದ ಸಿದ್ಧತೆಗಳು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಸಮುಚ್ಛಯದಲ್ಲಿ ಉದ್ದೇಶಿಸಿರುವ ಚುನಾವಣಾ ಮಸ್ಟರಿಂಗ್ ಹಾಗೂ ಡಿ.ಮಸ್ಟರಿಂಗ್ ಕಾರ್ಯಗಳ ಸ್ಥಳಗಳನ್ನು ವೀಕ್ಷಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಬಗೆಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಯೀಂ ಉನ್ನಿಸಾ, ಎ.ಆರ್.ಒ ಶಶಿಧರ್, ತಾಪಂ ಇಒ ಗಂಗಾಧರ್, ಸಿಪಿಐ ಮೊಹಮದ್ ಸಲೀಂ, ಎಸ್ಐ ರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.