ಆ್ಯಪ್ನಗರ

ವಿದ್ಯುತ್‌ ಸ್ಪರ್ಶ; ಕಾರ್ಮಿಕ ಸಾವು

ಬೆಸ್ಕಾಂ ಇಲಾಖೆ ಮತ್ತು ಪವರ್‌ಗ್ರಿಡ್‌ ಅಧಿಕಾರಿಗಳ ದಿವ್ಯ ನಿರ್ಲಕ್ಷ ದಿಂದ ಪಶ್ಚಿಮ ಬಂಗಾಳದಿಂದ ಕೆಲಸಕ್ಕಾಗಿ ಬಂದಿದ್ದ ಕೂಲಿಕಾರ್ಮಿಕ ವಿದ್ಯುತ್‌ ಸ್ಪರ್ಶವಾಗಿ 11ಕೆವಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಂಬದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ ಜರುಗಿದೆ.

Vijaya Karnataka 22 Sep 2018, 3:45 pm
ಕೊರಟಗೆರೆ: ಬೆಸ್ಕಾಂ ಇಲಾಖೆ ಮತ್ತು ಪವರ್‌ಗ್ರಿಡ್‌ ಅಧಿಕಾರಿಗಳ ದಿವ್ಯ ನಿರ್ಲಕ್ಷ ದಿಂದ ಪಶ್ಚಿಮ ಬಂಗಾಳದಿಂದ ಕೆಲಸಕ್ಕಾಗಿ ಬಂದಿದ್ದ ಕೂಲಿಕಾರ್ಮಿಕ ವಿದ್ಯುತ್‌ ಸ್ಪರ್ಶವಾಗಿ 11ಕೆವಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಂಬದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ ಜರುಗಿದೆ.
Vijaya Karnataka Web electric shock labour death
ವಿದ್ಯುತ್‌ ಸ್ಪರ್ಶ; ಕಾರ್ಮಿಕ ಸಾವು


ತಾಲೂಕಿನ ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂ ವ್ಯಾಪ್ತಿಯ ಹೇರೆಜೇನಹಳ್ಳಿಯಿಂದ ವಿರೋಬನಹಳ್ಳಿ ಗ್ರಾಮದ ಮಧ್ಯೆ ಹಾದುಹೋಗುವ ಪವರ್‌ ಗ್ರಿಡ್‌ ಕೆಲಸ ನಿರ್ವಹಿಸಲು 11ಕೆವಿ ವಿದ್ಯುತ್‌ ಕಂಬದಲ್ಲಿನ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಹೋಗಿ ಕಂಬದಿಂದ ಕೆಳಗೆ ಬಿದ್ದು ಪ್ರಸನ್ನ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಪಶ್ಚಿಮ ಬಂಗಾಳ ರಾಜ್ಯ ಮಾಲ್ಕಿ ಹಿಂದುಪುರ ಗ್ರಾಮದ ವಾಸಿ ತಿರುಕುಳ್ಳರ್‌ ಮಾಚಿಯ ಎಂಬುವರ ಮಗನಾದ ಪ್ರಸನ್ನದೀಪ್‌ ಮಾಚಿ (23) ಎಂಬುವನೇ ಮೃತಪಟ್ಟ ದುರ್ದೈವಿ. ಪ್ರಸ್ತುತ ಮೃತ ಕೂಲಿಕಾರ್ಮಿಕ ಕೊರಟಗೆರೆ ತಾಲೂಕಿನ ವಿರೋಬನಹಳ್ಳಿ ಗ್ರಾಮದಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.

ಆಂಧ್ರಪ್ರದೇಶದ ಕಡಪದಿಂದ ತುಮಕೂರಿನ ವಸಂತನರಸಾಪುರಕ್ಕೆ ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಪವರ್‌ಗ್ರಿಡ್‌ ಲೈನ್‌ ಎಳೆಯುವ ವೇಳೆಯಲ್ಲಿ ಸ್ಥಳೀಯ ಬೆಸ್ಕಾಂ ಇಲಾಖೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಮಾಹಿತಿ ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅತ್ತ 11ಕೆವಿ ವಿದ್ಯುತ್‌ ಕಂಬ ಹತ್ತಲು ಸ್ಥಳೀಯ ಬೆಸ್ಕಾಂ ಲೈನ್‌ಮೆನ್‌ ಅಥವಾ ಬೆಸ್ಕಾಂ ಇಲಾಖೆಯ ಅನುಮತಿಯೇ ಪಡೆದಿಲ್ಲ ಎಂಬುದು ಬೆಸ್ಕಾಂ ಅಧಿಕಾರಿಗಳ ಪ್ರಶ್ನೆಯಾಗಿದೆ.

ಮೃತ ಪ್ರಸನ್ನ ಮೃತದೇಹವನ್ನು ತುಮಕೂರಿನ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಿಪಿಐ ಮುನಿರಾಜು, ಪಿಎಸ್ಸೈ ಮಂಜುನಾಥ ಮತ್ತು ಬೆಸ್ಕಾಂ ಎಇಇ ನಾಗರಾಜು ಅವಘಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ