ತುಮಕೂರು:
ಪಾರದರ್ಶಕ ಮೌಲ್ಯಮಾಪನ ಹಿತದೃಷ್ಟಿಯಿಂದ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಸರಕಾರ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ಕ್ರಮವನ್ನು ಅಳವಡಿಸಿದೆ.
ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಮೇಲೆ ಎಷ್ಟು ಪುಟಗಳಲ್ಲಿ ಉತ್ತರ ಬರೆದಿದ್ದಾರೆ ಎನ್ನುವ ಮಾಹಿತಿಯನ್ನು ಉತ್ತರ ಪತ್ರಿಕೆಯಲ್ಲಿ ಕೊಠಡಿ ಮೇಲ್ವಿಚಾರಕರು ಕಡ್ಡಾಯವಾಗಿ ನಮೂದಿಸುವ ಸೂಚನೆ ನೀಡಿದೆ. ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳ ಎದುರೇ ಪುಟಗಳನ್ನು ಎಣಿಕೆ ಮಾಡಿ ನಮೂದಿಸುವ ಹೊಸ ಜವಾಬ್ದಾರಿ ವಹಿಸಲಾಗಿದೆ.
ಪ್ರಯೋಜನ ಏನು?: ಪೋಷಕರು ತಮ್ಮ ಮಕ್ಕಳ ಅಂಕ ಕಡಿಮೆ ಬಂದಿದೆ ಎಂದು ಮರು ಮೌಲ್ಯಮಾಪನಕ್ಕೆ ಹಾಕಿದ ಸಂದರ್ಭದಲ್ಲಿ ಇಲಾಖೆಯಿಂದ ಬಂದ ಜೆರಾಕ್ಸ್ ಪ್ರತಿಯಲ್ಲಿ ನಮ್ಮ ಮಕ್ಕಳು ಇಷ್ಟು ಪುಟ ಬರೆದಿದ್ದರು. ಆದರೆ, ಅಷ್ಟು ಪುಟಗಳಿಲ್ಲ ಎಂದು ದೂರುತ್ತಾರೆ. ಹಾಗಾಗಿ ಇಂತಹ ಗೊಂದಲ ನಿವಾರಣೆಗಾಗಿ ಈ ಕ್ರಮವನ್ನು ಅಳವಡಿಸಲಾಗಿದೆ. ಇಲಾಖೆಯಿಂದ ಬಂದ ಜೆರಾಕ್ಸ್ ಪ್ರತಿಯಲ್ಲಿ ಮಕ್ಕಳು ಇಂತಿಷ್ಟು ಪುಟ ಬರೆದಿದ್ದರು ಎಂಬುವ ಮಾಹಿತಿಯನ್ನು ಪರೀಕ್ಷೆಯಲ್ಲೇ ದಾಖಲಿಸುವ ಕಾರಣ ಪೋಷಕರ ದೂರುಗಳಿಗೆ ಕಡಿವಾಣ ಬೀಳಲಿದೆ. ಉತ್ತರ ಪತ್ರಿಕೆಯ ಯಾವುದೇ ಪುಟ ಕಾಣೆಯಾದರೂ ಪುಟಗಳ ಎಣಿಕೆಯಲ್ಲಿ, ಪರೀಕ್ಷೆಯ ಕೊನೆಯಲ್ಲಿ ನಮೂದಿಸಿದ ಪುಟಗಳ ಸಂಖ್ಯೆಯನ್ನು ತಾಳೆ ಹಾಕಿದಾಗ ಮಾಹಿತಿ ಸುಲಭವಾಗಿ ಲಭಿಸುತ್ತದೆ. ಅಲ್ಲದೆ, ಮೌಲ್ಯಮಾಪನ ಸಂದರ್ಭದಲ್ಲಿ ಆಗುವ ಇನ್ನಿತರೆ ಗೊಂದಲ ನಿವಾರಿಸಿಕೊಳ್ಳಲು ಅನುಕೂಲವಾಗಲಿದೆ.
ಪುಟಗಳ ಸಂಖ್ಯೆ ನಮೂದಿಸುವ ನೂತನ ಕ್ರಮವನ್ನು ಜಾರಿಗೆ ತರಲಾಗಿದೆ. ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳ ಎದುರೇ ಪುಟಗಳ ಸಂಖ್ಯೆಯನ್ನು ಎಣಿಸಿ ನಮೂದಿಸಲು ಸೂಚಿಸಲಾಗಿದೆ. ಮುಖ್ಯ ಉತ್ತರ ಪತ್ರಿಕೆಯ ಕೊನೆಯ ಭಾಗದಲ್ಲಿ ಕೊಟ್ಟಿರುವ ಕಾಲಂನಲ್ಲಿ ಎಷ್ಟು ಪುಟಗಳಲ್ಲಿ, ಎಷ್ಟು ಅಡಿಷನಲ್ ಶೀಟ್ಗಳಲ್ಲಿ ಉತ್ತರ ಬರೆದಿದ್ದಾರೆ ಎಂಬುದನ್ನು ಲೆಕ್ಕಹಾಕಿ ಮೇಲ್ವಿಚಾರಕರೇ ನಮೂದಿಸಿ, ಸಹಿ ಮಾಡಬೇಕು.
-ಎಸ್.ನಾಗರತ್ನಾ, ಡಿಡಿಪಿಯು
ಪಾರದರ್ಶಕ ಮೌಲ್ಯಮಾಪನ ಹಿತದೃಷ್ಟಿಯಿಂದ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಸರಕಾರ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ಕ್ರಮವನ್ನು ಅಳವಡಿಸಿದೆ.
ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಮೇಲೆ ಎಷ್ಟು ಪುಟಗಳಲ್ಲಿ ಉತ್ತರ ಬರೆದಿದ್ದಾರೆ ಎನ್ನುವ ಮಾಹಿತಿಯನ್ನು ಉತ್ತರ ಪತ್ರಿಕೆಯಲ್ಲಿ ಕೊಠಡಿ ಮೇಲ್ವಿಚಾರಕರು ಕಡ್ಡಾಯವಾಗಿ ನಮೂದಿಸುವ ಸೂಚನೆ ನೀಡಿದೆ. ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳ ಎದುರೇ ಪುಟಗಳನ್ನು ಎಣಿಕೆ ಮಾಡಿ ನಮೂದಿಸುವ ಹೊಸ ಜವಾಬ್ದಾರಿ ವಹಿಸಲಾಗಿದೆ.
ಪ್ರಯೋಜನ ಏನು?: ಪೋಷಕರು ತಮ್ಮ ಮಕ್ಕಳ ಅಂಕ ಕಡಿಮೆ ಬಂದಿದೆ ಎಂದು ಮರು ಮೌಲ್ಯಮಾಪನಕ್ಕೆ ಹಾಕಿದ ಸಂದರ್ಭದಲ್ಲಿ ಇಲಾಖೆಯಿಂದ ಬಂದ ಜೆರಾಕ್ಸ್ ಪ್ರತಿಯಲ್ಲಿ ನಮ್ಮ ಮಕ್ಕಳು ಇಷ್ಟು ಪುಟ ಬರೆದಿದ್ದರು. ಆದರೆ, ಅಷ್ಟು ಪುಟಗಳಿಲ್ಲ ಎಂದು ದೂರುತ್ತಾರೆ. ಹಾಗಾಗಿ ಇಂತಹ ಗೊಂದಲ ನಿವಾರಣೆಗಾಗಿ ಈ ಕ್ರಮವನ್ನು ಅಳವಡಿಸಲಾಗಿದೆ. ಇಲಾಖೆಯಿಂದ ಬಂದ ಜೆರಾಕ್ಸ್ ಪ್ರತಿಯಲ್ಲಿ ಮಕ್ಕಳು ಇಂತಿಷ್ಟು ಪುಟ ಬರೆದಿದ್ದರು ಎಂಬುವ ಮಾಹಿತಿಯನ್ನು ಪರೀಕ್ಷೆಯಲ್ಲೇ ದಾಖಲಿಸುವ ಕಾರಣ ಪೋಷಕರ ದೂರುಗಳಿಗೆ ಕಡಿವಾಣ ಬೀಳಲಿದೆ. ಉತ್ತರ ಪತ್ರಿಕೆಯ ಯಾವುದೇ ಪುಟ ಕಾಣೆಯಾದರೂ ಪುಟಗಳ ಎಣಿಕೆಯಲ್ಲಿ, ಪರೀಕ್ಷೆಯ ಕೊನೆಯಲ್ಲಿ ನಮೂದಿಸಿದ ಪುಟಗಳ ಸಂಖ್ಯೆಯನ್ನು ತಾಳೆ ಹಾಕಿದಾಗ ಮಾಹಿತಿ ಸುಲಭವಾಗಿ ಲಭಿಸುತ್ತದೆ. ಅಲ್ಲದೆ, ಮೌಲ್ಯಮಾಪನ ಸಂದರ್ಭದಲ್ಲಿ ಆಗುವ ಇನ್ನಿತರೆ ಗೊಂದಲ ನಿವಾರಿಸಿಕೊಳ್ಳಲು ಅನುಕೂಲವಾಗಲಿದೆ.
ಪುಟಗಳ ಸಂಖ್ಯೆ ನಮೂದಿಸುವ ನೂತನ ಕ್ರಮವನ್ನು ಜಾರಿಗೆ ತರಲಾಗಿದೆ. ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳ ಎದುರೇ ಪುಟಗಳ ಸಂಖ್ಯೆಯನ್ನು ಎಣಿಸಿ ನಮೂದಿಸಲು ಸೂಚಿಸಲಾಗಿದೆ. ಮುಖ್ಯ ಉತ್ತರ ಪತ್ರಿಕೆಯ ಕೊನೆಯ ಭಾಗದಲ್ಲಿ ಕೊಟ್ಟಿರುವ ಕಾಲಂನಲ್ಲಿ ಎಷ್ಟು ಪುಟಗಳಲ್ಲಿ, ಎಷ್ಟು ಅಡಿಷನಲ್ ಶೀಟ್ಗಳಲ್ಲಿ ಉತ್ತರ ಬರೆದಿದ್ದಾರೆ ಎಂಬುದನ್ನು ಲೆಕ್ಕಹಾಕಿ ಮೇಲ್ವಿಚಾರಕರೇ ನಮೂದಿಸಿ, ಸಹಿ ಮಾಡಬೇಕು.
-ಎಸ್.ನಾಗರತ್ನಾ, ಡಿಡಿಪಿಯು