ಆ್ಯಪ್ನಗರ

‘ಯಾರ ಹತ್ರ ಇರದಿದ್ರೂ ನಮ್ಮ ಸ್ನೇಹಿತ ವಿಶ್ವನಾಥ್ ಹತ್ರ ಸಿ.ಡಿ ಇದ್ದೇ ಇರುತ್ತೆ’; ಟಿಬಿ ಜಯಚಂದ್ರ

ಯಾರ್ ಹತ್ರ ಸಿಡಿ ಇರಲ್ಲ ಅಂದ್ರು ನಮ್ ಸ್ನೇಹಿತ ವಿಶ್ವನಾಥ್ ಹತ್ರ ಸಿಡಿ ಇದ್ದೆ ಇರುತ್ತೆ. ಅವರ ಪಕ್ಷದ ಮುಖಂಡರೇ ಮಾತನಾಡ್ತಿರೋದು ನೋಡಿದ್ರೆ ಅವರ ಬಳಿ ಸಿಡಿ ವ್ಯಾಪಕವಾಗಿ ಇದೆ ಎಂಬುದು ಅರ್ಥ ಎಂದು ಹೇಳಿದರು. ಅಲ್ಲದೇ ಆ ಸಿಡಿಯಲ್ಲಿ ಏನಿದೆ ಯಾರ್ ಯಾರ್ ಪಾತ್ರ ಮಾಡಿದ್ದಾರೆ. ಏನೇನ್ ಆಕ್ಟ್ ಮಾಡಿದ್ದಾರೆ ನೋಡೋಣ ಅಮೇಲ್ ಮಾತಾಡೋಣ ಎಂದು ಟಿಬಿ ಜಯಚಂದ್ರೆ ಹೇಳಿದರು.

Vijaya Karnataka Web 15 Jan 2021, 2:08 pm
ತುಮಕೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಳಿಕ ಭಾರೀ ಸದ್ದು ಮಾಡ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಟಿಬಿ ಜಯಚಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
Vijaya Karnataka Web tb jayachandra


ಈ ಕುರಿತು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಿಕೆಗಳಲ್ಲಿ ಸಿಡಿ ಇದೆ ಎಂಬುದು ಬರ್ತಿದೆ. ಯತ್ನಾಳ್ ಸಿಡಿ ನನ್ ಹತ್ರ ಇದ್ದಿದ್ದಿದ್ರೆ ನಾನು ಸಿಎಂ ಆಗ್ತಿದ್ದೆ ಅಂತ ಹೇಳ್ತಿದ್ದಾರೆ. ಇದೆಲ್ಲಾ ಹೊರಗೆ ಬರಲಿಕ್ಕೆ ಪ್ರಾರಂಭವಾಗ್ತಿದೆ, ಬರಲಿ.. ಇಷ್ಟು ಬಹಿರಂಗವಾಗಿ ಮಾತಾಡಿದ ಮೇಲೆ ಬಂದೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬೈನಲ್ಲಿ ಕಳೆದ ದಿನಗಳ ಬಗ್ಗೆ ‘ಬಾಂಬೆ ದಿನಗಳು’ ಪುಸ್ತಕ ಬರೆದು ಎಲ್ಲವನ್ನೂ ಬಹಿರಂಗ ಮಾಡ್ತೇನೆ; ಎಚ್‌ ವಿಶ್ವನಾಥ್
ಇದೇ ವೇಳೆ ಯಾರ್ ಹತ್ರ ಸಿಡಿ ಇರಲ್ಲ ಅಂದ್ರು ನಮ್ ಸ್ನೇಹಿತ ವಿಶ್ವನಾಥ್ ಹತ್ರ ಸಿಡಿ ಇದ್ದೆ ಇರುತ್ತೆ. ಅವರ ಪಕ್ಷದ ಮುಖಂಡರೇ ಮಾತನಾಡ್ತಿರೋದು ನೋಡಿದ್ರೆ ಅವರ ಬಳಿ ಸಿಡಿ ವ್ಯಾಪಕವಾಗಿ ಇದೆ ಎಂಬುದು ಅರ್ಥ ಎಂದು ಹೇಳಿದರು. ಅಲ್ಲದೇ ಆ ಸಿಡಿಯಲ್ಲಿ ಏನಿದೆ ಯಾರ್ ಯಾರ್ ಪಾತ್ರ ಮಾಡಿದ್ದಾರೆ. ಏನೇನ್ ಆಕ್ಟ್ ಮಾಡಿದ್ದಾರೆ ನೋಡೋಣ ಅಮೇಲ್ ಮಾತಾಡೋಣ ಎಂದು ಟಿಬಿ ಜಯಚಂದ್ರೆ ಹೇಳಿದರು.
‘ನೀವು ಯಾರ ಭಿಕ್ಷೆಯಿಂದ ಅಧಿಕಾರ ಬಂದಿದ್ದೀರಾ ಅನ್ನೋದನ್ನು ಅರ್ಥ ಮಾಡಿಕೊಳ್ಳಿ’; ವಿಶ್ವನಾಥ್‌ ಕಿಡಿ
ಸಚಿವ ಸಂಪುಟ ವಿಸ್ತರಣೆ ಬಳಿಕ ಮಂತ್ರಿಗಿರಿ ಸಿಗದ ಆಕಾಂಕ್ಷಿಗಳು ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದು, ಸಿಎಂ ಬಿಎಸ್‌ವೈ ಸೇರಿದಂತೆ ಸಚಿವ ಸ್ಥಾನ ದಕ್ಕಿಸಿಕೊಂಡವರ ವಿರುದ್ಧ ಕಿಡಿಕಾರಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಸಿಡಿ ವಿಚಾರವೇ ಭಾರೀ ಸದ್ದು ಮಾಡ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ