ಆ್ಯಪ್ನಗರ

ಜಿಎಸ್‌ಬಿಗೆ ಮಾತಾಡುವ ಚಟ: ಸಚಿವ ಟೀಕೆ

ಚುನಾವಣೆ ಹತ್ತಿರ ಬಂದಾಗ ಕೆಲವರಿಗೆ ಮಾತಿನ ಚಟ ಶುರುವಾಗುತ್ತದೆ ಎಂದು ಮಾಜಿ ಸಂಸದ ಜಿ.ಎಸ್‌. ಬಸವರಾಜು ವಿರುದ್ಧ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಟೀಕೆ ವ್ಯಕ್ತಪಡಿಸಿದ್ದಾರೆ.

Vijaya Karnataka 16 Oct 2018, 4:00 pm
ನಿಟ್ಟೂರು (ಗುಬ್ಬಿ ತಾ.) : ಚುನಾವಣೆ ಹತ್ತಿರ ಬಂದಾಗ ಕೆಲವರಿಗೆ ಮಾತಿನ ಚಟ ಶುರುವಾಗುತ್ತದೆ ಎಂದು ಮಾಜಿ ಸಂಸದ ಜಿ.ಎಸ್‌. ಬಸವರಾಜು ವಿರುದ್ಧ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಟೀಕೆ ವ್ಯಕ್ತಪಡಿಸಿದ್ದಾರೆ.
Vijaya Karnataka Web ex mp bsavraj
ಜಿಎಸ್‌ಬಿಗೆ ಮಾತಾಡುವ ಚಟ: ಸಚಿವ ಟೀಕೆ


ಗುಬ್ಬಿ ತಾಲೂಕಿನ ನಿಟ್ಟೂರು ಕಾರೆಹಳ್ಳಿ ಎಸ್ಕೇಪ್‌, ಸೋಮಲಾಪುರ ಹಾಗೂ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಹೇಮಾವತಿ ನಾಲೆಯ ಎಸ್ಕೇಪ್‌ಗಳನ್ನು ತೆರೆದ ನಂತರ ಮಾತನಾಡಿದ ಅವರು, ತಾವು ಯಾವತ್ತೂ ಅಧಿಕಾರಕ್ಕಾಗಿ ಅಂಟಿಕೊಂಡವನಲ್ಲ. ಆದರೆ, ಅವರಿಗೆ ಅಧಿಕಾರವಿಲ್ಲ, ಹಾಗಾಗಿ ಹಾಗೆ ಮಾತನಾಡುತ್ತಾರೆ. ಅಧಿಕಾರ ನಮ್ಮಪ್ಪನ ಮನೆ ಆಸ್ತಿಯಲ್ಲ, ಯಾವತ್ತು ಹೋಗುವುದೋ ಗೊತ್ತಿಲ್ಲ. ತಾಲೂಕಿನ ಕೆರೆಗಳಿಗೆ ಯಾವಾಗ ನೀರು ಹರಿಸಬಹುದು ಎಂಬುದು ತಮಗೆ ಗೊತ್ತಿದೆ ಎಂದು ಹೇಳಿದರು.

ನಾನು ನೀರಗಂಟಿಯಾಗುತ್ತೇನೆ ಎಂದು ಮಾಜಿ ಸಂಸದರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಈಗ ಅವರಿಗೆ ವಯಸ್ಸಾಗಿದ್ದು, ನೀರಗಂಟಿ ಕೆಲಸ ಮಾಡಲು ಸಾಧ್ಯವಿಲ್ಲ. ವಯಸ್ಸು ಇದ್ದಾಗ ನೀರಗಂಟಿ ಕೆಲಸ ಮಾಡಿದ್ದರೆ ಜಿಲ್ಲೆಯ ರೈತರು, ಜನರು ಚೆನ್ನಾಗಿರುತ್ತಿದ್ದರು ಎಂದು ಸಚಿವರು ವ್ಯಂಗ್ಯವಾಡಿದರು.

ಹೇಮಾವತಿ ನಾಲೆ ವಿಸ್ತರಿಸುವುದಕ್ಕೆ ಸಭೆ ನಡೆದಿದ್ದು, ಈ ವರ್ಷ ಮಾಡಲಾಗುವುದು. ಗುಬ್ಬಿ ತಾಲೂಕಿನ 12 ಕೆರೆಗಳನ್ನು ನೇರವಾಗಿ ತುಂಬಿಸಬೇಕಾಗಿದೆ. ಇನ್ನು ಎಸ್ಕೇಪ್‌ ಮೂಲಕ ಸಾಕಷ್ಟು ಕೆರೆಗಳನ್ನು ತುಂಬಿಸಬೇಕಾಗುತ್ತದೆ. ಕಡಬ ಕೆರೆಗೆ ಎಸ್ಕೇಪ್‌ ಮೂಲಕ ನೀರು ಹರಿಯುತ್ತಿದೆ. ನಿಟ್ಟೂರು ಕೆರೆ ಇನ್ನೂ 8 ಇಂಚು ಇದ್ದು, ಅದು ಕೋಡಿ ಬಿದ್ದರೆ ಕಡಬ ಕೆರೆಗೆ ಹೆಚ್ಚು ನೀರು ಹರಿದು ತುಂಬಿಕೊಳ್ಳುತ್ತದೆ. ತಾಲೂಕಿನ ಎಲ್ಲಾ ಕೆರೆಗಳನ್ನೂ ತುಂಬಿಸಲಾಗುವುದು ಎಂದು ಎಸ್‌.ಆರ್‌. ಶ್ರೀನಿವಾಸ್‌ ತಿಳಿಸಿದರು.

ಎಪಿಎಂಸಿ ಸದಸ್ಯ ಲಕ್ಷ್ಮಿರಂಗಯ್ಯ, ಮುಖಂಡರಾದ ಕೃಷ್ಣಮೂರ್ತಿ, ವೆಂಕಟೇಶ್‌, ಬಾಲಕೃಷ್ಣ, ಗಿರೀಶ್‌, ಗಂಗರಾಜು, ಪಟೇಲ್‌ ಶಶಿ, ಪ್ರಕಾಶ್‌, ನರಸಿಂಹಯ್ಯ, ನರಸೇಗೌಡ, ಹೇಮಾವತಿ ಅಧಿಕಾರಿ ನಾಗರಾಜು, ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ