ಆ್ಯಪ್ನಗರ

ಮಧುಗಿರಿ ತಾಲೂಕು ದಂಡಾಧಿಕಾರಿಗೆ ನಕಲಿ ಐಟಿ ಕರೆ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಹಶೀಲ್ದಾರ್ ರಮೇಶ್ ಬಾಬು ಅವರಿಗೆ ಕಿಡಿಗೇಡಿಗಳು ಕರೆ ಮಾಡಿ ನಾವು ಐಟಿ ಅಧಿಕಾರಿಗಳು ನಿಮ್ಮ ಮನೆ ರೇಡ್ ಮಾಡಲು ಬರುತ್ತಿದ್ದೇವೆ ಎಂದು ಹೇಳಿ ಬೆದರಿಸಿದ ಘಟನೆ ನಡೆದಿದೆ.

Vijaya Karnataka Web 22 Mar 2019, 9:52 am
ಕೊಡಿಗೇನಹಳ್ಳಿ(ಮಧುಗಿರಿ): ಮಧುಗಿರಿ ತಾಲೂಕು ದಂಡಾಧಿಕಾರಿಗಳಿಗೆ ಐಟಿ ದಾಳಿ ಮಾಡುವುದಾಗಿ ಬೆದರಿಸಿದ ಘಟನೆ ವರದಿಯಾಗಿದೆ.
Vijaya Karnataka Web Blackmail case


ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಹಶೀಲ್ದಾರ್ ರಮೇಶ್ ಬಾಬು ಅವರಿಗೆ ಕಿಡಿಗೇಡಿಗಳು ಕರೆ ಮಾಡಿ ನಾವು ಐಟಿ ಅಧಿಕಾರಿಗಳು ನಿಮ್ಮ ಮನೆ ರೇಡ್ ಮಾಡಲು ಬರುತ್ತಿದ್ದೇವೆ ಎಂದು ಹೇಳಿ ಬೆದರಿಸಿದ್ದಾರೆ.

ದೂರು ನೀಡಿರುವ ಮಧುಗಿರಿ ತಾಲೂಕು ತಹಶೀಲ್ದಾರ್ ಮಂಜುನಾಥ್‌


ಆಗ ನಮ್ಮ ಮನೆಯಲ್ಲಿ ಯಾರೂ ಇಲ್ಲ ನಾಳೆ ಬನ್ನಿ ಎಂದು ಹೇಳಿದ ತಹಶೀಲ್ದಾರ್ ತಕ್ಷಣ ಈ ಹಿಂದೆ ಕೆಲಸ ಮಾಡುತ್ತಿದ್ದ ಮೈಸೂರು ತಾಲೂಕಿನ ಭೂಪಣ್ಣಗೆ ಕರೆ ಮಾಡಿ ಈ ನಂಬರ್ 9036001217 ಪರಿಶೀಲಿಸಿ ಎಂದು ತಿಳಿಸಿದ್ದಾರೆ.

ಆಗ ನಕಲಿ ಕರೆ ಎಂದು ತಿಳಿದು ಬಂದಿದ್ದು ಕಂಪ್ಲೇಂಟ್ ಕೊಡುತ್ತೇವೆ ಎಂದು ಹೇಳಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಈ ವ್ಯಕ್ತಿ ಹಲವು ಸರಕಾರಿ ಅಧಿಕಾರಿಗಳಿಗೆ ಆದಾಯ ತೆರಿಗೆ ಅಧಿಕಾರಿಯ ಸೋಗಿನಲ್ಲಿ ಬ್ಲಾಕ್ ಮೇಲ್ ಮಾಡಿರುವ ಶಂಕೆ ಇದು ಎಂದು ತಹಶೀಲ್ದಾರ್ ಮಧುಗಿರಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ