ಆ್ಯಪ್ನಗರ

ದಾಳಿಂಬೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂ. ನಷ್ಟ

ದಾಳಿಂಬೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ, ದಾಳಿಂಬೆ ಗಿಡಗಳು ಸೇರಿದಂತೆ ಜೌಷಧಿ, ಹನಿ ನೀರಾವರಿ ಸಲಕರಣಗಳು ಸುಟ್ಟು ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಕಾಮಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

Vijaya Karnataka 27 Dec 2018, 5:00 am
ಸಿರಾ: ದಾಳಿಂಬೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ, ದಾಳಿಂಬೆ ಗಿಡಗಳು ಸೇರಿದಂತೆ ಜೌಷಧಿ, ಹನಿ ನೀರಾವರಿ ಸಲಕರಣಗಳು ಸುಟ್ಟು ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಕಾಮಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
Vijaya Karnataka Web fire to pomegranate garden millions of rupees loss
ದಾಳಿಂಬೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂ. ನಷ್ಟ


ಸುಂದರಯ್ಯ ಎಂಬುವರಿಗೆ ಸೇರಿದ್ದ ಸರ್ವೆ ನಂ: 41/7ರಲ್ಲಿ ಇದ್ದ 4 ಎಕರೆ ಜಮೀನಿನಲ್ಲಿ 2 ಎಕರೆಯಷ್ಟು ಜಮೀನಿನಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದು, ಮೊಗ್ಗು ಬಿಟ್ಟಿದ್ದ ದಾಳಿಂಬೆ ಇನ್ನು ಕೆಲವೇ ತಿಂಗಳಲ್ಲಿ ಫಸಲು ಬರುತ್ತಿತ್ತು. ಮಂಗಳವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದು ನೂರಾರು ದಾಳಿಂಬೆ ಗಿಡ, ಗುಡಸಲಿನಲ್ಲಿ ಇಟ್ಟಿದ್ದ ಜೌಷಧಿಗಳು, ಯಂತ್ರ ಮತ್ತು ಹನಿ ನೀರಾವರಿಯ ಡ್ರಿಪ್‌ ಪೈಪ್‌ಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ತೋಟಗಾರಿಕೆ ಸಹಾಯಕಾಧಿಕಾರಿ ತ್ಯಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಂದೊರೆ ತಾಪಂ ಸದಸ್ಯ ಕೆ.ಎಂ. ಶ್ರೀನಿವಾಸ್‌, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಉಪಾಧ್ಯಕ್ಷ ವೀರಗ್ಯಾತಪ್ಪ, ಗೋವಿಂದಪ್ಪ, ಕಾಂತರಾಜು ಉಪಸ್ಥಿತರಿದ್ದರು. ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ