ಆ್ಯಪ್ನಗರ

ಪಟಾಕಿ ಅವಘಡ: ಯುವತಿ ಬಲಿ, ಯುವಕನಿಗೆ ಗಾಯ

ಗಣೇಶೋತ್ಸವ ವೀಕ್ಷಿಸಲು ಬಂದಿದ್ದ ಯುವತಿ ಪಟಾಕಿ ಸಿಡಿದು ಮೃತಪಟ್ಟ ಘಟನೆ ನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

Vijaya Karnataka 4 Dec 2018, 5:00 am
ತಿಪಟೂರು: ಗಣೇಶೋತ್ಸವ ವೀಕ್ಷಿಸಲು ಬಂದಿದ್ದ ಯುವತಿ ಪಟಾಕಿ ಸಿಡಿದು ಮೃತಪಟ್ಟ ಘಟನೆ ನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
Vijaya Karnataka Web fireworks crash young woman was killed youth injured
ಪಟಾಕಿ ಅವಘಡ: ಯುವತಿ ಬಲಿ, ಯುವಕನಿಗೆ ಗಾಯ


ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಹಡವನಹಳ್ಳಿಯ ಸಿತಾರಾ (21) ಬಿನ್‌ ರಾಜೇಗೌಡ ಮೃತ ಯುವತಿ. ತಿಪಟೂರಿನ ಮತ್ತಿಹಳ್ಳಿಯ ಜಿತೇಂದ್ರ (19) ಗಾಯಗೊಂಡವರು.

ಕಳೆದ 90 ದಿನಗಳಿಂದ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಸೇವಾ ಸಮಿತಿಯಿಂದ ಭಾನುವಾರ ಮಧ್ಯರಾತ್ರಿ ವಿಸರ್ಜಿಸುವ ಮುನ್ನ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು. ಅದನ್ನು ವೀಕ್ಷಿಸಲು ಬಂದಿದ್ದ ಸಿತಾರಾಳ (21) ತಲೆಗೆ ಪಟಾಕಿಯ ಮಡಕೆ ಚೂರೊಂದು ಸಿಡಿದು ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಇದೇ ವೇಳೆ, ಇನ್ನೊಂದು ಪಟಾಕಿ ಚೂರಿನಿಂದ ಜಿತೇಂದ್ರ(19) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ನಗರ ಠಾಣೆಯಲ್ಲಿ ಗಣೇಶೋತ್ಸವ ಸಮಿತಿ ಹಾಗೂ ಪಟಾಕಿ ತಯಾರಕರು ಮತ್ತು ಪಟಾಕಿ ಸಿಡಿಸುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ