ಆ್ಯಪ್ನಗರ

ದೇವೇಗೌಡರ ಕುಟುಂಬದ ಪಾಪದ ಕೊಡ ತುಂಬಿದೆ: ಕಾಂಗ್ರೆಸ್ ಮಾಜಿ ಶಾಸಕ

ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಯಾವೆಲ್ಲಾ ಪ್ರಯತ್ನ ಮಾಡಬೇಕು ಅವೆಲ್ಲಾವನ್ನೂ ನಾನು ಮಾಡುತ್ತೇನೆ ಎಂದು ಬಂಡಾಯವಾಗಿ ಸ್ಪರ್ಧೆ ಮಾಡುವ ಸೂಚನೆಯನ್ನು ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೊಟ್ಟಿದ್ದಾರೆ.

Vijaya Karnataka Web 19 Mar 2019, 2:19 pm
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುವುದು ಬಹುತೇಕ ಖಚಿತವಾಗುತಿದ್ದಂತೆ ಕಾಂಗ್ರೆಸ್ ಜಿಲ್ಲಾ ಘಟಕದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
Vijaya Karnataka Web Rajanan


ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಯಾವೆಲ್ಲಾ ಪ್ರಯತ್ನ ಮಾಡಬೇಕು ಅವೆಲ್ಲಾವನ್ನೂ ನಾನು ಮಾಡುತ್ತೇನೆ ಎಂದು ಬಂಡಾಯವಾಗಿ ಸ್ಪರ್ಧೆ ಮಾಡುವ ಸೂಚನೆಯನ್ನು ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೊಟ್ಟಿದ್ದಾರೆ.

ದೇವೇಗೌಡರ ಕುಟುಂಬದ ಪಾಪದ ಕೊಡ ತುಂಬಿದೆ. ಹೇಮಾವತಿ ನೀರು ತುಮಕೂರಿಗೆ ಕೊಡದೆ ರೈತರಿಗೆ ತೊಂದರೆ ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಗೆ ಚಪ್ಪಲಿಯಿಂದ ಹೊಡೆದು ದರ್ಪ ತೋರಿದ್ದರು. ಇವೆಲ್ಲಾ ಪಾಪಗಳಿಂದ ಅವರ ಕೊಡ ತುಂಬಿದೆ. ಪರಿಣಾಮ ಆ ಎಲ್ಲಾ ಪಾಪ ಹೊತ್ತುಕೊಂಡು ಬಂದು ತುಮಕೂರಿನಲ್ಲಿ ಸೋಲ್ತಾರೆ ಎಂದು ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ ವೇದಿಕೆ ಮೇಲೆ ದೇವೇಗೌಡರ ಪರಿಪಾರವೇ ಇರುತ್ತದೆ. ಅವರಿಗೆ ನಾಚಿಕೆ ಆಗಬೇಕು ಕುಟುಂಬ ರಾಜಕಾರಣ ಮಾಡೋದಕ್ಕೆ. ಪಾಪ ಕುಮಾರಸ್ವಾಮಿ ಎರಡನೇ ಪತ್ನಿ ರಾಧಿಕಾಗೆ ಹಾಗೂ ಅಮ್ಮ ಚೆನ್ನಮ್ಮಗೆ ಯಾವೂದಾದರೂ ಕ್ಷೇತ್ರ ಕೊಟ್ಟು ಕಣಕ್ಕಿಳಿಸಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ