ಆ್ಯಪ್ನಗರ

ಕೊಡಗಿನ ಪ್ರವಾಹ ಸಂತ್ರಸ್ತ ನೂರು ವಿದ್ಯಾರ್ಥಿಗಳಿಗೆ ಉಚಿತ ಎಂಜಿನಿಯರಿಂಗ್‌ ಶಿಕ್ಷಣ

90 ವರ್ಷಗಳ ಇತಿಹಾಸದಲ್ಲೇ ಎಂದೂ ಕೇಳರಿಯದ ಮಳೆ ಕೊಡಗಿನಲ್ಲಿ ಬಂದಿದೆ. ಇದರಿಂದ ಅಲ್ಲಿಯ ಜನತೆ ಆಶ್ರಯವಿಲ್ಲದೆ ನೀರಿನ ಮೇಲೆ ವಾಸಿಸುವ ದುಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತಹ ನೂರು ವಿದ್ಯಾರ್ಥಿಗಳಿಗೆ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಸಿ.ಚೆನ್ನಿಗಪ್ಪ ತಿಳಿಸಿದರು.

Vijaya Karnataka 28 Aug 2018, 11:14 am
ತುಮಕೂರು: 90 ವರ್ಷಗಳ ಇತಿಹಾಸದಲ್ಲೇ ಎಂದೂ ಕೇಳರಿಯದ ಮಳೆ ಕೊಡಗಿನಲ್ಲಿ ಬಂದಿದೆ. ಇದರಿಂದ ಅಲ್ಲಿಯ ಜನತೆ ಆಶ್ರಯವಿಲ್ಲದೆ ನೀರಿನ ಮೇಲೆ ವಾಸಿಸುವ ದುಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತಹ ನೂರು ವಿದ್ಯಾರ್ಥಿಗಳಿಗೆ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಸಿ.ಚೆನ್ನಿಗಪ್ಪ ತಿಳಿಸಿದರು.
Vijaya Karnataka Web chennigappa


ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದ ಕೊಡಗಿಗೆ ವರುಣನ ರೌದ್ರಾವತಾರ ಅಪ್ಪಳಿಸಿದೆ. ಇದರಿಂದ ಆಶ್ರಯವಿಲ್ಲದೆ ಸಾವಿರಾರು ಜನ ನಿರ್ಗತಿಕರಾಗಿ, ಜೀವನ ಸಾಗಿಸುತ್ತಿದ್ದಾರೆ. ಇದನ್ನು ಅರಿತು ಅಲ್ಲಿನ ಸಂತ್ರಸ್ತ ಮಕ್ಕಳಿಗೆ ನಮ್ಮ ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿ ಸಂಸ್ಥೆ ನಡೆಸುತ್ತಿರುವ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ನಿಂದ ನೆರೆಪೀಡಿತ ಹಾಗೂ ಅನಾಥ ಮಕ್ಕಳ ಉತ್ತಮ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ 100 ತಾಂತ್ರಿಕ ಸೀಟುಗಳನ್ನು ವಸತಿ ಜತೆಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಉತ್ತಮ ರಾಜಕೀಯ ನೀತಿಯನ್ನು ಅರ್ಥ ಮಾಡಿಕೊಂಡು ನಮ್ಮ ಸಂಸ್ಥೆಯಿಂದ ಎಂಜಿನಿಯರಿಂಗ್‌ ವಿಭಾಗದ ಮೆಕಾನಿಕಲ್‌, ಐಎಸ್‌, ಇಇಸಿ, ಇಸಿ, ಸಿವಿಲ್‌ನಲ್ಲಿ 30 ಸೀಟು ಮತ್ತು ಎಂಟೆಕ್‌ ವಿಭಾಗದ ಮೆಕಾನಿಕಲ್‌, ಇಸಿಯಲ್ಲಿ 20 ಸೀಟು ಹಾಗೂ ಪಾಲಿಟೆಕ್ನಿಕ್‌ ವಿಭಾಗದ ಮೆಕಾನಿಕಲ್‌, ಇಸಿ, ಸಿವಿಲ್‌, ಸಿಎಸ್‌ನಲ್ಲಿ 50 ಸೀಟು ಸೇರಿದಂತೆ ಒಟ್ಟು 100 ಸೀಟುಗಳನ್ನು ನೆರೆಪೀಡಿತ, ವಿಶೇಷ ಚೇತನ, ಅನಾಥ ಮಕ್ಕಳಿಗೆ ನೀಡುವ ಬಗ್ಗೆ ಸಿಎಂ ಮತ್ತು ಮಡಿಕೇರಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅವರಿಗೆ ಮನವಿಮಾಡಿಕೊಂಡಿದ್ದೇವೆ. ಆಯ್ಕೆಯಾದ ಮಕ್ಕಳಿಗೆ ವಿದ್ಯಾಭ್ಯಾಸ, ವಸತಿ ನೀಡುವುದನ್ನು ಪರಿಶೀಲಿಸಲು ಸರಕಾರದಿಂದ ಮೇಲ್ವಿಚಾರಕರನ್ನು ನೇಮಿಸಲು ತಿಳಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಆದರ್ಶ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ನೆನಪಿನಲ್ಲಿ ತಾಂತ್ರಿಕ ಕಾಲೇಜು ಸ್ಥಾಪಿಸಲಾಗಿದೆ. ಸದ್ಯ ಕೊಡಗಿನ ನಿರಾಶ್ರಿತ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಚಿತ ಶಿಕ್ಷಣ ನೀಡಿ ಮಾನವೀಯತೆ ಮೆರೆಯುತ್ತಿದ್ದೇವೆ ಎಂದು ತಿಳಿಸಿದರು.

ಮೈತ್ರಿ ಸುಭದ್ರ: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ಮೈತ್ರಿ ಸುಭದ್ರವಾಗಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಒಬ್ಬರು ತಪ್ಪ ಮಾಡಿದರೆ ಮತ್ತೊಬ್ಬರಿಗೂ ಅದು ಪರಿಣಮಿಸುತ್ತದೆ. ಅಂತಹ ಕಾರ್ಯ ನಡೆಯುವುದಿಲ್ಲ. ಎಚ್‌ಡಿಕೆ, ಸಿದ್ದರಾಮಯ್ಯ ಹಾಗೂ ಡಿಕೆಶಿ ನೇತೃತ್ವದಲ್ಲಿ ನಮ್ಮ ಆಡಳಿತ ಸುರಕ್ಷಿತವಾಗಿ ನಡೆಯುತ್ತಿದೆ ಎಂದರು.

ಇನ್ನೂ ಅಭ್ಯರ್ಥಿ ಆಯ್ಕೆಯಾಗಿಲ್ಲ: ಸದ್ಯ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಅದರ ಕಡೆ ಗಮನ ಹರಿಸಲಾಗುತ್ತಿದೆ. ನಂತರ ಸಂಸತ್‌ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಜನರ ಒತ್ತಾಯದ ಮೇರೆಗೆ ನಾನೇ ಖುದ್ದು ದೇವೇಗೌಡರ ಬಳಿ ನಿಖಿಲ್‌ಗೌಡಗೆ ಟಿಕೆಟ್‌ ನೀಡಲು ಮನವಿ ಮಾಡಿದ್ದೇನೆ. ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ.

ಪ್ರತಿಪಕ್ಷದವರು ಸಲಹೆ ನೀಡಲಿ: ಎಚ್‌ಡಿಕೆ ನೇತೃತ್ವದ ಸಮ್ಮಿಶ್ರ ಸರಕಾರ ಉತ್ತಮ ಆಡಳಿತ ನಡೆಸುತ್ತಿದೆ. ಪ್ರತಿಪಕ್ಷದವರು ಉತ್ತಮ ಸಲಹೆ ನೀಡುವ ಮೂಲಕ ಕೈಜೋಡಿಸಬೇಕು. ಅದರ ಬದಲು ಜನತೆಗೆ ತಪ್ಪು ಅಭಿಪ್ರಾಯ ಮೂಡುವಂತಹ ಹೇಳಿಕೆ ನೀಡಬಾರದು. ನಮ್ಮ ಆದರ್ಶಗಳ ದಿಕ್ಕು ಬದಲಿಸುವ ಕೆಲಸ ಮಾಡದೇ ಉತ್ತಮ ಆಡಳಿತ ನೀಡಲು ಪ್ರೋತ್ಸಾಹಿಸಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ