ಆ್ಯಪ್ನಗರ

ಹಂದ್ರಿನಿವಾ ಯೋಜನೆಯಿಂದ ಅಂತರ್ಜಲ ವೃದ್ಧಿ

ನಾಗಲಮಡಿಕೆಯ ಉತ್ತರ ಪಿನಾಕಿನಿ ನದಿಯಲ್ಲಿನಿರ್ಮಾಣವಾಗಿರುವ ತಡೆಗೋಡೆ ವೀಕ್ಷಿಸಿದ ಸಂಸದ

Vijaya Karnataka 11 Sep 2019, 5:00 am
ಪಾವಗಡ:
Vijaya Karnataka Web groundwater enhancement by handriniva project
ಹಂದ್ರಿನಿವಾ ಯೋಜನೆಯಿಂದ ಅಂತರ್ಜಲ ವೃದ್ಧಿ


ಹಂದ್ರಿನಿವಾ ಯೋಜನೆಯು ತಾಲೂಕಿನ ಉತ್ತರ ಪಿನಾಕಿನಿ ಮಾರ್ಗವಾಗಿ ಸಾಗುವುದರಿಂದ ಈ ಭಾಗದ 70ಕ್ಕೂ ಹೆಚ್ಚು ಗ್ರಾಮಗಳ ಕೊಳವೆಬಾವಿಗಳ ಅಂತರ್ಜಲ ವೃದ್ಧಿಯಾಗಲಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ನಾಗಲಮಡಿಕೆಯ ಉತ್ತರ ಪಿನಾಕಿನಿ ನದಿಯಲ್ಲಿನಿರ್ಮಾಣವಾಗಿರುವ ತಡೆಗೋಡೆಯನ್ನು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ, ನಂತರ ರೈತರ ಸಭೆಯಲ್ಲಿಮಾತನಾಡಿದ ಅವರು, ಹಂದ್ರಿನಿವಾ ಯೋಜನೆಯಲ್ಲಿಈ ಹಿಂದಿನ ಟಿಡಿಪಿ ಸರಕಾರದ ಅವಧಿಯಲ್ಲಿಸಚಿವೆಯಾಗಿದ್ದ ಪರಿಟಾಲಸುನೀತಾ ಅವರು ಈ ಯೋಜನೆಯಲ್ಲಿನಾಗಲಮಡಿಕೆ ಮೂಲಕ ನೀರು ಹರಿಸಲು ಒಪ್ಪಿರಲಿಲ್ಲ. ಆದರೆ ಈಗಿನ ವೈಎಸ್‌ಆರ್‌ ಪಕ್ಷದ ರಾಪ್ತಾಡು ಶಾಸಕ ತೋಪುದುರ್ತಿ ಪ್ರಕಾಶ್‌ರೆಡ್ಡಿ ನಾಗಲಮಡಿಕೆಯ ಮುಖಾಂತರ ಪೆರೂರು ಡ್ಯಾಂಗೆ ಆರು ತಿಂಗಳಲ್ಲಿನೀರು ತುಂಬಿಸಲು ಮುಂದಾಗಿದ್ದಾರೆ ಎಂದರು.

''ಕಳೆದ ವಾರ ಮುಖ್ಯಮಂತ್ರಿ ಯುಡಿಯೂರಪ್ಪ ಜತೆ ಆಂಧ್ರಪ್ರದೇಶದ ಶಾಸಕ ತೋಪುದರ್ತಿ ಪ್ರಕಾಶ್‌ರೆಡ್ಡಿ ಈ ಯೋಜನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಅವರು ಯೋಜನೆಗೆ ಗ್ರೀನ್‌ಸಿಗ್ನಲ್‌ ನೀಡಿದ್ದರಿಂದ ನಾನೇ ಖದ್ದು ಉತ್ತರಪಿನಾಕಿ ನದಿಯನ್ನು ಪರಿಶೀಲಿಸುತ್ತಿದ್ದೇನೆ'' ಎಂದರು.

ಕರ್ನಾಟಕ ಗಡಿ ಪ್ರದೇಶದ ರೊದ್ದಂ 14 ಕಿ.ಮೀ. ದೂರವಿದ್ದು ಅಲ್ಲಿನ ತುರುಕುಲಾಪಟ್ಟಣಂ ಗ್ರಾಮದ ಮೂಲಕ ನಾಗಲಮಡಿಕೆಯ ನದಿಯ ಮೂಲಕ ಪೆರೂರು ಡ್ಯಾಂಗೆ ನೀರು ಹರಿಸಿದರೆ ಪಾವಗಡ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಆಗಿ ಸುಮಾರು 40 ಕಿ.ಮೀ.ವರೆಗೂ ಅಂರ್ತಜಲ ಹೆಚ್ಚಾಗುತ್ತದೆ. ಆದ್ದರಿಂದ ಈ ಭಾಗದ ರೈತರು ಸ್ವಯಂಪ್ರೇರಿತವಾಗಿ ಇಲ್ಲಿನ ನದಿಯನ್ನು ಸ್ವಚ್ಛಗೊಳಿಸಬೇಕು ಎಂದರು.

ತಾಲೂಕಿನ ಹಲವು ಸರಕಾರಿ ಶಾಲೆಗಳು ಶಿಥಿಲಗೊಂಡಿದ್ದು ಅವುಗಳ ಅಭಿವೃದ್ಧಿಗಾಗಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳು ಮುಂದೆ ಬಂದಿದ್ದು, ಸಿ.ಎಸ್‌.ಆರ್‌. ಫಂಡ್‌ನಲ್ಲಿಶಾಲೆಗಳಿಗೆ ಬೇಕಾಗುವ ಮೂಲ ಸೌಕರ್ಯಗಳನ್ನು ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಬಿಜೆಪಿ ರಾಜ್ಯ ರೈತ ಮೊರ್ಚಾ ಉಪಾಧ್ಯಕ್ಷ ಎಸ್‌.ಶಿವಪ್ರಸಾದ್‌ ಮಾತನಾಡಿ, ರಾಜ್ಯದಲ್ಲಿಯಡಿಯೂರಪ್ಪ ಮತ್ತು ಸದಾನಂದಗೌಡ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಭದ್ರಾ ಮೇಲ್ದಂಡೆ ತುಂಗಭದ್ರಾ ಯೋಜನೆಗಳು ಜಾರಿಯಾದರೂ ಸಹ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಈ ಯೋಜನೆಗಳು ನನೆಗುದಿಗೆ ಬಿದ್ದವು, ಈಗ ಬಿಜೆಪಿ ಸರಕಾರದಲ್ಲಿಈ ಎಲ್ಲಾಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿತಹಸೀಲ್ದಾರ್‌ ವರದರಾಜು, ಸಣ್ಣ ನಿರಾವರಿ ಇಲಾಖೆ ಎಂಜನಿಯರ್‌ ಚಿತ್ತಯ್ಯ, ಗುರು, ರವಿಚಂದ್ರನ್‌, ಚಂದ್ರಶೇಖರ್‌, ಜಿಪಂ ಎಇಇ ರಾಮಚಂದ್ರ ದೇಶಪಾಂಡೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಎಂಜಿನಿಯರ್‌ ಬಿ.ಪಿ.ನಾಗರಾಜ್‌, ಬಸವಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ ಜಿ.ನವೀನ್‌ಚಂದ, ಬಿಜೆಪಿ ತಾಲೂಕು ಅಧ್ಯಕ್ಷ ಜಿ.ಟಿ.ಗೀರೀಶ್‌, ಮುಖಂಡರಾದ ವಕೀಲ ಕೃಷ್ಣಾನಾಯ್ಕ, ಸಾಕೇಲ್‌ಶಿವಕುಮಾರ್‌, ಕೊತ್ತೂರು ಹನುಮಂತರಾಯಪ್ಪ, ಕರಿಯಣ್ಣ, ರವಿ, ಆಲ್ಕುಂದ್‌ರಾಜ್‌, ರವಿಶಂಕರ್‌ನಾಯ್ಕ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ