*ಚಂದನ್ ಡಿ.ಎನ್.
ಗುಬ್ಬಿ: ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಕುಡಿವ ನೀರು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ಕುಡಿವ ನೀರಿನ ಸಮಸ್ಯೆ: ಬಸ್ ನಿಲ್ದಾಣ ಪ್ರಾರಂಭವಾಗಿ ಹಲವು ವರ್ಷ ಕಳೆದರೂ ಇದುವರೆಗೂ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿವ ನೀರಿನ ಯಂತ್ರ ಅಳವಡಿಸಿಲ್ಲ. ತಾಲೂಕಿನ ನಾನಾ ಭಾಗಗಳಿಂದ ಪ್ರತಿ ದಿನ ಸಾವಿರಾರು ಮಂದಿ ಪ್ರಯಾಣಿಕರು ಇಲ್ಲಿನ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಶುದ್ಧ ಕುಡಿವ ನೀರಿಲ್ಲದೆ ದಣಿವಾರಿಸಿಕೊಳ್ಳಲು ಅಂಗಡಿಯಲ್ಲಿ ಹಣ ಕೊಟ್ಟು ನೀರು ಕೊಳ್ಳುತ್ತಾರೆ. ಆದರೆ ಬಡವರು ಮಾತ್ರ ಬಾಯಾರಿಕೆಯಿಂದಲೇ ತೆರಳುವ ದುಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಬಸ್ ನಿಲ್ದಾಣದಲ್ಲಿ ದಾನಿಗಳು ನಿರ್ಮಿಸಿಕೊಟ್ಟಿರುವ ನೀರಿನ ಟ್ಯಾಂಕ್ ಕಸದ ತೊಟ್ಟಿಯಾಗಿದೆ. ಪ್ರಯಾಣಿಕರಿಗೆ ಕುಡಿವ ನೀರಿನ ಅಗತ್ಯತೆಯನ್ನು ಪೂರೈಸಬೇಕಾದ ಕೆಎಸ್ಆರ್ಟಿಸಿ ಅಧಿಕಾರಿಗಳು ಯವುದೇ ಕ್ರಮ ಕೈಗೊಳ್ಳದೆ ಕಂಡೂ ಕಾಣದಂತಿರುವುದು ವಿಪರ್ಯಾಸ.
ಕಸದ ತೊಟ್ಟಿಯಾದ ನಿಲ್ದಾಣ: ಬಸ್ ನಿಲ್ದಾಣದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇದರಿಂದ ಪ್ರಯಾಣಿಕರಿಗೆ ಮಾರಕರೋಗಗಳು ಬರುತ್ತವೆ ಎಂಬ ಭೀತಿಯಲ್ಲಿದ್ದಾರೆ. ಬಸ್ ನಿಲ್ದಾಣದ ಆವರಣ ಸೇರಿದಂತೆ ಕೆಲವು ಕಡೆ ಸ್ವಚ್ಛತೆ ಎನ್ನುವುದು ಮಾಯವಾಗಿ, ಇದು ಒಂದು ಸರಕಾರಿ ಕಾರ್ಯಕ್ರಮವಾಗಿಯೇ ಉಳಿದಿರುವ ಸಂಗತಿ ಗುಬ್ಬಿ ಬಸ್ ನಿಲ್ದಾಣದಲ್ಲಿದೆ.
ತುಮಕೂರು ಕಡೆಯ ಮಾರ್ಗವಾಗಿ ಪ್ರಯಾಣಿಕರು ಬಸ್ ಹತ್ತಲು ನಿಲ್ಲುವ ಸ್ಥಳ ಹಾಗೂ ಶೌಚಾಯಲದ ಸುತ್ತಲೂ ದುರ್ವಾಸನೆ ಬೀರುತ್ತಿರುವುದರಿಂದ ಪ್ರಯಾಣಿಕರು ಮೂಗುಮಚ್ಚಿಕೊಂಡು ನಿಲ್ಲುವಂತಾಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದು ಸ್ವಚ್ಛತೆ ಇಲ್ಲದೆ, ಉಳಿದಿರುವ ಸ್ಥಳ ಅನವಶ್ಯಕವಾಗಿ ಬಳಕೆಯಾಗದೆ ಬಿದ್ದಿದೆ. ಆ ಕಡೆಯಲ್ಲಿ ಕೆಲವು ಮಾರ್ಗದ ಬಸ್ಗಳು ನಿಲ್ಲುವಂತೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.
ಕ್ರಮವಾಗಿ ನಿಲ್ಲದ ಬಸ್ಗಳು: ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಶಿವಮೊಗ್ಗ, ಹೊಸದುರ್ಗದ ಕಡೆ ಸಂಚರಿಸುವ ಬಸ್ಗಳು ಕ್ರಮಬದ್ಧವಾಗಿ ನಿಲ್ಲದೆ ಅಪಘಾತವಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಪ್ರತಿ ಮಾರ್ಗದ ಬಸ್ಗಳನ್ನು ಒಂದೊಂದು ಕಡೆ ನಿಲುಗಡೆ ಮಾಡಿದರೆ ಅಪಘಾತವನ್ನು ತಪ್ಪಿಸುವ ಜತೆಗೆ ಸುಗಮ ಸಂಚಾರಕ್ಕೂ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.
ಭದ್ರತೆ ಇಲ್ಲ: ಬಸ್ ನಿಲ್ದಾಣದಲ್ಲಿ ಸಣ್ಣಪುಟ್ಟ ಪಿಕ್ ಪಾಕೆಟ್ ಮತ್ತು ಕಳವು ನಡೆಯುತ್ತಿದ್ದು, ಅವುಗಳನ್ನು ತಡೆಯಲು ಬಸ್ ನಿಲ್ದಾಣಕ್ಕೆ ಸಿಸಿ ಕ್ಯಾಮೆರಾ ಅವಡಿಸಿದರೆ ಇಂತಹ ಘಟನೆಗಳನ್ನು ತಡೆಯಬಹುದು. ರಾತ್ರಿ ಮತ್ತು ಹಗಲು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಕ್ಷ ಣೆಗೆ ಕಾವಲು ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಪ್ರಯಾಣಿಕರು ಸಲಹೆ ನೀಡುತ್ತಾರೆ.
ಐಮಾಸ್ಟ್ ವಿದ್ಯುತ್ ಕಂಬದ ತಂತಿಗಳು ಪ್ರಯಾಣಿಕರು ಸಂಚರಿಸುವ ಬದಿಯಲ್ಲೇ ಇದ್ದು ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮತ್ತು ಅವಘಡ ತಪ್ಪಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ. ಸಾರಿಗೆ ಇಲಾಖೆ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಸೇರಿದಂತೆ ಕುಡಿವ ನೀರಿನ ಸಮಸ್ಯೆಯಿಂದ ಪ್ರಯಾಣಿಕರು ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಪ್ರತಿ ದಿನ ಸಾವಿರಾರು ಮಂದಿ ಪ್ರಯಾಣಿಕರು ಸಂಚರಿಸುವ ತಾಲೂಕು ಕೇಂದ್ರದ ಬಸ್ ನಿಲ್ದಾಣದಲ್ಲಿ ಕುಡಿವ ನೀರು, ಮೂಲ ಸೌಲಭ್ಯಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕ್ರಮ ವಹಿಸಬೇಕು.
-ಶ್ರೀನಿವಾಸ್, ಪ್ರಯಾಣಿಕ
ಪಟ್ಟಣ ಪಂಚಾಯಿತಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಯುಜಿಡಿ ಕಾಮಗಾರಿ ಕೈಗೊಂಡಾಗ ಬಸ್ ನಿಲ್ದಾಣಕ್ಕೆ ಸಂರ್ಕಿಸುವ ನೀರಿನ ಪೈಪ್ ಕಡಿತ ಮಾಡಲಾಗಿದೆ. ಆದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ. ಸಿ.ಸಿ. ಕ್ಯಾಮೆರಾ ಮತ್ತು ಕಸದ ತೊಟ್ಟಿ, ಇನ್ನೊಂದು ಪ್ಲಾಟ್ಫಾರಂ ನಿರ್ಮಿಸುವ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ
-ನಾಗರಾಜು, ಸಂಚಾರಿ ನಿಯಂತ್ರಕ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಗುಬ್ಬಿ
ಗುಬ್ಬಿ: ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಕುಡಿವ ನೀರು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ಕುಡಿವ ನೀರಿನ ಸಮಸ್ಯೆ: ಬಸ್ ನಿಲ್ದಾಣ ಪ್ರಾರಂಭವಾಗಿ ಹಲವು ವರ್ಷ ಕಳೆದರೂ ಇದುವರೆಗೂ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿವ ನೀರಿನ ಯಂತ್ರ ಅಳವಡಿಸಿಲ್ಲ. ತಾಲೂಕಿನ ನಾನಾ ಭಾಗಗಳಿಂದ ಪ್ರತಿ ದಿನ ಸಾವಿರಾರು ಮಂದಿ ಪ್ರಯಾಣಿಕರು ಇಲ್ಲಿನ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಶುದ್ಧ ಕುಡಿವ ನೀರಿಲ್ಲದೆ ದಣಿವಾರಿಸಿಕೊಳ್ಳಲು ಅಂಗಡಿಯಲ್ಲಿ ಹಣ ಕೊಟ್ಟು ನೀರು ಕೊಳ್ಳುತ್ತಾರೆ. ಆದರೆ ಬಡವರು ಮಾತ್ರ ಬಾಯಾರಿಕೆಯಿಂದಲೇ ತೆರಳುವ ದುಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಬಸ್ ನಿಲ್ದಾಣದಲ್ಲಿ ದಾನಿಗಳು ನಿರ್ಮಿಸಿಕೊಟ್ಟಿರುವ ನೀರಿನ ಟ್ಯಾಂಕ್ ಕಸದ ತೊಟ್ಟಿಯಾಗಿದೆ. ಪ್ರಯಾಣಿಕರಿಗೆ ಕುಡಿವ ನೀರಿನ ಅಗತ್ಯತೆಯನ್ನು ಪೂರೈಸಬೇಕಾದ ಕೆಎಸ್ಆರ್ಟಿಸಿ ಅಧಿಕಾರಿಗಳು ಯವುದೇ ಕ್ರಮ ಕೈಗೊಳ್ಳದೆ ಕಂಡೂ ಕಾಣದಂತಿರುವುದು ವಿಪರ್ಯಾಸ.
ಕಸದ ತೊಟ್ಟಿಯಾದ ನಿಲ್ದಾಣ: ಬಸ್ ನಿಲ್ದಾಣದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇದರಿಂದ ಪ್ರಯಾಣಿಕರಿಗೆ ಮಾರಕರೋಗಗಳು ಬರುತ್ತವೆ ಎಂಬ ಭೀತಿಯಲ್ಲಿದ್ದಾರೆ. ಬಸ್ ನಿಲ್ದಾಣದ ಆವರಣ ಸೇರಿದಂತೆ ಕೆಲವು ಕಡೆ ಸ್ವಚ್ಛತೆ ಎನ್ನುವುದು ಮಾಯವಾಗಿ, ಇದು ಒಂದು ಸರಕಾರಿ ಕಾರ್ಯಕ್ರಮವಾಗಿಯೇ ಉಳಿದಿರುವ ಸಂಗತಿ ಗುಬ್ಬಿ ಬಸ್ ನಿಲ್ದಾಣದಲ್ಲಿದೆ.
ತುಮಕೂರು ಕಡೆಯ ಮಾರ್ಗವಾಗಿ ಪ್ರಯಾಣಿಕರು ಬಸ್ ಹತ್ತಲು ನಿಲ್ಲುವ ಸ್ಥಳ ಹಾಗೂ ಶೌಚಾಯಲದ ಸುತ್ತಲೂ ದುರ್ವಾಸನೆ ಬೀರುತ್ತಿರುವುದರಿಂದ ಪ್ರಯಾಣಿಕರು ಮೂಗುಮಚ್ಚಿಕೊಂಡು ನಿಲ್ಲುವಂತಾಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದು ಸ್ವಚ್ಛತೆ ಇಲ್ಲದೆ, ಉಳಿದಿರುವ ಸ್ಥಳ ಅನವಶ್ಯಕವಾಗಿ ಬಳಕೆಯಾಗದೆ ಬಿದ್ದಿದೆ. ಆ ಕಡೆಯಲ್ಲಿ ಕೆಲವು ಮಾರ್ಗದ ಬಸ್ಗಳು ನಿಲ್ಲುವಂತೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.
ಕ್ರಮವಾಗಿ ನಿಲ್ಲದ ಬಸ್ಗಳು: ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಶಿವಮೊಗ್ಗ, ಹೊಸದುರ್ಗದ ಕಡೆ ಸಂಚರಿಸುವ ಬಸ್ಗಳು ಕ್ರಮಬದ್ಧವಾಗಿ ನಿಲ್ಲದೆ ಅಪಘಾತವಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಪ್ರತಿ ಮಾರ್ಗದ ಬಸ್ಗಳನ್ನು ಒಂದೊಂದು ಕಡೆ ನಿಲುಗಡೆ ಮಾಡಿದರೆ ಅಪಘಾತವನ್ನು ತಪ್ಪಿಸುವ ಜತೆಗೆ ಸುಗಮ ಸಂಚಾರಕ್ಕೂ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.
ಭದ್ರತೆ ಇಲ್ಲ: ಬಸ್ ನಿಲ್ದಾಣದಲ್ಲಿ ಸಣ್ಣಪುಟ್ಟ ಪಿಕ್ ಪಾಕೆಟ್ ಮತ್ತು ಕಳವು ನಡೆಯುತ್ತಿದ್ದು, ಅವುಗಳನ್ನು ತಡೆಯಲು ಬಸ್ ನಿಲ್ದಾಣಕ್ಕೆ ಸಿಸಿ ಕ್ಯಾಮೆರಾ ಅವಡಿಸಿದರೆ ಇಂತಹ ಘಟನೆಗಳನ್ನು ತಡೆಯಬಹುದು. ರಾತ್ರಿ ಮತ್ತು ಹಗಲು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಕ್ಷ ಣೆಗೆ ಕಾವಲು ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಪ್ರಯಾಣಿಕರು ಸಲಹೆ ನೀಡುತ್ತಾರೆ.
ಐಮಾಸ್ಟ್ ವಿದ್ಯುತ್ ಕಂಬದ ತಂತಿಗಳು ಪ್ರಯಾಣಿಕರು ಸಂಚರಿಸುವ ಬದಿಯಲ್ಲೇ ಇದ್ದು ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮತ್ತು ಅವಘಡ ತಪ್ಪಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ. ಸಾರಿಗೆ ಇಲಾಖೆ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಸೇರಿದಂತೆ ಕುಡಿವ ನೀರಿನ ಸಮಸ್ಯೆಯಿಂದ ಪ್ರಯಾಣಿಕರು ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಪ್ರತಿ ದಿನ ಸಾವಿರಾರು ಮಂದಿ ಪ್ರಯಾಣಿಕರು ಸಂಚರಿಸುವ ತಾಲೂಕು ಕೇಂದ್ರದ ಬಸ್ ನಿಲ್ದಾಣದಲ್ಲಿ ಕುಡಿವ ನೀರು, ಮೂಲ ಸೌಲಭ್ಯಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕ್ರಮ ವಹಿಸಬೇಕು.
-ಶ್ರೀನಿವಾಸ್, ಪ್ರಯಾಣಿಕ
ಪಟ್ಟಣ ಪಂಚಾಯಿತಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಯುಜಿಡಿ ಕಾಮಗಾರಿ ಕೈಗೊಂಡಾಗ ಬಸ್ ನಿಲ್ದಾಣಕ್ಕೆ ಸಂರ್ಕಿಸುವ ನೀರಿನ ಪೈಪ್ ಕಡಿತ ಮಾಡಲಾಗಿದೆ. ಆದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ. ಸಿ.ಸಿ. ಕ್ಯಾಮೆರಾ ಮತ್ತು ಕಸದ ತೊಟ್ಟಿ, ಇನ್ನೊಂದು ಪ್ಲಾಟ್ಫಾರಂ ನಿರ್ಮಿಸುವ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ
-ನಾಗರಾಜು, ಸಂಚಾರಿ ನಿಯಂತ್ರಕ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಗುಬ್ಬಿ