ಆ್ಯಪ್ನಗರ

ಶಾಸಕರಿಂದ ರೋಗಿಗಳ ತಪಾಸಣೆ

ಅಧಿಕಾರ ಸಿಕ್ಕಿದ ಮರುಕ್ಷಣವೇ ಮೂಲ ವೃತ್ತಿಗೆ ಗುಡ್‌ ಬೈ ಹೇಳುವವರೇ ಹೆಚ್ಚಿರುವಾಗ ತಮ್ಮ ವೃತ್ತಿಯನ್ನು ಬಿಡದೇ, ಉಚಿತ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಶಾಸಕ ಡಾ. ರಂಗನಾಥ್‌ ಅವರು ಸ್ವತಃ ಸ್ಟೆತೋಸ್ಕೋಪ್‌ ಹಿಡಿದು ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಶಾಸಕ ಕಮ್‌ ವೈದ್ಯ ವೃತ್ತಿಯನ್ನು ಜತೆಯಲ್ಲಿಯೇ ಮುಂದುವರೆಸಿದರು.

Vijaya Karnataka 22 Jul 2018, 5:00 am
ಕುಣಿಗಲ್‌: ಅಧಿಕಾರ ಸಿಕ್ಕಿದ ಮರುಕ್ಷಣವೇ ಮೂಲ ವೃತ್ತಿಗೆ ಗುಡ್‌ ಬೈ ಹೇಳುವವರೇ ಹೆಚ್ಚಿರುವಾಗ ತಮ್ಮ ವೃತ್ತಿಯನ್ನು ಬಿಡದೇ, ಉಚಿತ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಶಾಸಕ ಡಾ. ರಂಗನಾಥ್‌ ಅವರು ಸ್ವತಃ ಸ್ಟೆತೋಸ್ಕೋಪ್‌ ಹಿಡಿದು ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಶಾಸಕ ಕಮ್‌ ವೈದ್ಯ ವೃತ್ತಿಯನ್ನು ಜತೆಯಲ್ಲಿಯೇ ಮುಂದುವರೆಸಿದರು.
Vijaya Karnataka Web health check up by kunigal mla
ಶಾಸಕರಿಂದ ರೋಗಿಗಳ ತಪಾಸಣೆ


ತಾಲೂಕಿನ ಎಡೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಡಿ.ಕೆ. ಚಾರಿಟಬಲ್‌ ಟ್ರಸ್ಟ್‌ ಹಾಗೂ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಶಾಸಕ ರಂಗನಾಥ್‌, ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವ ಮುಖೇನ ಆರೋಗ್ಯದ ಬಗ್ಗೆ ಜನತೆಗೆ ತಿಳುವಳಿಕೆ ನೀಡಿದರು.

'15 ವರ್ಷಗಳ ಕಾಲ ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ಕಳೆದ ನಾಲ್ಕು ವರ್ಷದಿಂದ ನನ್ನ ಹುಟ್ಟೂರು ಕುಣಿಗಲ್‌ ಕ್ಷೇತ್ರದಲ್ಲಿ ಸಕ್ರಿಯನಾಗಿರುವ ನನ್ನನ್ನು ಜನತೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಕ್ಷೇತ್ರ ಸಂಚಾರದ ಸಮಯದಲ್ಲಿ ಗ್ರಾಮೀಣ ಭಾಗದ ಬಡಜನ ಆರ್ಥಿಕ ಸಂಕಷ್ಟದಿಂದ ಆರೋಗ್ಯದ ವಿಚಾರದಲ್ಲಿ ಉದಾಸೀನ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಬಡ ಜನರಿಗೆ ಆರೋಗ್ಯ ಸೇವೆ ಒದಗಿಸಲು ತೀರ್ಮಾನ ಮಾಡಲಾಯಿತು. ಪ್ರಥಮವಾಗಿ ಎಡೆಯೂರು ಹೋಬಳಿಯಿಂದ ಆರೋಗ್ಯ ಶಿಬಿರ ಆಯೋಜಿಸಲಾಗಿದೆ' ಎಂದು ಶಾಸಕ ರಂಗನಾಥ್‌ ತಿಳಿಸಿದರು.

ಇನ್ನು ಶಿಬಿರದಲ್ಲಿ ಅಂದಾಜು 942 ಮಂದಿ ಚಿಕಿತ್ಸೆ ಪಡೆದುಕೊಂಡರು. ಜತೆಗೆ 100 ಮಂದಿ ಹಿರಿಯ ನಾಗರೀಕರಿಗೆ ವಾಕಿಂಗ್‌ ಸ್ಟಿಕ್‌ ಹಾಗೂ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. ಅಲ್ಲದೇ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ವೈದ್ಯರು, ತಾಲೂಕು ಆರೋಗ್ಯ ಇಲಾಖೆಯ ವೈದ್ಯರು ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧ ನೀಡಿದರು.

ಕಾರ್ಯಕ್ರಮದಲ್ಲಿ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಲಿಂಗೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಶಾಂತಲಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣ ಗೌಡ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ