ಆ್ಯಪ್ನಗರ

ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ

ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ 1ರ ವೇಳೆ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ 3 ಮೇಕೆ, 2 ಮರಿಗಳು, 3 ಕ್ವಿಂಟಾಲ್‌ ರಾಗಿ, 1 ದ್ವಿಚಕ್ರವಾಹನ, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾದ ಘಟನೆ ವರದಿಯಾಗಿದೆ.

Vijaya Karnataka 19 Jan 2019, 5:00 am
ತುರುವೇಕೆರೆ: ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ 1ರ ವೇಳೆ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ 3 ಮೇಕೆ, 2 ಮರಿಗಳು, 3 ಕ್ವಿಂಟಾಲ್‌ ರಾಗಿ, 1 ದ್ವಿಚಕ್ರವಾಹನ, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾದ ಘಟನೆ ವರದಿಯಾಗಿದೆ.
Vijaya Karnataka Web hulikereturuvekere taluk accidental fire hut destroyed
ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ


ತಾಲೂಕಿನ ಹುಲಿಕೆರೆ ಗ್ರಾಮದ ಸವಿತಾ, ಮಗಳೊಂದಿಗೆ ರಾತ್ರಿ ಮಲಗಿದ್ದ ವೇಳೆ 1 ಗಂಟೆಗೆ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಾಕಿದೆ. ಬೆಂಕಿಯ ಜ್ವಾಲೆ ಇಡೀ ಮನೆಯನ್ನೇ ವ್ಯಾಪಿಸಿ ಅದರ ತೀವ್ರತೆಯಿಂದ ಉಂಟಾದ ಶಾಖಕ್ಕೆ ಮೊದಲಿಗೆ ಸವಿತಾ ಎಚ್ಚರಗೊಂಡಿದ್ದಾರೆ. ಪ್ರಾಣ ಭಯದಿಂದ ಮಗಳನ್ನು ರಕ್ಷಿಸಿ ಹೊರಬರುವುದೇ ದುಸ್ಸಾಹಸವಾಗಿದೆ. ಆನಂತರ ಗ್ರಾಮಸ್ಥರನ್ನು ಎಬ್ಬಿಸಿ ಬೆಂಕಿಯ ಹತೋಟಿಗೆ ಪ್ರಯತ್ನಿಸಿದರಾದರೂ ಆ ವೇಳೆಗೆ ಬೆಂಕಿ ಇಡೀ ಗುಡಿಸಲನ್ನು ವ್ಯಾಪಿಸಿದೆ. ಇದರಿಂದಾಗಿ ಮನೆಯಲ್ಲಿ ರಾಗಿ, ಇನ್ನಿತರ ದವಸಧಾನ್ಯ, ಪಾತ್ರೆಗಳು, ಬೈಕ್‌, ರೊಪ್ಪದಲ್ಲಿ ಕಟ್ಟಿದ್ದ ಮೇಕೆ, ಮೇಕೆಮರಿಗಳು ಸಂಪುರ್ಣ ದಹಿಸಿವೆ.

ಘಟನೆಯಲ್ಲಿ ಕೂಲಿಯೊಂದಿಗೆ ಇಡೀ ಕುಟುಂಬ ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಿದ್ದಂತಾಗಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್‌ ನಹೀಮ್‌ ಉನ್ನಿಸಾ, ಪಶು ಆಸ್ಪತ್ರೆಯ ಸದಾಶಿವಮೂರ್ತಿ, ಮೊದಲಾದವರು ಭೇಟಿ ನೀಡಿ ನಷ್ಟದ ಅಂದಾಜು ರೂಪಿಸಿ ರಾಷ್ಟ್ರೀಯ ವಿಪತ್ತು ಯೋಜನೆಯಡಿ ಸಾಧ್ಯವಿರುವ ನೆರವು ದೊರಕಿಸುವ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ