ಆ್ಯಪ್ನಗರ

ಶಿರಾ ಚುನಾವಣೆಯಲ್ಲಿ ಗೆಲ್ಲಿಸಿದರೆ ಮಾತ್ರ ರಾಜಕೀಯದಲ್ಲಿ ಮುಂದುವರಿಯುತ್ತೇನೆ - ಎಚ್‌ಡಿಕೆ

ಕಾಂಗ್ರೆಸ್ ಸರಕಾರದ ಮೈತ್ರಿ ಸರಕಾರದಲ್ಲಿ ನನ್ನನ್ನು ಗುಮಾಸ್ತನ ರೀತಿಯಲ್ಲಿ ನಡೆಸಿಕೊಂಡರು. ಅಲ್ಪಸಂಖ್ಯಾತರು ಎಷ್ಟು ದಿನ ಕಾಂಗ್ರೆಸ್‌ನವರ ಮಾತನ್ನು ಕೇಳುತ್ತೀರಿ. ಎರಡು ರಾಷ್ಟ್ರಿಯ ಪಕ್ಷಗಳ ಕುತಂತ್ರ ಅರಿಯಿರಿ ಎಂದು ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Vijaya Karnataka 30 Sep 2020, 6:13 pm
ಶಿರಾ: ಈ ಬಾರಿಯ ಶಿರಾ ಉಪಚುನಾವಣೆಯಲ್ಲಿ ಜನತೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿದರೆ ಮಾತ್ರ ನಾನು ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮುಂದುವರೆಯುತ್ತೇನೆ. ನಾನು ರಾಜಕೀಯದಲ್ಲಿ ಮುಂದುವರೆಯಬೇಕಾ ಬೇಡವಾ ಎಂಬುದನ್ನು ಜನತೆ ತೀರ್ಮಾನಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web Kumaraswamy-


ಶಿರಾದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಮೈತ್ರಿ ಸರಕಾರದಲ್ಲಿ ನನ್ನನ್ನು ಗುಮಾಸ್ತನ ರೀತಿ ನಡೆಸಿಕೊಂಡರು. ಅಲ್ಪಸಂಖ್ಯಾತರು ಎಷ್ಟು ದಿನ ಕಾಂಗ್ರೆಸ್‌ನವರ ಮಾತು ಕೇಳುತ್ತೀರಿ. ಎರಡು ರಾಷ್ಟ್ರಿಯ ಪಕ್ಷಗಳ ಕುತಂತ್ರ ಅರಿಯಿರಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ನಾಯಕ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಕೆಲಸ ಮಾಡಿದ್ದು ಯಾರೋ ಅದನ್ನು ಉಪಯೋಗಿಸುತ್ತಿರುವುದೋ ಯಾರೋ. ಕಳಪೆ ಸಾರಾಯಿ ಕೊಡುತ್ತಿದ್ದರು ಅದನ್ನು ನಿಷೇದ ಮಾಡಿದ್ದು ಕುಮಾರಸ್ವಾಮಿ. ಲಾಟರಿ ನಿಷೇದ ಮಾಡಿದೆ ಎಂದು ಅವರು ವಿವರಿಸಿದರು.

ಸರಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ, ಸಂಪತ್ಭರಿತ ರಾಜ್ಯ ನಮ್ಮದು. ಪ್ರಧಾನಿಗಳು ಆತ್ಮನಿರ್ಭರ್ ಎನ್ನುತ್ತಾರೆ. ಆದರೆ, ನಾನು ಸಿಎಂ ಆದಾಗ ಒಂದೊಂದು ಜಿಲ್ಲೆಯಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ ಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. ಭದ್ರ ಮೇಲ್ದಂಡೆ ಯೋಜನೆ ತೀರ್ಮಾನ ತೆಗೆದುಕೊಂಡಿದ್ದು ನಾನು. ಚಿತ್ರದುರ್ಗಕ್ಕೆ ನೀರು ಕೊಡಲು ಮಾಡಿದ ಯೋಜನೆ ಇದು. ಅದಾದ ಬಳಿಕ 2006ರಲ್ಲಿ ತುಮಕೂರು ಕೋಲಾರ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಿದೆ. ಕಡಿಮೆ ಅವಧಿಯಲ್ಲಿ ಕೆಲಸ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಚುನಾವಣೆ ಅಗ್ನಿ ಪರೀಕ್ಷೆ. ಮುಂದಿನ ದಿನಗಳಲ್ಲಿ ಈ ರಾಜ್ಯದ ಜನತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಎರಡು ಮೂರು ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ನಿಮ್ಮಗಳ ತೀರ್ಮಾನ ತೆಗೆದುಕೊಂಡು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ