ಆ್ಯಪ್ನಗರ

ಪೊಲೀಸರು ದೂರು ತೆಗೆದುಕೊಳ್ಳದಿದ್ದರೆ ನೇರ ಕೋರ್ಟ್‌ನಲ್ಲೇ ದೂರು ದಾಖಲಿಸಲು ಅವಕಾಶವಿದೆ!

ಪೊಲೀಸ್‌ ಠಾಣೆಗಳಲ್ಲಿ ನೀವು ನೀಡುವ ದೂರನ್ನು ದಾಖಲಿಸಿಕೊಳ್ಳದಿದ್ದರೆ ನೇರವಾಗಿ ಕೋರ್ಟ್‌ಗೆ ಬಂದು ದೂರು ದಾಖಲಿಸಲೂ ಅವಕಾಶವಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ನೂರುನ್ನೀಸ ತಿಳಿಸಿದರು.

Vijaya Karnataka Web 16 Jan 2022, 7:15 pm
ತಿಪಟೂರು: ಪೊಲೀಸ್‌ ಠಾಣೆಗಳಲ್ಲಿ ನೀವು ನೀಡುವ ದೂರನ್ನು ದಾಖಲಿಸಿಕೊಳ್ಳದಿದ್ದರೆ ನೇರವಾಗಿ ಕೋರ್ಟ್‌ಗೆ ಬಂದು ದೂರು ದಾಖಲಿಸಲೂ ಅವಕಾಶವಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ನೂರುನ್ನೀಸ ತಿಳಿಸಿದರು.
Vijaya Karnataka Web court


ನಗರದ ಕಲ್ಪತರು ಕಾಲೇಜು ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಕಲ್ಪತರು ಪ್ರಥಮದರ್ಜೆ ಕಾಲೇಜು ಸಂಯುಕ್ತವಾಗಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಯುವ ಸಪ್ತಾಹ ಹಾಗೂ ಕಾನೂನು ಅರಿವು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಯುವ ಜನತೆಯ ಮೇಲೆ ಬಹಳ ನಂಬಿಕೆ, ವಿಶ್ವಾಸ ಇಟ್ಟಿದ್ದರು. ಆದರೆ ಈಗಿನ ಯುವ ಜನತೆ ಅವರ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಹೇಳಿದ ಅವರು, ಇಡೀ ಜಗತ್ತಿನಲ್ಲಿ ಮಾದಕವಸ್ತು ಜಾಲ ಐಟಿ-ಬಿಟಿ ಕಂಪನಿಗಿಂತಲೂ ಹೆಚ್ಚು ವಿಸ್ತರಿಸಿದೆ. ಎರಡನೆಯ ಸ್ಥಾನದಲ್ಲಿ ಮಹಿಳಾ ಮತ್ತು ಮಕ್ಕಳ ಅನೈತಿಕ ಕಳ್ಳಸಾಗಾಣಿಕೆ ಜಾಲ ಇದ್ದರೆ ಮೂರನೇ ಸ್ಥಾನದಲ್ಲಿ ವೇಶ್ಯಾವಾಟಿಕೆ ಇದೆ. ಈ ಮೂರೂ ವಿಚಾರಗಳೂ ಒಂದಕ್ಕೊಂದು ಸಂಬಂಧ ಹೊಂದಿದ್ದು ಇದೆಲ್ಲದರಲ್ಲೂ ದೇಶದ ಯುವಕ ಯುವತಿಯರೇ ಬಲಿಪಶುಗಳಾಗುತ್ತಿದ್ದಾರೆ ಎಂದು ಬೇಸರಿಸಿದರು.

ಕ್ಲೀನರ್‌ ಅಲ್ಲ ಎಂದು ಹೆಲ್ಪರ್‌ಗೆ ವಿಮೆ ನಿರಾಕರಿಸಿದ್ದ ಕಂಪನಿಗೆ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್

ರಾಜ್ಯದಲ್ಲಿ ಎಷ್ಟೋ ಕಾಣೆಯಾದ ಹೆಣ್ಣುಮಕ್ಕಳು ಪತ್ತೆಯಾಗುವುದೇ ಇಲ್ಲ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಆನ್‌ಲೈನ್‌ ಕ್ರೈಂ ಹೆಚ್ಚಾಗಿದೆ. ಸಾವಿರಾರು ನಕಲಿ ಖಾತೆಗಳನ್ನು ಸೃಷ್ಟಿಸಿ ಯುವ ಜನತೆಯನ್ನು ಆಮಿಷದಿಂದ ಸೆಳೆಯಲು ಬಲೆ ಬೀಸಲಾಗುತ್ತಿದೆ. ಇವೆಲ್ಲವುಗಳಿಂದ ಯುವ ಜನತೆ ದೂರವಿರಬೇಕು. ವಿವೇಕಾನಂದರ ತತ್ವಾದರ್ಶ ಪಾಲಿಸಿ ದೇಶಭಕ್ತಿ ಬೆಳೆಸಿಕೊಳ್ಳಬೇಕು. ಈ ಎಲ್ಲ ಸಮಸ್ಯೆಗಳಿಗೆ ಯುವಜನತೆಯೇ ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್‌ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ನಿಲ್ಲಲಿ ಎಂದು ಹುಟ್ಟಿನಿಂದ ಕೊನೆಯವರೆಗೂ ಮಹಿಳೆಯರಿಗೆ ಹಲವಾರು ಕಾಯ್ದೆಗಳು ರಕ್ಷಣೆ ನೀಡುತ್ತಿವೆ ಎಂದರು.

ಅಧಿಕ ಸಿವಿಲ್‌ ನ್ಯಾಯಾಧೀಶ ಎಸ್‌.ಚಂದನ್‌ ಮಾತನಾಡಿ, ಯುವಜನತೆ ವಿವೇಕಾನಂದರ ಜೀವನಚರಿತ್ರೆ ಓದಿದರೆ ಪರಿವರ್ತಿತರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಾಪಿಂಗ್‌ ಮಾಲ್‌ಗಳು ಪಾರ್ಕಿಂಗ್‌ ಶುಲ್ಕ ತೆಗೆದುಕೊಳ್ಳುವಂತಿಲ್ಲ : ಕೇರಳ ಹೈಕೋರ್ಟ್‌

ವಕೀಲರ ಸಂಘದ ಅಧ್ಯಕ್ಷ ಕೆ.ಆರ್‌.ದಯಾನಂದ್‌, ಕಾರ್ಯದರ್ಶಿ ಅಜಯ್‌, ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ದೀಪಕ್‌, ಬಾಗೇಪಲ್ಲಿ ನಟರಾಜು, ಬಿ.ಎಸ್‌.ಉಮೇಶ್‌, ಕಾರ್ಯದರ್ಶಿಗಳಾದ ಸುಧಾಕರ್‌, ಎಂ.ಆರ್‌.ಸಂಗಮೇಶ್‌, ಖಜಾಂಚಿ ಶಿವಪ್ರಸಾದ್‌, ಪ್ರಾಂಶುಪಾಲ ಚಿತ್ತರಂಜನ್‌ ರೈ ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಕಾನೂನಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ನ್ಯಾಯಾಧೀಶರು ಹಾಗೂ ವಕೀಲರು ಉತ್ತರ ನೀಡಿದರು. ಕಾನೂನು ತಿಳಿದುಕೊಳ್ಳಲು ಹಾಗೂ ಪಾಲಿಸಲು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ