ಆ್ಯಪ್ನಗರ

​ಶ್ರೀಗಳ ಇಚ್ಛೆ ಇರುವವರೆಗೂ ಚಿಕಿತ್ಸೆ ನೀಡುತ್ತೇವಷ್ಟೆ:​ ಡಾ.ರವೀಂದ್ರ

ಯಾರು ಕೂಡ ಈ ವಯಸ್ಸಿನಲ್ಲಿ 6 ಬಾರಿ ಎಂಡೋಸ್ಕೋಪಿ ಮಾಡಿಸಿಕೊಂಡೇ ಇಲ್ಲ. ಸರ್ಜರಿ ಮಾಡಿಸಿಕೊಂಡು ಮನೆಗೂ ಬಂದಿಲ್ಲ. ವೈದ್ಯಕೀಯ ಲೋಕದಲ್ಲಿ ಕೂಡ ಏನು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಪಂಚದಲ್ಲಿ ಶ್ರೀಗಳು 6ನೇ ವ್ಯಕ್ತಿ, ಹೀಗೆ ಓಡಾಡುತ್ತಿರುವುದು ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದರು.

Vijaya Karnataka Web 10 Jan 2019, 8:53 pm
ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯ ಪರಿಶೀಲನೆ ಮಾಡಿದ್ದೇವೆ. ಅವರ ದೇಹದಲ್ಲಿ ಪ್ರೊಟೀನ್ ಅಂಶ ಸುಧಾರಣೆ ಆಗಿದೆ. ಆದರೂ ನಾವು ಅಂದುಕೊಂಡಷ್ಟು ಸುಧಾರಣೆ ಕಂಡಿಲ್ಲ. ಶ್ರೀಗಳಿಗೆ ಸ್ವತಃ ಉಸಿರಾಡಲು ಆಗುತ್ತಿಲ್ಲ. ನಿನ್ನೆ ಕೂಡ ಶ್ರೀಗಳ ಶ್ವಾಸಕೋಶದಲ್ಲಿನ 600 ಎಂ.ಎಲ್ ನೀರನ್ನು ತೆಗೆಯಲಾಗಿದೆ ಎಂದು ಡಾ.ರವೀಂದ್ರ ತಿಳಿಸಿದ್ದಾರೆ.
Vijaya Karnataka Web shree


ಶ್ರೀಗಳ ಆರೋಗ್ಯ ತಪಾಸಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶ್ರೀಗಳ ಶ್ವಾಸಕೋಶ ಸುಧಾರಣೆ ಆಗಬೇಕು. ಈಗಲೂ ಅಸಿಸ್ಟ್ ಮಾಡಿಯೇ ಆಕ್ಸಿಜನ್ ನೀಡುತ್ತಿದ್ದೇವೆ. ಅವರಿಗೆ ಉಸಿರಾಡುವ ಶಕ್ತಿ ಬರುವ ತನಕ ಕಾಯಬೇಕಿದೆ ಎಂದು ಹೇಳಿದರು.

112ನೇ ವಯಸ್ಸಿನಲ್ಲಿ ಯಾವಬ್ಬ ವೈದ್ಯರು ಇಂಥಹ ಸ್ಥಿತಿ ನೋಡಿಲ್ಲ. ಯಾರು ಕೂಡ ಈ ವಯಸ್ಸಿನಲ್ಲಿ 6 ಬಾರಿ ಎಂಡೋಸ್ಕೋಪಿ ಮಾಡಿಸಿಕೊಂಡೇ ಇಲ್ಲ. ಸರ್ಜರಿ ಮಾಡಿಸಿಕೊಂಡು ಮನೆಗೂ ಬಂದಿಲ್ಲ. ವೈದ್ಯಕೀಯ ಲೋಕದಲ್ಲಿ ಕೂಡ ಏನು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಪಂಚದಲ್ಲಿ ಶ್ರೀಗಳು 6ನೇ ವ್ಯಕ್ತಿ, ಹೀಗೆ ಓಡಾಡುತ್ತಿರುವುದು ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದರು.

'ನಾವು ಚಿಕಿತ್ಸೆ ನೀಡುವುದಲ್ಲ. ಅವರ ಇಚ್ಛೆ ಎಲ್ಲಿವರೆಗೂ ಇದೆಯೋ ಅಲ್ಲಿಯವರೆಗೂ ನಾವು ಚಿಕಿತ್ಸೆ ನೀಡುತ್ತೇವಷ್ಟೇ ಎಂದು ಡಾ.ರವೀಂದ್ರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ