ಆ್ಯಪ್ನಗರ

ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತೇನೆ ಎಂದವನನ್ನು ಕೊಚ್ಚಿ ಕೊಂದ ಗುಬ್ಬಿಯ ಯುವಕ

ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಮುದಿಗೆರೆ ಗ್ರಾಮದ ವಾಸಿ ರಾಜಣ್ಣ ಎಂಬಾತ ತನ್ನ ಕುಟುಂಬದ ಜೊತೆ ಜಗಳ ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ಹೆಂಡತಿಯಿಂದ ದೂರವಾಗಿ ಬೇರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಅದೇ ಗ್ರಾಮದ ವಾಸಿ ಮಹೇಶ್ ಎಂಬುವನ ಜೊತೆ ಭಾನುವಾರ ಸಂಜೆ 7:00 ಸಮಯದಲ್ಲಿ ಮದ್ಯ ಸೇವಿಸುವಾಗ ‘ಮಹೇಶ ನಾನು ನಿನ್ನ ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತೇನೆ. ನನಗೆ ಹೆಂಡತಿ ಇಲ್ಲ, ದಯವಿಟ್ಟು ನನಗೆ ಸಹಕರಿಸು’ ಎಂದು ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹೇಶ ಆರೋಪಿಯನ್ನು ಕೊಲೆ ಮಾಡಿದ್ದಾನೆ.

Vijaya Karnataka Web 27 Sep 2021, 3:07 pm
ಗುಬ್ಬಿ: ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಕಾರಣಕ್ಕೆ ಒಲವು ವ್ಯಕ್ತಪಡಿಸಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
Vijaya Karnataka Web Seven arrested for attempted murder in Rajkot
Representative image


ತುಮಕೂರಿನ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಮುದಿಗೆರೆ ಗ್ರಾಮದ ವಾಸಿ ರಾಜಣ್ಣ(55 )ಕೊಲೆಯಾದ ವ್ಯಕ್ತಿಯಾಗಿದ್ದು, ಈತ ‘ನನಗೆ ನನ್ನ ಹೆಂಡತಿ ಇಲ್ಲ, ನಾನು ನಿನ್ನ ತಾಯಿಯ ಜೊತೆ ಸಂಬಂಧ ಇಟ್ಟುಕೊಳ್ಳುತ್ತೇನೆ ಸಹಕರಿಸು ಎಂದು ಆಕೆಯ ಮಗನ ಜೊತೆಯೇ ಕೇಳಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯ ಮಗ ರಾಜಣ್ಣ ಎಂಬಾತನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆ ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯ ಮುದಿಗೆರೆ ಗ್ರಾಮದಲ್ಲಿ ಭಾನುವಾರ 10:00 ಗಂಟೆಯ ವೇಳೆಗೆ ನಡೆದಿದೆ.
ಸಂಬಂಧಿ ಯುವಕನೊಂದಿಗೆ ಇದ್ದ ಯುವತಿಗೆ ಬೆದರಿಕೆ ಹಾಕಿ 5 ಲಕ್ಷ ರೂ.ಗೆ ಡಿಮ್ಯಾಂಡ್‌ ಮಾಡಿದ ಕಿರಾತಕರು!
ಘಟನೆಯ ವಿವರ:
ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಮುದಿಗೆರೆ ಗ್ರಾಮದ ವಾಸಿ ರಾಜಣ್ಣ ಎಂಬಾತ ತನ್ನ ಕುಟುಂಬದ ಜೊತೆ ಜಗಳ ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ಹೆಂಡತಿಯಿಂದ ದೂರವಾಗಿ ಬೇರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಅದೇ ಗ್ರಾಮದ ವಾಸಿ ಮಹೇಶ್ ಎಂಬುವನ ಜೊತೆ ಭಾನುವಾರ ಸಂಜೆ 7:00 ಸಮಯದಲ್ಲಿ ಮದ್ಯ ಸೇವಿಸುವಾಗ ‘ಮಹೇಶ ನಾನು ನಿನ್ನ ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತೇನೆ. ನನಗೆ ಹೆಂಡತಿ ಇಲ್ಲ, ದಯವಿಟ್ಟು ನನಗೆ ಸಹಕರಿಸು’ ಎಂದು ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹೇಶ, ರಾಜಣ್ಣ ಜೊತೆ ಜಗಳಕ್ಕಿಳಿದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಮರ ಕಡಿಯುವ ಮಚ್ಚಿನಿಂದ ಮಹೇಶ ರಾಜಣ್ಣನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಇದಲ್ಲದೇ, ಭಾನುವಾರ ಸಂಜೆ ನಾಲ್ಕು ಗಂಟೆಯ ವೇಳೆಗೆ ಮಹೇಶನ ಮನೆಗೆ ಹೋಗಿ ರಾಜಣ್ಣ ಕಾಫಿ ಮಾಡಿಸಿಕೊಂಡು ಬಂದಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾನಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಕುಮಾರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿಯಲ್ಲಿ ಡಬಲ್ ಮರ್ಡರ್: ನಡತೆ ಶಂಕಿಸಿ ಪತ್ನಿ, ಮಗುವನ್ನು ಹತ್ಯೆಗೈದ ಪಾಪಿ ಪತಿ
ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನೇ ಕೊಂದ ಗಂಡ!
ಗುಬ್ಬಿ: ಪಟ್ಟಣದ ಮಗ್ಗದವರ ಬೀದಿಯ ಶಾಂತಾನಂದಾಶ್ರಮ ರಸ್ತೆ ಬದಿಯ ಮನೆಯಲ್ಲಿ ವಾಸವಾಗಿದ್ದ ನಾಗರಾಜು (26) ಎಂಬಾತ ತನ್ನ ಹೆಂಡತಿ ದಿವ್ಯಾ (22)ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಪೊಲೀಸ್‌ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.

ತಾಲೂಕಿನ ಜಿ. ಹೊಸಹಳ್ಳಿ ಗೇಟ್‌ ನಲ್ಲಿ ತನ್ನ ತಾಯಿಯೊಂದಿಗೆ ಫಾಸ್ಟ್‌ ಫುಡ್‌ ಹೋಟೆಲ್‌ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ನಾಗರಾಜು, ಕಳೆದ ಒಂದು ವರ್ಷದ ಹಿಂದೆ ನಿಟ್ಟೂರು ಹೋಬಳಿ ಸಂಪಿಗೆ ಬಳಿಯ ತಳವಾರಹಳ್ಳಿಯ ರವಿಕುಮಾರ್‌ ಪುತ್ರಿ ದಿವ್ಯಾಳನ್ನು ವಿವಾಹ ಮಾಡಿಕೊಂಡಿದ್ದ. ಗುಬ್ಬಿ ಪಟ್ಟಣದ ಮಗ್ಗದವರ ಬೀದಿಯಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ತಾನು ವಿವಾಹವಾಗುವ ಮೊದಲು ದಿವ್ಯಾಳಿಗೆ ಮೊತ್ತೊಬ್ಬರ ಜತೆ ಮದುವೆಯಾಗಿತ್ತು. ಈ ವಿಷಯ ಮರೆಮಾಚಿ ನನ್ನ ಜತೆ ಮದುವೆ ಮಾಡಿದ್ದಾರೆ ಎಂದು ಸುಮಾರು ದಿನಗಳಿಂದ ಹೆಂಡತಿಯನ್ನು ಅನುಮಾನಿಸಿ ಹಾಗೂ ಮನೆಗೆ ಬೇರೆಯ ವ್ಯಕ್ತಿ ಬರುತ್ತಾನೆ ಎಂದು ಪದೇ ಪದೆ ಕಲಹ ನಡೆಯುತ್ತಿತ್ತು. ಹೆಂಡತಿಯ ಚಲನ ವಲನದ ಮೇಲೆ ನಿಗಾಯಿಡಲು ಮನೆಗೆ ಸಿಸಿಟಿವಿಯನ್ನೂ ಆಳವಡಿಸಿಕೊಂಡಿದ್ದ. ಜೂನ್ 3 ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಇಬ್ಬರ ಜಗಳ ತಾರಕಕ್ಕೇರಿ ಪಕ್ಕದಲ್ಲೇ ಇದ್ದ ಚಾಕುವಿನಿಂದ ಪತ್ನಿಗೆ ಮೂರು ಬಾರಿ ಇರಿದು ಕೊಲೆ ಮಾಡಿದ್ದಾನೆ. ಈ ಘಟನೆ ಕಳೆದ ಜೂನ್‌ನಲ್ಲಿ ನಡೆದಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ