ಆ್ಯಪ್ನಗರ

ಇದೇನು ಸ್ಮಾರ್ಟ್‌ ಸಿಟಿಯೋ, ಕೆಸರು ಗದ್ದೆಯೋ..!

ಛೇ. ಇದೇನು ಸ್ಮಾರ್ಟ್‌ ಸಿಟಯೋ, ಕೆಸರು ಗದ್ದೆಯೋ ಎನ್ನುವ ನೈಜ ಸ್ಥಿತಿಯತ್ತ ತಲುಪಿರುವ ತುಮಕೂರು ನಗರದ ಜನತೆ ಕೆಸರಿನಿಂದ ಸೃಷ್ಟಿಯಾಗಿರುವ ಅವಾಂತರಕ್ಕೆ ಅಕ್ಷರಶಃ ನಲುಗಿಹೋಗುತ್ತಿದ್ದಾರೆ.

Vijaya Karnataka 24 Sep 2019, 3:57 pm
ಕೆಸರಿನಿಂದ ಸೃಷ್ಟಿಯಾಗಿರುವ ಅವಾಂತರಕ್ಕೆ ಅಕ್ಷರಶಃ ನಲುಗಿ ಹೋಗುತ್ತಿರುವ ಜನತೆ; ನಿತ್ಯ ನರಕಯಾತನೆ
Vijaya Karnataka Web is tumkur city is smart city or sludge field
ಇದೇನು ಸ್ಮಾರ್ಟ್‌ ಸಿಟಿಯೋ, ಕೆಸರು ಗದ್ದೆಯೋ..!


* ಗಿರೀಶ ಎಸ್‌. ಕಲ್ಗುಡಿ ತುಮಕೂರು

ಛೇ. ಇದೇನು ಸ್ಮಾರ್ಟ್‌ ಸಿಟಯೋ, ಕೆಸರು ಗದ್ದೆಯೋ ಎನ್ನುವ ನೈಜ ಸ್ಥಿತಿಯತ್ತ ತಲುಪಿರುವ ತುಮಕೂರು ನಗರದ ಜನತೆ ಕೆಸರಿನಿಂದ ಸೃಷ್ಟಿಯಾಗಿರುವ ಅವಾಂತರಕ್ಕೆ ಅಕ್ಷರಶಃ ನಲುಗಿಹೋಗುತ್ತಿದ್ದಾರೆ.

ಸ್ಮಾರ್ಟ್‌ಸಿಟಿ ಕನಸಿನ ಸಂಕಲ್ಪ ತೊಟ್ಟಿರುವ ನಗರ ಸಾಧಾರಣ ಮಳೆಗೆ ಕೆಸರು ಗದ್ದೆಯಂತಾಗಿ ಮಾರ್ಪಾಡಾಗುತ್ತಿದ್ದು, ಜನರನ್ನು ನೂರಾರು ಸಂಕಷ್ಟಗಳಿಗೆ ತಳ್ಳಿದೆ. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಉಂಟಾಗಿರುವ ಸಮಸ್ಯೆಗಳಿಂದಾಗಿ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಆರಂಭವೇ ಅವೈಜ್ಞಾನಿಕ: ಮಳೆಗಾಲ ಆರಂಭಕ್ಕೂ ಮುನ್ನವೇ ಆರಂಭವಾದ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ವೈಜ್ಞಾನಿಕವಾಗಿ ನಡೆಯಲಿಲ್ಲ. ಕಾಮಗಾರಿಗಳ ನೆಪದಲ್ಲಿಅಗೆದ ಗುಂಡಿಗಳನ್ನು ಡಾಂಬರೀಕರಣ ಮಾಡಲಿಲ್ಲ. ಹಾಗಾಗಿ ಮಳೆ ಬಂದಾಗಲೆಲ್ಲಾಕೆಸರು ಮಣ್ಣಿನ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದ ಪಾದಚಾರಿಗಳು, ವಾಹನ ಸವಾರರು ಸುಗಮ ಸಂಚಾರಕ್ಕೆ ಪರಿತಪಿಸುವಂತಾಗಿದೆ. ವಾಹನ ಸವಾರರು ಜೀವ ಕೈಲಿಡಿದುಕೊಂಡು ವಾಹನ ಚಲಾವಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಆಯತಪ್ಪಿ ಬಿದ್ದರೂ ಕೆಸರು ರಾಡಿ ಸ್ನಾನ ಗ್ಯಾರಂಟಿಯಾಗಿದೆ.

ನಿತ್ಯ ನರಕಯಾತನೆ: ನಗರದ ಮುಖ್ಯ ರಸ್ತೆ ಸೇರಿದಂತೆ ಬಹುತೇಕ ಎಲ್ಲಾಬಡಾವಣೆಗಳಲ್ಲೂಮಳೆಗಾಲ ಮುಗಿಯುವವರೆಗೂ ಕೆಸರಿನ ನರಕಯಾತನೆ ತಪ್ಪಿದ್ದಲ್ಲ. ಕಾಮಗಾರಿಗಳ ಅಗೆತದಿಂದಾಗಿ ಸಿಸಿ ರಸ್ತೆಗಳೇ ಮಾಯವಾಗಿವೆ. ಎಲ್ಲಾಕೆಸರು ರಸ್ತೆಗಳಾಗಿ ಮಾರ್ಪಾಡಾಗಿವೆ. ಹೀಗಾಗಿ ರಸ್ತೆಯಲ್ಲಿನಿಲ್ಲುವ ಕೆಸರು ನೀರು, ವಾಹನ ಸವಾರರು ಮತ್ತು ಪಾದಚಾರಿಗಳನ್ನು ಸಂಕಷ್ಟಕ್ಕೆ ತಳ್ಳಿದೆ. ವೇಗವಾಗಿ ಸಂಚರಿಸುವ ವಾಹನಗಳು ಕೆಸರಿನ ಮೇಲೆ ಚಲಿಸಿದರೆ ಆ ಕೆಸರು ಪಾದಚಾರಿಗೆ ಇಲ್ಲವೇ, ಪಕ್ಕದಲ್ಲಿಸಂಚರಿಸುವ ವಾಹನ ಸವಾರರ ಮೇಲೆ ಎಗುರುತ್ತದೆ. ಇದರಿಂದ ಬೇಸತ್ತಿರುವ ಜನತೆ ಕಾಟಾಚಾರಕ್ಕೆ ಸ್ಮಾರ್ಟ್‌ಸಿಟಿ ಕಾಮಗಾರಿ ಮಾಡುವುದು ಸರಿಯಲ್ಲಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಕುಸಿಯುತ್ತಿರುವ ಭೂಮಿ:

ಕಾಮಗಾರಿಯಿಂದಾಗಿ ಅಗೆದ ಜಾಗ ಮಳೆಯಿಂದಾಗಿ ಕುಸಿಯುತ್ತಿದೆ. ಅಪ್ಪಿತಪ್ಪಿ ವಾಹನಗಳು ಅಗೆದ ಜಾಗದಲ್ಲಿಸಂಚರಿಸಿದರೆ ಕುಸಿತಕ್ಕೆ ಸಿಲುಕಿಹಾಕಿಕೊಳ್ಳುತ್ತವೆ. ರಸ್ತೆಯೆಲ್ಲಾವಿಪರೀತ ಕೆಸರುಮಯವಾಗಿದ್ದು, ದ್ವಿಚಕ್ರವಾಹನಗಳ ಸವಾರರ ಪಾಡು ಹೇಳತೀರದಾಗಿದೆ. ಕೆಸರು ಗದ್ದೆಯ ರಸ್ತೆಯಲ್ಲಿಜನ ಓಡಾಡಲು ಹಿಂಸೆ ಪಡುತ್ತಿದ್ದಾರೆ.

ಅಧಿಕಾರಿಗಳ ಮಾತಿಗೆ ಕಿಮ್ಮತ್ತಿಲ್ಲ:

ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಿ, ಅಗೆದ ಜಾಗವನ್ನು ಮೊದಲಿದ್ದಂತೆಯೇ ಕಾಂಕ್ರೀಟ್‌ ಮೂಲಕ ಪುನಃ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಭೆಯೊಂದರಲ್ಲಿಆದೇಶ ನೀಡಿದ್ದರು. ಆದರೆ, ಅಧಿಕಾರಿಗಳಾಗಲಿ, ಕಾಮಗಾರಿ ಗುತ್ತಿಗೆದಾರರಾಗಲಿ ಅದಕ್ಕೆ ಕಿಮ್ಮತ್ತು ನೀಡಿಲ್ಲ. ಬದಲಿಗೆ ಅಗೆದ ಜಾಗವನ್ನು ಮನಸ್ಸಿಗೆ ಬಂದಂತೆ ಅಗೆದ ಮಣ್ಣಿನಿಂದಲೇ ಮುಚ್ಚಿ ಕೈಬಿಟ್ಟಿದ್ದಾರೆ. ಇದರಿಂದ ನಾನಾ ಸಮಸ್ಯೆಯ ಸುಳಿಯಲ್ಲಿನಗರದ ಜನತೆ ಸಿಲುಕಿಕೊಂಡಿದ್ದಾರೆ.

-----

ರಸ್ತೆಯಲ್ಲಿನಡೆದುಕೊಂಡು ಹೋಗುವುದೇ ಕಷ್ಟ. ಎಲ್ಲಿಕೆಸರು ಮೈಮೇಲೆ ಎಗುರುತ್ತದೋ ಎಂಬ ಭಯದಲ್ಲಿಓಡಾಡಬೇಕಾಗಿದೆ. ಕೆಲವೊಮ್ಮೆ ಜಾರಿ ಬೀಳುವ ಹೆದರಿಕೆಯಲ್ಲೇ ಸಂಚರಿಸಬೇಕಾಗಿದೆ. ಮಳೆಗಾಲ ಯಾವಾಗ ಮುಗಿಯುತ್ತದೆಯೋ, ಮಳೆ ಯಾಕಾದರೂ ಬರುತ್ತದೋ ಎಂಬಂತಾಗಿದೆ.

- ಕುಮಾರ್‌, ನಗರ ನಿವಾಸಿ.

-----

ಸಣ್ಣ ಪ್ರಮಾಣದ ಮಳೆ ಬಂದರೆ ನಗರ ಪೂರ್ಣವಾಗಿ ಕೆಸರು ಗದ್ದೆಯಂತಾಗುತ್ತದೆ. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ವಾಹನಗಳು ಕುಸಿತಕ್ಕೊಳಗಾಗುವ ಭೂಮಿಯಲ್ಲಿಸಿಲುಕಿಕೊಳ್ಳುತ್ತಿವೆ. ಈ ಬಗ್ಗೆ ಸ್ಮಾರ್ಟ್‌ಸಿಟಿಯವರಿಗೆ ದೂರು ನೀಡಿದರೆ, ಸ್ಮಾರ್ಟ್‌ಸಿಟಿಗೂ ಪಾಲಿಕೆಗೂ ಸಂಬಂಧವಿಲ್ಲಎನ್ನುತ್ತಾರೆ. ಹಾಗಾದರೆ ಜನರ ಸಮಸ್ಯೆಯನ್ನು ಇನ್ಯಾರ ಬಳಿ ಪರಿಹರಿಸಲಿ.

- ಗಿರಿಜಾ ಧನಿಯಾಕುಮಾರ್‌, ಪಾಲಿಕೆ ಸದಸ್ಯೆ (15ನೇ ವಾರ್ಡ್‌)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ