ಆ್ಯಪ್ನಗರ

ಪಂಜಾಬ್‌ನಲ್ಲಿ ಸಿಧು, ಕರ್ನಾಟಕದಲ್ಲಿ ಸಿದ್ದು ಕಾಂಗ್ರೆಸ್‌ ಪಕ್ಷನಾ ಮುಗಿಸ್ತಾರೆ: ಜಗದೀಶ್ ಶೆಟ್ಟರ್‌

ಕೃಷಿ ಕಾಯಿದೆಯನ್ನು ರೈತರಿಗಾಗಿ ಯೋಜನೆ ಮಾಡಿದ್ದರು. ಪ್ರತಿಪಕ್ಷಗಳು ಪಿತೂರಿ ಮಾಡಿ, ಕಾಯಿದೆ ಕುರಿತು ಅಪಪ್ರಚಾರ ಮಾಡಿದವು. ರೈತರನ್ನು ಎತ್ತಿ ಕಟ್ಟಿ ದಿಕ್ಕು ತಪ್ಪಿಸುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿವೆ. ಹೀಗಾಗಿ ಸರಕಾರ ಕೃಷಿ ಕಾಯಿದೆಯನ್ನು ವಾಪಸ್‌ ಪಡೆದಿದೆ

Vijaya Karnataka Web 19 Nov 2021, 5:21 pm
ತುಮಕೂರು: ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಲೇ ಇದೆ. ಆ ಪಕ್ಷದ ಇಬ್ಬರು ನಾಯಕರು ಮುಖ್ಯಮಂತ್ರಿ ಕುರ್ಚಿಯನ್ನು ನೋಡಿಕೊಂಡೇ ಕಾಲ ಕಳೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.
Vijaya Karnataka Web ಜಗದೀಶ್‌ ಶೆಟ್ಟರ್‌
ಜಗದೀಶ್‌ ಶೆಟ್ಟರ್‌


ತುಮಕೂರಿನಲ್ಲಿ ಜಗದೀಶ್‌ ಶೆಟ್ಟರ್ ಮಾತನಾಡಿದರು.

ತುಮಕೂರು ಜಿಲ್ಲೆಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ನಿಶ್ಚಿತ. ತುಮಕೂರು ಬಿಜೆಪಿ
ಗಂಡು ಮೆಟ್ಟಿದ ಸ್ಥಳ. ಪರಿಷತ್ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದರು.

ಸಿದ್ದರಾಮಯ್ಯ ಹಿಟ್‌ ಆಂಡ್‌ ರನ್‌ ನಾಯಕ: ಪ್ರತಾಪ್‌ ಸಿಂಹ

ದೇಶದಲ್ಲಿ ಅಭಿವೃದ್ಧಿ ಪಥ ನಿರಂತರವಾಗಿದೆ ಎಂದರೆ ಅದು ಮೋದಿ ಸರಕಾರದಿಂದ. ಅಂದು ಭ್ರಷ್ಟಾಚಾರ ಸರಕಾರ ಇತ್ತು. ಇಂದು ಎಲ್ಲ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆ. ಕೋಟ್ಯಂತರ ಜನರಿಗೆ ಉಚಿತವಾಗಿ ಕೊರೊನಾ ವ್ಯಾಕ್ಸಿನ್ ಕೊಟ್ಟಿರೋದು ಕೇಂದ್ರ ಸರಕಾರದ ಹೆಗ್ಗಳಿಕೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

ಕೃಷಿ ಕಾಯಿದೆಯನ್ನು ರೈತರಿಗಾಗಿ ಯೋಜನೆ ಮಾಡಿದ್ದರು. ಪ್ರತಿಪಕ್ಷಗಳು ಪಿತೂರಿ ಮಾಡಿ, ಕಾಯಿದೆ ಕುರಿತು ಅಪಪ್ರಚಾರ ಮಾಡಿದವು. ರೈತರನ್ನು ಎತ್ತಿ ಕಟ್ಟಿ ದಿಕ್ಕು ತಪ್ಪಿಸುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿವೆ. ಹೀಗಾಗಿ ಸರಕಾರ ಕೃಷಿ ಕಾಯಿದೆಯನ್ನು ವಾಪಸ್‌ ಪಡೆದಿದೆ ಎಂದು ಶೆಟ್ಟರ್‌ ಹೇಳಿದರು.

ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗುವುದು ನರೇಂದ್ರ ಮೋದಿ ಗುಣ. ಹೀಗಾಗಿ ಎಲ್ಲರ ಹಿತಕ್ಕಾಗಿ ಕೃಷಿ ಕಾಯಿದೆ ವಾಪಸ್‌ ಪಡೆಯುವ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಡಿಕೆಶಿಗೆ ಜಲಿಯನ್‌ ವಾಲಾ ಬಾಗ್‌ ಎಂದು ಹೇಳುವುದೇ ಬರಲ್ಲ: ಆರಗ ಜ್ಞಾನೇಂದ್ರ ವ್ಯಂಗ್ಯ

ಕಾಂಗ್ರೆಸ್ ಇಡೀ ದೇಶದಲ್ಲಿ ದುರ್ಬಲವಾಗಿದೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿ ಹಲವು ನಾಯಕರು ಇದ್ದಾರೆ. ಇದೇ ಭ್ರಮೆಯಲ್ಲಿ ಕಾಂಗ್ರೆಸ್‌ನ ಇಬ್ಬರು ನಾಯಕರು ಸಿಎಂ ಆಗುವ ಕನಸು ಕಾಣುತಿದ್ದಾರೆ. ಆದರೆ ಪಂಜಾಬ್‌ನಲ್ಲಿ ಸಿಧು ಕರ್ನಾಟಕದಲ್ಲಿ ಸಿದ್ದು ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸ್ತಾರೆ ಎಂದು ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಕಾಂಗ್ರೆಸ್ ಪಕ್ಷ ಸದಸ್ಯತ್ವ ಅಭಿಯಾನ ಶುರು ಮಾಡಿದೆ. ದಯವಿಟ್ಟು ಬೆಂಗಳೂರಿನಲ್ಲಿ ಎಷ್ಟು ಜನರು ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ಬಹಿರಂಗ ಪಡಿಸಲಿ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಹಾಗಾಗಿ ಯಾರೂ ಸದಸ್ಯತ್ವ ಪಡೀತಿಲ್ಲ ಎಂದು ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ