ಸಿರಾಜ್ ಅಹಮದ್ ಕೆ.ಎ ಕೊಡಿಗೇನಹಳ್ಳಿ
ತುಮಕೂರು: ಎತ್ತ ನೋಡಿದರೂ ಬರಡು ಭೂಮಿ, ಸುತ್ತಲೂ ಜಾಲಿ ಮರಗಳು ಇವುಗಳ ನಡುವೆ ಪಚ್ಚೆ ಹುಲ್ಲಿನಲ್ಲಿ ಚಿನ್ನಾಟವಾಡುವ ಕೃಷ್ಣಮೃಗಗಳಿಗೆ ಆಹಾರವಿಲ್ಲದೆ ವನ್ಯಧಾಮದಿಂದ ಜಿಂಕೆ ಸಂತತಿ ನಶಿಸುತ್ತಿದೆ.
ಮೈದನಹಳ್ಳಿಯ ಜಯಮಂಗಲಿ ಕೃಷ್ಣಮೃಗ ವನ್ಯಧಾಮವು ಸುಮಾರು 850 ಎಕರೆ ವಿಸ್ತೀರ್ಣದಲ್ಲಿ ಅಪರೂಪದ ಜಿಂಕೆ ಸಂತತಿ ಮಾತ್ರವಲ್ಲದೆ ವಿವಿಧ ರೀತಿಯ ಸಸ್ಯ ಪ್ರಬೇಧಗಳು ಹಾಗೂ ಕ್ರೀಯಾಶೀಲ ನಿಶಾಚರಿ ಪ್ರಾಣಿ ಪಕ್ಷಿಗಳಿಂದ ಈ ಹುಲ್ಲುಗಾವಲು ವಿಸ್ಮಯಗಳ ಕಣಜವಾಗಿ ವನ್ಯಜೀವಿಪ್ರಿಯರನ್ನು ಆಕರ್ಷಿಸುತ್ತಿದೆ.
ಈ ಹಿಂದೆ ವನ್ಯಜೀವಿಗಳಿಗೆ ಹುರಳಿ, ಮೆಕ್ಕೆಜೋಳ, ತೊಗರಿ ಮತ್ತು ಅಲಸಂಡೆ ಬಿತ್ತನೆ ಮಾಡಲಾಗುತ್ತಿತ್ತು. ಹೀಗಾಗಿ ಬಿಸಿಲೇರುತ್ತಿದ್ದರೂ ಮೇವಿಗಾಗಿ ಪ್ರಾಣಿಗಳು ಹಿಂಡು ಹಿಂಡಾಗಿ ಬಯಲಲ್ಲಿ ಕಾಣಿಸುತ್ತಿದ್ದವು. ಇದೀಗಾ ಮೇವು ಮತ್ತು ನೀರಿನ ಕೊರತೆಯಿಂದ ಕೃಷ್ಣಮೃಗಗಳು ಪಾವಗಡ ಸೇರಿದಂತೆ ಸೀಮಾಂದ್ರ ಕಡೆ ಚದರುತ್ತಿದ್ದು ಆಹಾರಕ್ಕಾಗಿ ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ.
ಇಲ್ಲಿನ ವನ್ಯ ಜೀವಿಗಳು ಮೇವು ಹುಡುಕುವ ತವಕದಲ್ಲಿ ಅಪಘಾತದಿಂದ ಮೃತಪಟ್ಟ ಉದಾಹರಣೆಗಳಿವೆ, ಸಿಂಗನಹಳ್ಳಿ-ಮಸರಪಡಿ ಬಳಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಸಾವನ್ನಪ್ಪಿದರೆ, ಯಾಕರ್ಲಹಳ್ಳಿ ಗ್ರಾಮದ ತೋಟದ ಬಾವಿಯಲ್ಲಿ ಬಿದ್ದು ಜಿಂಕೆಯೊಂದು ಮೃತಪಟ್ಟಿತ್ತು. ಕಲಿದೇವಪುರದ ಹೊರವಲಯದ ಜಮೀನಿನಲ್ಲಿ ಅವರೆಕಾಯಿ ಬಳ್ಳಿ ತಿಂದು ಜಿಂಕೆ ಸತ್ತಿದೆ. ಪುರವರ ಸಮೀಪದ ಜಮೀನಿನಲ್ಲಿ ಸಿಕ್ಕ ಕೃಷ್ಣಮೃಗದ ಮರಿಯನ್ನು ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಈ ವನ್ಯಧಾಮ ಆಂಧ್ರದ ಗಡಿಗೆ ಅಂಟಿಕೊಂಡಿದ್ದು ನಿತ್ಯ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಆ ಭಾಗದಲ್ಲಿ ಒಂದೂ ಮಾರ್ಗಸೂಚಿ ಫಲಕಗಳಿಲ್ಲ, ಪ್ರವಾಸಿಗರು ಜೂನ್ನಿಂದ ಸೆಪ್ಟಂಬರ್ ವರೆಗೆ ಈ ವನ್ಯಜೀವಿ ಧಾಮಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯವೆಂದು ಬರುತ್ತಾರೆ.
ಪುರವರ, ಕೊಡಿಗೇನಹಳ್ಳಿಯಲ್ಲಿ ಸಣ್ಣ ಫಲಕಗಳು ಬಿಟ್ಟರೆ ಬೇರೆಲ್ಲೂ ಇಲ್ಲ, ಬರುವ ಪ್ರವಾಸಿಗರಿಗೆ ಮಾರ್ಗಸೂಚಿ ಹಾಗೂ ಸೂಚನಾ ಫಲಕಗಳ ಕೊರತೆ ಎದ್ದುಕಾಣುತ್ತಿದೆ. ವನ್ಯಧಾಮದಲ್ಲಿ ಅಂದಾಜು 150ಕ್ಕೂ ಹೆಚ್ಚು ಹುಣಸೆ ಮರಗಳಿದ್ದು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಬರುವ ಪ್ರವಾಸಿಗರಿಗೆ ಸೂಕ್ತ ರಸ್ತೆಯಿಲ್ಲದೇ ವಾಹನಗಳು ಕಚ್ಚಾರಸ್ತೆ ಮೇಲೆಯೇ ಚಲಿಸಬೇಕು. ಜಲ್ಲಿ ಕಲ್ಲಿನ ರಸ್ತೆಯಾಗಿರುವುದರಿಂದ ವಾಹನಗಳು ಹುಲ್ಲುಗಾವಲಿನಲ್ಲಿ ಚಲಿಸುತ್ತಿವೆ.
ಕೃಷ್ಣಮೃಗ, ಕರಡಿಗಳ ನೆಲವೀಡು ಮಧುಗಿರಿ: ಒಮ್ಮೆ ನೋಡ ಬನ್ನಿ ಏಕಶಿಲಾ ನಗರಿಯ ಸೊಬಗನ್ನು
ಮೀಸಲು ಅರಣ್ಯ ಪ್ರದೇಶದಲ್ಲಿ ಇಲ್ಲಿ ಪ್ರವಾಸಿಗರು ಪ್ರಾಣಿ ಪಕ್ಷಿಗಳನ್ನು ಕಂಡಾಗ ಕೇಕೆ, ಚಪ್ಪಾಳೆ, ಆಹಾರ, ಮದ್ಯ, ಮಾಂಸಾಹಾರ, ಧೂಮಪಾನ ನಿಷೇಸಿದ್ದರೂ ಇಲ್ಲಿ ಕ್ಯಾರೆ ಎನ್ನುವವರಿಲ್ಲ, ನಿಸರ್ಗದತ್ತ ಪ್ರಾಣಿಗಳನ್ನು ಸಂರಕ್ಷಿಸುವ ಬದ್ಧತೆ ಇಲ್ಲದಂತಾಗಿದೆ. ಅಪರೂಪದ ಜೀವವೈವಿಧ್ಯಮಯ ವನ್ಯಧಾಮವನ್ನು ಪ್ರವಾಸಿ ತಾಣ ಮಾಡಬೇಕೆಂಬ ಬಹು ದಿನಗಳ ಬೇಡಿಕೆ ಕನಸಾಗಿಯೇ ಉಳಿದಿದ್ದು, ಇನ್ನಾದರೂ ಸಂಬಂಧಪಟ್ಟವರು ಗಮನಹರಿಸುತ್ತಾರ ಕಾದು ನೋಡಬೇಕಿದೆ.
ಪರಿಹಾರಕ್ಕಾಗಿ ರೈತರ ಆಗ್ರಹ
ಅರಣ್ಯ ಇಲಾಖೆಯವರು ವನ್ಯಧಾಮದ ಸುತ್ತಲು ತಡೆಗೋಡೆ ಅಥವಾ ಮುಳ್ಳುಬೇಲಿ ನಿರ್ಮಿಸುವುದರ ಜೊತೆಗೆ ಪ್ರಾಣಿ-ಪಕ್ಷಿಗಳಿಗೆ ನೀರು-ಮೇವು ಅನುಕೂಲ ಕಲ್ಪಿಸಬೇಕು. ಇಲ್ಲವೇ ಬೆಳೆಗಳಿಗೆ ಶಾಶ್ವತ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಬರಪೀಡಿತ ಪ್ರದೇಶದಲ್ಲಿ ಮಳೆಯನ್ನೇ ಆಶ್ರಯಿಸಿ ಬೆಳೆದ ಬೆಳೆಯು ವನ್ಯ ಜೀವಿಗಳ ಪಾಲಾಗುತ್ತಿದ್ದು ಅರಣ್ಯ ಇಲಾಖೆಯಿಂದ ಸರಿಯಾದ ಪರಿಹಾರವು ಇಲ್ಲದೇ ರೈತರು ಹೈರಾಣಾಗುತ್ತಿದ್ದಾರೆ.
ಒಂದು ಬೋರ್ವೆಲ್ ಮೂಲಕ ನೀರಿನ ತೊಟ್ಟಿಗಳನ್ನು ತುಂಬಿಸುತ್ತಿದ್ದೇವೆ. ಬೇಸಿಗೆಯಲ್ಲಿ ತುಂಬಾಸಮಸ್ಯೆ ಇದೆ. 3 ಬೋರ್ಗಳ ಅವಶ್ಯಕತೆ ಇದೆ, ಅನುದಾನ ಬೇಕೆಂದು ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ಶಾಸಕರು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.
ವಾಸುದೇವ ಮೂರ್ತಿ ವಲಯ ಅರಣ್ಯ ಸಂರಕ್ಷಣಾಧಿಕಾರಿ
ಇಲ್ಲಿ ಅಪರೂಪದ ಪ್ರಾಣಿ ಪಕ್ಷಿಗಳಿದ್ದು, ಕೇವಲ ಆಹಾರ ನೀರು ಓದಗಿಸಿದರೆ ಸಾಲದು, ಅvuಗಳ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಸರಕಾರ ಇದನ್ನು ಅಭಿವೃದ್ಧಿಪಡಿಸಿದರೆ ಈ ಭಾಗದಲ್ಲಿ ದೈನಂದಿನ ವ್ಯವಹಾರ, ಆರ್ಥಿಕ ಚಟುವಟಿಕೆಗಳ ಸಾಕಷ್ಟು ಆದಾಯ ಮೂಲಗಳು ತಾನಾಗಿಯೇ ಇಲ್ಲಿ ಸೃಷ್ಟಿಯಾಗುತ್ತವೆ.
ಅಭಿ ಪಕ್ಷಿಪ್ರೇಮಿ ತುಮಕೂರು
ತುಮಕೂರು: ಎತ್ತ ನೋಡಿದರೂ ಬರಡು ಭೂಮಿ, ಸುತ್ತಲೂ ಜಾಲಿ ಮರಗಳು ಇವುಗಳ ನಡುವೆ ಪಚ್ಚೆ ಹುಲ್ಲಿನಲ್ಲಿ ಚಿನ್ನಾಟವಾಡುವ ಕೃಷ್ಣಮೃಗಗಳಿಗೆ ಆಹಾರವಿಲ್ಲದೆ ವನ್ಯಧಾಮದಿಂದ ಜಿಂಕೆ ಸಂತತಿ ನಶಿಸುತ್ತಿದೆ.
ಮೈದನಹಳ್ಳಿಯ ಜಯಮಂಗಲಿ ಕೃಷ್ಣಮೃಗ ವನ್ಯಧಾಮವು ಸುಮಾರು 850 ಎಕರೆ ವಿಸ್ತೀರ್ಣದಲ್ಲಿ ಅಪರೂಪದ ಜಿಂಕೆ ಸಂತತಿ ಮಾತ್ರವಲ್ಲದೆ ವಿವಿಧ ರೀತಿಯ ಸಸ್ಯ ಪ್ರಬೇಧಗಳು ಹಾಗೂ ಕ್ರೀಯಾಶೀಲ ನಿಶಾಚರಿ ಪ್ರಾಣಿ ಪಕ್ಷಿಗಳಿಂದ ಈ ಹುಲ್ಲುಗಾವಲು ವಿಸ್ಮಯಗಳ ಕಣಜವಾಗಿ ವನ್ಯಜೀವಿಪ್ರಿಯರನ್ನು ಆಕರ್ಷಿಸುತ್ತಿದೆ.
ಈ ಹಿಂದೆ ವನ್ಯಜೀವಿಗಳಿಗೆ ಹುರಳಿ, ಮೆಕ್ಕೆಜೋಳ, ತೊಗರಿ ಮತ್ತು ಅಲಸಂಡೆ ಬಿತ್ತನೆ ಮಾಡಲಾಗುತ್ತಿತ್ತು. ಹೀಗಾಗಿ ಬಿಸಿಲೇರುತ್ತಿದ್ದರೂ ಮೇವಿಗಾಗಿ ಪ್ರಾಣಿಗಳು ಹಿಂಡು ಹಿಂಡಾಗಿ ಬಯಲಲ್ಲಿ ಕಾಣಿಸುತ್ತಿದ್ದವು. ಇದೀಗಾ ಮೇವು ಮತ್ತು ನೀರಿನ ಕೊರತೆಯಿಂದ ಕೃಷ್ಣಮೃಗಗಳು ಪಾವಗಡ ಸೇರಿದಂತೆ ಸೀಮಾಂದ್ರ ಕಡೆ ಚದರುತ್ತಿದ್ದು ಆಹಾರಕ್ಕಾಗಿ ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ.
ಇಲ್ಲಿನ ವನ್ಯ ಜೀವಿಗಳು ಮೇವು ಹುಡುಕುವ ತವಕದಲ್ಲಿ ಅಪಘಾತದಿಂದ ಮೃತಪಟ್ಟ ಉದಾಹರಣೆಗಳಿವೆ, ಸಿಂಗನಹಳ್ಳಿ-ಮಸರಪಡಿ ಬಳಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಸಾವನ್ನಪ್ಪಿದರೆ, ಯಾಕರ್ಲಹಳ್ಳಿ ಗ್ರಾಮದ ತೋಟದ ಬಾವಿಯಲ್ಲಿ ಬಿದ್ದು ಜಿಂಕೆಯೊಂದು ಮೃತಪಟ್ಟಿತ್ತು. ಕಲಿದೇವಪುರದ ಹೊರವಲಯದ ಜಮೀನಿನಲ್ಲಿ ಅವರೆಕಾಯಿ ಬಳ್ಳಿ ತಿಂದು ಜಿಂಕೆ ಸತ್ತಿದೆ. ಪುರವರ ಸಮೀಪದ ಜಮೀನಿನಲ್ಲಿ ಸಿಕ್ಕ ಕೃಷ್ಣಮೃಗದ ಮರಿಯನ್ನು ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಈ ವನ್ಯಧಾಮ ಆಂಧ್ರದ ಗಡಿಗೆ ಅಂಟಿಕೊಂಡಿದ್ದು ನಿತ್ಯ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಆ ಭಾಗದಲ್ಲಿ ಒಂದೂ ಮಾರ್ಗಸೂಚಿ ಫಲಕಗಳಿಲ್ಲ, ಪ್ರವಾಸಿಗರು ಜೂನ್ನಿಂದ ಸೆಪ್ಟಂಬರ್ ವರೆಗೆ ಈ ವನ್ಯಜೀವಿ ಧಾಮಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯವೆಂದು ಬರುತ್ತಾರೆ.
ಪುರವರ, ಕೊಡಿಗೇನಹಳ್ಳಿಯಲ್ಲಿ ಸಣ್ಣ ಫಲಕಗಳು ಬಿಟ್ಟರೆ ಬೇರೆಲ್ಲೂ ಇಲ್ಲ, ಬರುವ ಪ್ರವಾಸಿಗರಿಗೆ ಮಾರ್ಗಸೂಚಿ ಹಾಗೂ ಸೂಚನಾ ಫಲಕಗಳ ಕೊರತೆ ಎದ್ದುಕಾಣುತ್ತಿದೆ. ವನ್ಯಧಾಮದಲ್ಲಿ ಅಂದಾಜು 150ಕ್ಕೂ ಹೆಚ್ಚು ಹುಣಸೆ ಮರಗಳಿದ್ದು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಬರುವ ಪ್ರವಾಸಿಗರಿಗೆ ಸೂಕ್ತ ರಸ್ತೆಯಿಲ್ಲದೇ ವಾಹನಗಳು ಕಚ್ಚಾರಸ್ತೆ ಮೇಲೆಯೇ ಚಲಿಸಬೇಕು. ಜಲ್ಲಿ ಕಲ್ಲಿನ ರಸ್ತೆಯಾಗಿರುವುದರಿಂದ ವಾಹನಗಳು ಹುಲ್ಲುಗಾವಲಿನಲ್ಲಿ ಚಲಿಸುತ್ತಿವೆ.
ಕೃಷ್ಣಮೃಗ, ಕರಡಿಗಳ ನೆಲವೀಡು ಮಧುಗಿರಿ: ಒಮ್ಮೆ ನೋಡ ಬನ್ನಿ ಏಕಶಿಲಾ ನಗರಿಯ ಸೊಬಗನ್ನು
ಮೀಸಲು ಅರಣ್ಯ ಪ್ರದೇಶದಲ್ಲಿ ಇಲ್ಲಿ ಪ್ರವಾಸಿಗರು ಪ್ರಾಣಿ ಪಕ್ಷಿಗಳನ್ನು ಕಂಡಾಗ ಕೇಕೆ, ಚಪ್ಪಾಳೆ, ಆಹಾರ, ಮದ್ಯ, ಮಾಂಸಾಹಾರ, ಧೂಮಪಾನ ನಿಷೇಸಿದ್ದರೂ ಇಲ್ಲಿ ಕ್ಯಾರೆ ಎನ್ನುವವರಿಲ್ಲ, ನಿಸರ್ಗದತ್ತ ಪ್ರಾಣಿಗಳನ್ನು ಸಂರಕ್ಷಿಸುವ ಬದ್ಧತೆ ಇಲ್ಲದಂತಾಗಿದೆ. ಅಪರೂಪದ ಜೀವವೈವಿಧ್ಯಮಯ ವನ್ಯಧಾಮವನ್ನು ಪ್ರವಾಸಿ ತಾಣ ಮಾಡಬೇಕೆಂಬ ಬಹು ದಿನಗಳ ಬೇಡಿಕೆ ಕನಸಾಗಿಯೇ ಉಳಿದಿದ್ದು, ಇನ್ನಾದರೂ ಸಂಬಂಧಪಟ್ಟವರು ಗಮನಹರಿಸುತ್ತಾರ ಕಾದು ನೋಡಬೇಕಿದೆ.
ಪರಿಹಾರಕ್ಕಾಗಿ ರೈತರ ಆಗ್ರಹ
ಅರಣ್ಯ ಇಲಾಖೆಯವರು ವನ್ಯಧಾಮದ ಸುತ್ತಲು ತಡೆಗೋಡೆ ಅಥವಾ ಮುಳ್ಳುಬೇಲಿ ನಿರ್ಮಿಸುವುದರ ಜೊತೆಗೆ ಪ್ರಾಣಿ-ಪಕ್ಷಿಗಳಿಗೆ ನೀರು-ಮೇವು ಅನುಕೂಲ ಕಲ್ಪಿಸಬೇಕು. ಇಲ್ಲವೇ ಬೆಳೆಗಳಿಗೆ ಶಾಶ್ವತ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಬರಪೀಡಿತ ಪ್ರದೇಶದಲ್ಲಿ ಮಳೆಯನ್ನೇ ಆಶ್ರಯಿಸಿ ಬೆಳೆದ ಬೆಳೆಯು ವನ್ಯ ಜೀವಿಗಳ ಪಾಲಾಗುತ್ತಿದ್ದು ಅರಣ್ಯ ಇಲಾಖೆಯಿಂದ ಸರಿಯಾದ ಪರಿಹಾರವು ಇಲ್ಲದೇ ರೈತರು ಹೈರಾಣಾಗುತ್ತಿದ್ದಾರೆ.
ವಾಸುದೇವ ಮೂರ್ತಿ ವಲಯ ಅರಣ್ಯ ಸಂರಕ್ಷಣಾಧಿಕಾರಿ
ಇಲ್ಲಿ ಅಪರೂಪದ ಪ್ರಾಣಿ ಪಕ್ಷಿಗಳಿದ್ದು, ಕೇವಲ ಆಹಾರ ನೀರು ಓದಗಿಸಿದರೆ ಸಾಲದು, ಅvuಗಳ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಸರಕಾರ ಇದನ್ನು ಅಭಿವೃದ್ಧಿಪಡಿಸಿದರೆ ಈ ಭಾಗದಲ್ಲಿ ದೈನಂದಿನ ವ್ಯವಹಾರ, ಆರ್ಥಿಕ ಚಟುವಟಿಕೆಗಳ ಸಾಕಷ್ಟು ಆದಾಯ ಮೂಲಗಳು ತಾನಾಗಿಯೇ ಇಲ್ಲಿ ಸೃಷ್ಟಿಯಾಗುತ್ತವೆ.
ಅಭಿ ಪಕ್ಷಿಪ್ರೇಮಿ ತುಮಕೂರು