ಆ್ಯಪ್ನಗರ

ಚುನಾವಣೆ ಮುನ್ನವೇ ಜೆಡಿಎಸ್ ಮತದಾರರಿಗೆ ಆಮಿಷ

ವಿಧಾನಸಭಾ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿ ಇರುವಾಗಲೇ ಮತದಾರರಿಗೆ ಆಮೀಷ ಒಡ್ಡುವುದು ಜೋರಾಗಿದೆ.

Vijaya Karnataka 5 Oct 2017, 9:21 pm
ತುಮಕೂರು: ವಿಧಾನಸಭಾ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿ ಇರುವಾಗಲೇ ಮತದಾರರಿಗೆ ಆಮೀಷ ಒಡ್ಡುವುದು ಜೋರಾಗಿದೆ.
Vijaya Karnataka Web jds try to lure voters before the election begins
ಚುನಾವಣೆ ಮುನ್ನವೇ ಜೆಡಿಎಸ್ ಮತದಾರರಿಗೆ ಆಮಿಷ


ತುಮಕೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಕಾಂಕ್ಷಿ ಗೋವಿಂದರಾಜು ಮಹಿಳೆಯರಿಗೆ ವೋಟ್ ಹಾಕುವಂತೆ ಹೇಳಿ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.

ಗೂಳೂರು ಗ್ರಾಮದ ಎತ್ತೇನಳ್ಳಿಯ ಮಾರಮ್ಮ ದೇವಸ್ಥಾನದಲ್ಲಿ ಸಾವಿರಾರು ಮಹಿಳೆಯರಿಗೆ ಬಾಗೀನ ನೀಡಿ, ತಮಗೆ ವೋಟು ಹಾಕುವಂತೆ ಮಾರಮ್ಮನ ಮುಂದೆ ಆಣೆ ಪ್ರಮಾಣ ಮಾಡಿಸಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

ಬಾಗಿನದಲ್ಲಿ‌, ಸೀರೆ ಬಳೆ ಹಾಗೂ ಎರಡು‌ಸಾವಿರ ರೂಪಾಯಿ ನೀಡಲಾಗಿದೆ. ನಗರ ಪ್ರದೇಶದ ಮತದಾರರನ್ನು ಕರೆದುಕೊಂಡು ಹೋಗಿ ಕಳೆದ ೧೫ ದಿನದಿಂದ ಗೋವಿಂದ ರಾಜು ಆಮಿಷ ಒಡ್ಡುತ್ತಿದ್ದಾರೆ ಎನ್ನಲಾಗಿದೆ.

ಈ ಆಣೆ ಪ್ರಮಾಣ ಪ್ರಕರಣ ಜಿಲ್ಲೆಯಲ್ಲಿ ಸಂಕಲನಕ್ಕೆ ಕಾರಣವಾಗಿದ್ದು, ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬಿಜೆಪಿ ಹಾಗೂ ಸ್ಪಷ್ಟೀಕರಣ ನೀಡಲು ಜೆಡಿಸ್ ಪತ್ರಿಕಾಗೋಷ್ಠಿ ಕರೆದಿದ್ದು, ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ