ಆ್ಯಪ್ನಗರ

ಹುಳಿಯಾರಿನ ಕನಕ ವೃತ್ತ ವಿವಾದ ಅಂತ್ಯ: ಮೊದಲಿದ್ದ ಸ್ಥಳದಲ್ಲೇ ನಾಮ ಫಲಕ ಅಳವಡಿಕೆ

ಕನಕ ವೃತ್ತ ತೆರವುಗೊಳಿಸಿದ್ದಕ್ಕೆ ಎದ್ದಿದ್ದ ನಾಮಫಲಕ ವಿವಾದ ಅಂತ್ಯಗೊಂಡಿದೆ. ಮೊದಲಿದ್ದ ಸ್ಥಳದಲ್ಲೇ ಕನಕದಾಸ ವೃತ್ತ ನಾಮಫಲಕ ಅಳವಡಿಸಲು ಸಮ್ಮತಿ ನೀಡಿದ ಬಳಿಕ ವಿವಾದ ಅಂತ್ಯಗೊಂಡಿದೆ.

Vijaya Karnataka Web 21 Nov 2019, 5:34 pm
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಎದ್ದಿದ್ದ ನಾಮಫಲಕ ವಿವಾದ ಅಂತ್ಯಗೊಂಡಿದೆ.
Vijaya Karnataka Web ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ನಡೆದ ಬಂದ್
ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ನಡೆದ ಬಂದ್


ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಕನಕ ವೃತ್ತದ ನಾಮಫಲಕವನ್ನು ತೆರವುಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎದ್ದಿದ್ದ ವಿವಾದ ಅಂತ್ಯಗೊಂಡಿದೆ. ಮೊದಲಿದ್ದ ಸ್ಥಳದಲ್ಲೇ ಕನಕದಾಸ ವೃತ್ತ ಎಂದು ನಾಮಫಲಕವನ್ನು ಅಳವಡಿಸಲು ಅಧಿಕಾರಿಗಳು ಸಮ್ಮತಿ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಹುಳಿಯಾರು ಬಂದ್‌


ಕನಕ ವೃತ್ತದ ನಾಮಫಲಕವನ್ನು ತೆರವುಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುರುಬ ಹಾಗೂ ವೀರಶೈವ ಲಿಂಗಾಯತ ಸಮುದಾಯದ ನಡುವೆ ವೈಮನಸ್ಯ ಉಂಟಾಗಿತ್ತು. ಜತೆಗೆ ಮಾಧುಸ್ವಾಮಿ ಅವರು ಸ್ವಾಮೀಜಿಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿತ್ತು.

ಈ ಸುದ್ದಿ ಓದಿ: ಕೆರಳಿದ ಕುರುಬ ಸಮುದಾಯ: ಮಾಧುಸ್ವಾಮಿ ಮತ್ತು ಶ್ರೀಈಶ್ವರಾನಂದಪುರಿ ಸ್ವಾಮೀಜಿ ನಡುವೆ ನಡೆದಿದ್ದೇನು?

ನವೆಂಬರ್ 12 ರಂದು ಹುಳಿಯಾರು ಪಟ್ಟಣದ ರಾ.ಹೆ 203ರ ಅಗಲಿಕರಣ ಕಾಮಗಾರಿಗಾಗಿ ಅಲ್ಲಿನ ಕನಕದಾಸ ವೃತ್ತದ ನಾಮಫಲಕವನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ಇದೇ ವೃತ್ತಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಲು ವೀರಶೈವ ಲಿಂಗಾಯತ ಮುಖಂಡರು ಮುಂದಾಗಿದ್ದರು. ಇದರಿಂದ ಕುರುಬ ಹಾಗೂ ವೀರಶೈವ ಲಿಂಗಾಯತ ಸಮುದಾಯದ ನಡುವೆ ವೈಮನಸ್ಯ ಉಂಟಾಗಿತ್ತು. ನಂತರ ಈ ವಾತಾವರಣವನ್ನು ತಿಳಿಗೊಳಿಸಲು ನವೆಂಬರ್ 16 ರಂದು ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಜೆ.ಸಿ ಮಾಧುಸ್ವಾಮಿ ನೇತೃತ್ವದಲ್ಲಿ ಎರಡೂ ಸಮುದಾಯದ ಸಭೆ ಕರೆಯಲಾಗಿತ್ತು.

ಇದನ್ನೂ ಓದಿ: ಉಪಚುನಾವಣಾ ಕಣದಲ್ಲಿ ‘ಜಾತಿ’ ಸದ್ದು: ಕುರುಬರು v/s ಮಾಧುಸ್ವಾಮಿ ನಡುವಿನ ವಿವಾದವೇನು?

ಆದರೆ, ಸಭೆಯಲ್ಲಿ ಕುರುಬ ಸಮುದಾಯದ ಹೊಸದುರ್ಗ ಕಾಗಿನೆಲೆಯ ಶ್ರೀಗಳಾದ ಈಶ್ವರಾನಂದಪುರಿ ಸ್ವಾಮೀಜಿಗಳ ಬಗ್ಗೆ ಮಾಧುಸ್ವಾಮಿ ಅವರು ಲಘುವಾಗಿ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನ.21ರಂದು ಹುಳಿಯಾರು ಪಟ್ಟಣ ಬಂದ್ ಆಚರಿಸಿದ್ದ ಕುರುಬ ಸಮುದಾಯದ ಜನತೆ, ಮಾಧುಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದ್ದರು.

ಮಾಧುಸ್ವಾಮಿ ಮಾಡಿದ ಡ್ಯಾಮೇಜ್‌ ಕಂಟ್ರೋಲ್‌ಗೆ ಸಿಎಂ ಯತ್ನ, ಕುರುಬರ ಕ್ಷಮೆ ಕೇಳಿದ ಬಿಎಸ್‌ವೈ‌

ಬಂದ್ ಆಚರಣೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮೊದಲಿದ್ದ ಸ್ಥಳದಲ್ಲೇ ಕನಕದಾಸ ವೃತ್ತ ಎಂದು ನಾಮಫಲಕವನ್ನು ಅಳವಡಿಸಲು ಸಮ್ಮತಿ ನೀಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ