ತುಮಕೂರು/ಕೊರಟಗೆರೆ: ಮರಾಠ ಪ್ರಾಧಿಕಾರ ರಚನೆ ಮಾಡಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ವಿರುದ್ದ ಕೊರಟಗೆರೆ ತಾಲೂಕಿನ ಕನ್ನಡಪರ ಸಂಘಟನೆಗಳ ಒಕ್ಕೂಟ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಮೂಲಕ ಕರ್ನಾಟಕ ಬಂದ್ ಗೆ ಶನಿವಾರ ಬೆಂಬಲ ವ್ಯಕ್ತಪಡಿಸಿದರು.
ಕೊರಟಗೆರೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ನಿಲ್ದಾಣದಿಂದ ಪ್ರಾರಂಭಗೊಂಡ ಪ್ರತಿಭಟನೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿ ತಕ್ಷಣ ಪ್ರಾಧಿಕಾರ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯ ಸೂಕ್ತ ಬಂದೋಬಸ್ತ್ ನಡುವೆಯೂ ಕೊರಟಗೆರೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಕೊರಟಗೆರೆ ಪಟ್ಟಣ ಬಂದ್ ಮಾಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬಂದ್ಗೆ ಕೊರಟಗೆರೆಯಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ.
ಚಿತ್ರಗಳಲ್ಲಿ: ಹೇಗಿದೆ ಕರ್ನಾಟಕ ಬಂದ್, ಎಲ್ಲೆಲ್ಲಿ ಏನೇನಾಯ್ತು
ಜಯಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಚೇತನ್ದಾಸರಹಳ್ಳಿ, ಕರವೇ ಅಧ್ಯಕ್ಷ ನಟರಾಜು, ರಣಧೀರ ವೇದಿಕೆ ದೇವರಾಜು, ಜಯ ಕರ್ನಾಟಕ ಸಿದ್ದಾರ್ಥ, ಹರೀಶ್, ಮುಖಂಡರಾದ ಮಾರುತಿ ಪ್ರಸನ್ನ, ದಿನೇಶ್, ವಿನಯ್, ಶಾಮು, ರಮೇಶ್, ಧಮೇಂದ್ರ, ಸೈಪುಲ್ಲಾ, ಚಾಂದುಪಾಷ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.
ಕೊರಟಗೆರೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ನಿಲ್ದಾಣದಿಂದ ಪ್ರಾರಂಭಗೊಂಡ ಪ್ರತಿಭಟನೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿ ತಕ್ಷಣ ಪ್ರಾಧಿಕಾರ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯ ಸೂಕ್ತ ಬಂದೋಬಸ್ತ್ ನಡುವೆಯೂ ಕೊರಟಗೆರೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಕೊರಟಗೆರೆ ಪಟ್ಟಣ ಬಂದ್ ಮಾಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬಂದ್ಗೆ ಕೊರಟಗೆರೆಯಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ.
ಚಿತ್ರಗಳಲ್ಲಿ: ಹೇಗಿದೆ ಕರ್ನಾಟಕ ಬಂದ್, ಎಲ್ಲೆಲ್ಲಿ ಏನೇನಾಯ್ತು
ಜಯಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಚೇತನ್ದಾಸರಹಳ್ಳಿ, ಕರವೇ ಅಧ್ಯಕ್ಷ ನಟರಾಜು, ರಣಧೀರ ವೇದಿಕೆ ದೇವರಾಜು, ಜಯ ಕರ್ನಾಟಕ ಸಿದ್ದಾರ್ಥ, ಹರೀಶ್, ಮುಖಂಡರಾದ ಮಾರುತಿ ಪ್ರಸನ್ನ, ದಿನೇಶ್, ವಿನಯ್, ಶಾಮು, ರಮೇಶ್, ಧಮೇಂದ್ರ, ಸೈಪುಲ್ಲಾ, ಚಾಂದುಪಾಷ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.