ಆ್ಯಪ್ನಗರ

ಜನರ ಅಭಿಪ್ರಾಯಕ್ಕಿಂತ ಸ್ವಂತ ಅಜೆಂಡಾದ ಮೇಲೆ ಸರಕಾರ: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತುಮಕೂರಿನಲ್ಲಿ ಕಿಡಿಕಾರಿದರು. ಈ ಸರಕಾರಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ. ಜನರ ಅಭಿಪ್ರಾಯಕ್ಕಿಂತ ಸ್ವಂತ ಅಜೆಂಡಾ ಮೇಲೆ ಸರಕಾರ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka Web 17 Jan 2021, 4:31 pm
ತುಮಕೂರು: ದೇಶ ಹಾಗೂ ರಾಜ್ಯದಲ್ಲಿ ಸ್ವಂತ ಅಜೆಂಡಾದ ಮೇಲೆ ಸರಕಾರಗಳು ನಡೆಯುತ್ತಿವೆ. ಅವರಿಗೆ ಸಾರ್ವಜನಿಕರ ಅಭಿಪ್ರಾಯ ಲೆಕ್ಕಕ್ಕೇ ಇಲ್ಲ. ರಾಜ್ಯದಲ್ಲಿ ಅನ್ಯಾಯಗಳು ನಡೆಯುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Vijaya Karnataka Web DK Shivakumar
ಡಿಕೆ ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ (ಸಂಗ್ರಹ ಚಿತ್ರ)


ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಏನ್‌ ಬೇಕಾದ್ರೂ ಹೇಳಿಕೊಳ್ಳಲಿ ಕಾಂಗ್ರೆಸ್‌ಗೆ ಏನು ಮಾಡಲು ಆಗುವುದಿಲ್ಲ. ರಾಜ್ಯದಲ್ಲಿ ಮುಂದಿನ ಬಾರಿ ಕಾಂಗ್ರೆಸ್‌ ಸರಕಾರ ರಚನೆಯಾಗಲಿದೆ. ಸ್ವಂತ ಅಜೆಂಡಾದ ಮೇಲೆ ಸರಕಾರಗಳು ನಡೆಯುತ್ತೇವೆಯೇ ಹೊರತು ಜನರ ಅಭಿಪ್ರಾಯಗಳಿಂದಲ್ಲ ಎಂದು ಕಿಡಿಕಾರಿದರು.

ಇನ್ನು, ರೈತರ ಪ್ರತಿಭಟನೆಗೆ ಜನವರಿ 20ರಂದು ಬೆಂಬಲ ವ್ಯಕ್ತಪಡಿಸುತ್ತೇವೆ. ಫ್ರೀಡಂ ಪಾರ್ಕ್, ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ
ಇಡೀ ರಾಷ್ಟ್ರದಲ್ಲಿ ಇಂತಹ ದೊಡ್ಡ ಹೋರಾಟ ನಡೆದಿರಲಿಲ್ಲ. ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ ಎಂದರು.
ಸಚಿವ ಸ್ಥಾನಕ್ಕಾಗಿ ಸಿ.ಡಿ, ಬ್ಲ್ಯಾಕ್‌ ಮೇಲ್, ಭ್ರಷ್ಟಾಚಾರದ ಆರೋಪ - ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹಕಮಿಟಿ ಮಾಡಿರುವುದನ್ನು ರೈತರು ಧಿಕ್ಕರಿಸಿದ್ದಾರೆ. ನಮಗೆ ಅವಶ್ಯಕತೆ ಇಲ್ಲ ಎಂದು ಹೋರಾಟ ಮುಂದುವರೆಸಿದ್ದಾರೆ. ಕೇಂದ್ರದ ಕೃಷಿ ಮಸೂದೆಗಳು ರೈತ ಸಮುದಾಯಕ್ಕೆ ಹಾಗೂ ದೇಶಕ್ಕೆ ಮರಣ ಶಾಸನವಾಗಿವೆ. ಇದನ್ನು ವಾಪಸ್ ಪಡೆಯಬೇಕು ಎಂದು ನಾವೆಲ್ಲಾ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ಡಿಕೆ ಶಿವಕುಮಾರ್ರಾಜ್ಯದ ಆಡಳಿತದಲ್ಲಿ ಅನ್ಯಾಯಗಳು ನಡೆಯುತ್ತಿವೆ. ಪೆಟ್ರೋಲ್ ಡಿಸೇಲ್, ಆಸ್ತಿ ತೆರಿಗೆಯನ್ನು ಕೊರೊನಾ ಸಂದರ್ಭದಲ್ಲಿ ಹೆಚ್ಚು ಮಾಡಿರುವುದನ್ನು ಗಮನಿಸಿದ್ದೇವೆ ಎಂದರು. ಇನ್ನು, ಅಮಿತ್ ಶಾ ವೇದಿಕೆಯಲ್ಲಿ ಕನ್ನಡ ಇರದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಪ್ರಾದೇಶಿಕ ಸಂಸ್ಕೃತಿಗಳು, ಭಾಷೆ ಯಾವುದೂ ಬೇಕಿಲ್ಲ. ಒಕ್ಕೂಟ ವ್ಯವಸ್ಥೆ ಬಗ್ಗೆ ಅವರಿಗೆ ಗೌರವ ಇಲ್ಲ. ನಮ್ಮ ಸಂಸದರು ಅಧಿಕಾರಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ