ಆ್ಯಪ್ನಗರ

ಮೂಲ ಕಾಂಗ್ರೆಸ್ಸಿಗ, ವಲಸಿಗ ಅಂತಾ ಹೇಳೋರು ಮೂರ್ಖರು: ಕೆಎನ್‌ ರಾಜಣ್ಣ

ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರ ಸದ್ಯದಲ್ಲೇ ಇತ್ಯರ್ಥಗೊಳ್ಳಲಿದೆ. ಸೋನಿಯಾ ಗಾಂಧಿ ಅವ್ರು ಹೊರದೇಶದಲ್ಲಿದ್ದಾರೆ‌. ಅವ್ರು ಬಂದ ತಕ್ಷಣ ನೇಮಕ ಆಗಲಿದೆ, ಯಾವುದೇ ಗೊಂದಲ ಇಲ್ಲಾ ಎಂದು ಮಾಜಿ ಶಾಸಕ ಕೆಎನ್‌ ರಾಜಣ್ಣ ಹೇಳಿದರು.

Vijaya Karnataka Web 24 Jan 2020, 7:04 pm
ತುಮಕೂರು: ಕಾಂಗ್ರೆಸ್‌ನಲ್ಲಿ ಮೂಲ ಹಾಗೂ ವಲಸಿಗ ಎಂಬುದಿಲ್ಲ. ಈ ರೀತಿ ಮಾತನಾಡುವವರು ಮೂರ್ಖರು ಎಂದು ತುಮಕೂರು ಕಾಂಗ್ರೆಸ್‌ ನಾಯಕ ಕೆಎನ್‌ ರಾಜಣ್ಣ ತಿಳಿಸಿದ್ದಾರೆ.
Vijaya Karnataka Web ಕೆಎನ್‌ ರಾಜಣ್ಣ
ಕೆಎನ್‌ ರಾಜಣ್ಣ


ತುಮಕೂರಿನಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರ ಸದ್ಯದಲ್ಲೇ ಇತ್ಯರ್ಥಗೊಳ್ಳಲಿದೆ. ಸೋನಿಯಾ ಗಾಂಧಿ ಅವ್ರು ಹೊರದೇಶದಲ್ಲಿದ್ದಾರೆ‌. ಅವ್ರು ಬಂದ ತಕ್ಷಣ ನೇಮಕ ಆಗಲಿದೆ, ಯಾವುದೇ ಗೊಂದಲ ಇಲ್ಲಾ ಎಂದರು.

ಎಲ್ಲಾ ನಾಯಕರು ಈಗಾಗಲೇ ಮಾತನಾಡಿದ್ದಾರೆ. ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಅಂತಾ ಹೇಳೋರು ಮೂರ್ಖರು. ಮುನಿಯಪ್ಪ ಹೇಳಲಿ, ತಿಮ್ಮಪ್ಪ ಹೇಳಲಿ,ಬೊಮ್ಮಪ್ಪ ಹೇಳಿ. ಯಾರೇ ಹೇಳಿದರೂ ಅದು ಸ್ವಾರ್ಥಕ್ಕೋಸ್ಕರ. ಆ ಪದವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಾರೆ ಎಂದು ರಾಜಣ್ಣ ತಿಳಿಸಿದರು.

ಕೆಲವರನ್ನ ಬಿಟ್ಟು ಬಹುತೇಕ ಎಲ್ಲರು ಒಂದಲ್ಲಾ ಒಂದು ಕಡೆ ಓಡಾಡಿದವರೇ. ಯಾರು ಕೂಡ ಸತ್ಯಹರಿಶ್ಚಂದ್ರರ ಮೊಮ್ಮಕ್ಕಳೇನಲ್ಲಾ. ಕಾರ್ಯಾಧ್ಯಕ್ಷರನ್ನ ಮಾಡೋದ್ರಲ್ಲಿ ತಪ್ಪೇನಿಲ್ಲಾ. ಮೊದಲು ಡಿಸಿಎಂ ಸ್ಥಾನವನ್ನೇ ನೀಡ್ತಿರಲಿಲ್ಲಾ..ಈಗ ಒಂದಲ್ಲಾ ಎರಡಲ್ಲಾ, ಐದು ಸ್ಥಾನದವರೆಗೂ ಮಾಡ್ತಿದ್ದಾರೆ. ಕಾರ್ಯಾಧ್ಯಕ್ಷ ಮಾಡಿದಾಕ್ಷಣಕ್ಕೆ ಏನು ಆಗಲ್ಲಾ, ಅಧ್ಯಕ್ಷರದ್ದೇ ಅಂತಿಮ ತೀರ್ಮಾನವಾಗಿರುತ್ತೆ. ಎಂದರು.

ಸಿಎಲ್‌ಪಿ ಹಾಗೂ ವಿಪಕ್ಷ ನಾಯಕ ಬೇರೆ ಮಾಡೋ ವಿಚಾರವನ್ನ ನಾನು ಒಪ್ಪೋದಿಲ್ಲಾ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಖಡಕ್ಕಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ