ಆ್ಯಪ್ನಗರ

ಪಾವಗಡದಲ್ಲಿ ಧಾರಾಕಾರ ಮಳೆಗೆ ಕೋಡಿ ಬಿದ್ದ ಕೆರೆಗಳು : ಅಪಾರ ಬೆಳೆ ನಷ್ಟ

ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ವರ್ಷಗಳಿಂದ ಕೋಡಿಯೇ ಬೀಳದ ಕೆರೆಗಳೆಲ್ಲ ಮೈತುಂಬಿ ಹರಿದರೆ, ಮತ್ತೊಂದೆಡೆ 50 ಕೊಟಿ ರೂ.ಗೂ ಅಪಾರ ಪ್ರಮಾಣದ ಬೆಳೆ ನಷ್ಟವಾಗಿ ರೈತರು ಕಂಗಾಲಾಗುವಂತೆ ಮಾಡಿದೆ.

Vijaya Karnataka Web 4 Aug 2022, 11:06 pm
ಪಾವಗಡ : ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ವರ್ಷಗಳಿಂದ ಕೋಡಿಯೇ ಬೀಳದ ಕೆರೆಗಳೆಲ್ಲ ಮೈತುಂಬಿ ಹರಿದರೆ, ಮತ್ತೊಂದೆಡೆ 50 ಕೊಟಿ ರೂ.ಗೂ ಅಪಾರ ಪ್ರಮಾಣದ ಬೆಳೆ ನಷ್ಟವಾಗಿ ರೈತರು ಕಂಗಾಲಾಗುವಂತೆ ಮಾಡಿದೆ.
Vijaya Karnataka Web pavagada lake


ತಾಲೂಕಿನಾದ್ಯಂತ ಒಂದು ವಾರದಿಂದ ವರುಣನ ಆರ್ಭಟ ಹೆಚ್ಚಾಗಿ 10-15 ವರ್ಷ ಕಳೆದರೂ ಕೆರೆ ತುಂಬದೇ ಕೋಡಿ ಹರಿಯದೇ ಪ್ರತಿ ವರ್ಷ ಮಳೆ ಬಂದಾಗಲೆಲ್ಲ ಕೆರೆ ತುಂಬಿದೆಯೇ ಎಂದು ನೋಡುತ್ತಿದ್ದ ಜನತೆಗೆ ಪುಷ್ಯ ಹಾಗೂ ಆಶ್ಲೇಷ ಮಳೆಗಳು ಸಾಲ ಮಾಡಿ ಬೆಳೆದಿದ್ದ ರೈತರ ಬೆಳೆಗಳೆಲ್ಲ ಕೊಚ್ಚಿ ಹೋಗಿ ರೈತರು ಸಾಲದ ಶೂಲಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ವೈ.ಎನ್‌.ಹೊಸಕೋಟೆ, ನಾಗಲಮಡಿಕೆ, ಕಸಬಾ ಮತ್ತು ನಿಡಗಲ್‌ ಈ ನಾಲ್ಕು ಹೋಬಳಿಗಳಲ್ಲಿ ಜಿಲ್ಲಾಹವಾಮಾನ ಇಲಾಖೆ ನೀಡಿದ ಮಳೆಯ ವರದಿಗಿಂತ ಹೆಚ್ಚಾಗಿ ಮಳೆಯಾಗಿರುವುದು ತಾಲೂಕಿಗೆ ವರವಾದರೆ, ಇದೇ ಮಳೆ ಸಾವಿರಾರು ರೈತರ ಬದುಕನ್ನೇ ಕಸಿದುಕೊಡಂತಾಗಿದೆ. ಸುಮಾರು 15, 20 ವರ್ಷಗಳಿಂದ ಕೋಡಿಯೇ ಬೀಳದ ಕೆರೆಗಳು ಮೈತುಂಬಿ ಹರಿದಿದ್ದು, ಗಡಿನಾಡಿನ ಫ್ಲೋರೈಡ್‌ ಸಮಸ್ಯೆ ನಿವಾರಣೆ ಕೂಡ ಆಗಲಿದೆ. ಅಂತರ್ಜಲ ಮಟ್ಟ ಹೆಚ್ಚಳವಾದರೆ ಫ್ಲೋರೈಡ್‌ ಸಮಸ್ಯೆ ನಿವಾರಣೆಯಾಗಲಿದೆ.

ತುಮಕೂರು: ಅಕ್ಕ-ತಂಗಿ ಕೆರೆ ಭರ್ತಿ, ಮುಳುಗಡೆ ಆತಂಕದಲ್ಲಿ ಬಟವಾಡಿಯ ಹೊಸಳಯ್ಯನ ತೋಟದ ಮನೆಗಳು

ತಾಲೂಕಿನ ಪಲ್ಲವರಾಯನ ಕೆರೆ 15 ವರ್ಷಗಳೇ ಕಳೆದಿದ್ದರೂ ಕೆರೆ ತುಂಬಿ ಕೋಡಿ ಬೀಳುವ ಹಂತ ತಲುಪಿರಲಿಲ್ಲ. ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಕೋಡಿ ಬೀಳುವ ಹಂತ ತಲುಪಿದೆ. ದೊಡ್ಡಹಳ್ಳಿ, ರಾಜವಂತಿ, ಸಿ.ಕೆ.ಪುರ, ಪೆನ್ನೋಬನಹಳ್ಳಿ ಕೆರೆ ಸೇರಿದಂತೆ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ. ಸಾಸಲಕುಂಟೆ, ನಾಗಲಾಪುರ, ಮಲ್ಲಮ್ಮನಹಳ್ಳಿ ಕೆರೆಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು, ಸಂಚಾರ ಸ್ಥಗಿತವಾಗಿದೆ.

3 ಹಳ್ಳಿಗಳು ಮುಳುಗಡೆ: ಕನ್ನಮೇಡಿ ಕೆರೆಗೆ ಆಂಧ್ರಪ್ರದೇಶದ ಮದಿಗುಬ್ಬ ಕೆರೆಯಿಂದ ಅಧಿಕ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಕನ್ನಮೇಡಿ ಕೆರೆ ತೂಬು ಶಿಥಿಲವಾಗಿದ್ದು, ತೂಬು ಹೊಡೆದು ಹೋದರೆ ಕೆರೆ ಕೆಳಗಿನ ಹೊನ್ನಮೇಡಿ, ದ್ಯಾವಯ್ಯನಪಾಳ್ಯ, ಚಿತ್ತಗಾನಹಳ್ಳಿ ಮೂರು ಗ್ರಾಮಗಳು ಮುಳುಗಡೆ ಆಗುವ ಆಂತಕ ಎದುರಾಗಿದೆ.

ಮಳೆಯ ರೌದ್ರ ನರ್ತನಕ್ಕೆ ನಲುಗಿದ ಸುಳ್ಯ: ಮಾಣಿ-ಮೈಸೂರು ಹೆದ್ದಾರಿ ಸ್ಥಗಿತ: ಮನೆ, ಅಂಗಡಿ, ಕೃಷಿಗೆ ಹಾನಿ!

ಈ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ವರದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಎಚ್ಚರದಿಂದಿರಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಿದ್ದಾರೆ. ನಂತರ ಸಾಸಲಕುಂಟೆ ಗ್ರಾಮದ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತವಾಗಿದ್ದ ಸ್ಥಳಕ್ಕೂ ತಹಸೀಲ್ದಾರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನೀರಲ್ಲಿ ಸಿಲುಕಿದ್ದ ಖಾಸಗಿ ಬಸ್‌: ಹಿಂದೂಪುರದಿಂದ ಪಾವಗಡಕ್ಕೆ ಬರುವ ವೇಳೆ ವೆಂಕಟಾಪುರ ಗ್ರಾಮದ ಬಳಿ ಮಳೆ ನೀರು ಪ್ರವಾಹದಂತೆ ಹರಿಯುತ್ತಿತ್ತು, ಖಾಸಗಿ ಬಸ್‌ನಲ್ಲಿ 30ರಿಂದ 40 ಜನ ಪ್ರಯಾಣಿಕರಿದ್ದ ಬಸ್‌ ಪ್ರವಾಹದಲ್ಲಿ ಸಿಲುಕಿದೆ. ಸ್ಥಳೀಯರ ಸಹಕಾರದಿಂದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ಕರೆತರಲಾಗಿದೆ. ಧಾರಾಕಾರ ಮಳೆಗೆ ತಾಲೂಕಿನಾದ್ಯಂತ 18 ಮನೆಗಳು ಕುಸಿದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ