ಆ್ಯಪ್ನಗರ

ಕಕ್ಷಿದಾರನಿಂದ ಚಾಕು ಇರಿತಕ್ಕೊಳಗಾದ ವಕೀಲರ ವಿರುದ್ಧವೇ ದೂರು!

ಕಕ್ಷಿದಾರನಿಂದ ಚಾಕು ಇರಿತಕ್ಕೆ ಒಳಗಾದ ವಕೀಲರ ಮೇಲೆ ಪೋಲಿಸರು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಕ್ಕೆ ಅನಿರ್ದಿಷ್ಟವಧಿ ಬಹಿಷ್ಕಾರ ಹಾಕಿ ವಕೀಲರು ಪ್ರತಿಭಟಿಸಿದರು.

Vijaya Karnataka 20 Nov 2017, 5:01 pm
ಕುಣಿಗಲ್: ಕಕ್ಷಿದಾರನಿಂದ ಚಾಕು ಇರಿತಕ್ಕೆ ಒಳಗಾದ ವಕೀಲರ ಮೇಲೆ ಪೋಲಿಸರು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಕ್ಕೆ ಅನಿರ್ದಿಷ್ಟವಧಿ ಬಹಿಷ್ಕಾರ ಹಾಕಿ ವಕೀಲರು ಪ್ರತಿಭಟಿಸಿದರು.
Vijaya Karnataka Web law makers protested for filing false case against lawyer
ಕಕ್ಷಿದಾರನಿಂದ ಚಾಕು ಇರಿತಕ್ಕೊಳಗಾದ ವಕೀಲರ ವಿರುದ್ಧವೇ ದೂರು!


ಕೌಟುಂಬಿಕ ಕಲಹದಲ್ಲಿ ನ್ಯಾಯ ತಿರ್ಮಾನ ಮಾಡಿದ್ದ ವಕೀಲರಾದ ಹರ್ಷ, ಚಂದ್ರೇಗೌಡ ಅವರ ಮೇಲೆ ನ್ಯಾಯಾಲಯದ ಅವಣದಲ್ಲೆ ಕಕ್ಷಿದಾರ ಭೈರೇಗೌಡ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಸಾರ್ವಜನಿಕರು ಹಿಡಿದು ಪೋಲಿಸರ ವಶಕ್ಕೆ ಅರೋಪಿಯನ್ನು ನೀಡಿದ್ದರು. ಆದರೆ ಪೋಲಿಸರು ಪ್ರಭಾವಕ್ಕೆ ಒಳಗಾಗಿ ಅರೋಪಿಗೆ ಕೌಂಟರ್ ಕೇಸ್ ಕೊಡುವಂತೆ ಐಡಿಯಾ ಕೊಟ್ಟು ಅರೋಪಿಯಿಂದ‌ ದೂರು ಪಡೆದು ವಕೀಲರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಡಿವೈಎಸ್ ಪಿ ಚಂದ್ರಶೇಖರ್. ಸಿಪಿಐ ಬಾಳೇಗೌಡ ಅರೋಪಿ ಪರವಾಗಿ ಬೆಂಬಲಕ್ಕೆ ನಿಂತು ವಕೀಲರ ವಿರುದ್ದ ಕೇಸ್ ದಾಖಲಿಸಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ತಿಮ್ಮಪ್ಪ ಅರೋಪಿಸಿದ್ದಾರೆ.

ನ್ಯಾಯಾಲಯಗಳ ಅವರಣದಲ್ಲಿ ವಕೀಲರಿಗೆ ರಕ್ಷಣೆ ಇಲ್ಲದೆ ಭೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಅಲ್ಲದೇ ಪೋಲೀಸರು ವಕೀಲರ ವಿರುದ್ದ ಪೋಲಿಸರು ಉದ್ದೇಶ ಪೂರ್ವಕವಾಗಿ ಸಂಚು ರೂಪಿಸುತ್ತಿದ್ದಾರೆ. ಪರಿಶೀಲಿಸದೇ ಏಕಾಏಕಿ ವಕೀಲರ ಮೇಲೆ ಪ್ರಕರಣ ದಾಖಲಿಸಿರುವ ಡಿವೈಎಸ್ ಪಿ ಚಂದ್ರಶೇಖರ್ ಹಾಗೂ ಸಿಪಿಐ ಬಾಳೇಗೌಡ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತ್ತು ಮಾಡು ವರೆಗೂ ನಾವು ನ್ಯಾಯಾಲಯದ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ವಕೀಲರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ