ಮಧುಗಿರಿ ಪ್ರವೇಶಿಸಿದ ಮಿಡತೆಗಳ ಹಿಂಡು; ಮಹಾರಾಷ್ಟ್ರದಿಂದ ಬಂದಿರುವ ಶಂಕೆ
ಕೆಎಸ್ಐಐಡಿಸಿ ಗೋದಾಮಿಗೆ ಇತ್ತೀಚೆಗೆ ಬಂದು ಹೋಗಿರುವ ಮಹಾರಾಷ್ಟ್ರ ಮೂಲದ ಸರಕು ಸಾಗಾಣಿಕೆ ಲಾರಿಯ ಮೂಲಕ ಈ ಮಿಡತೆಗಳು ಮಧುಗಿರಿ ಯನ್ನು ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದೆ.
Vijaya Karnataka Web 29 May 2020, 10:20 pm
ತುಮಕೂರು: ನೆರೆಹೊರೆ ರಾಜ್ಯಗಳಲ್ಲಿ ಹಾವಳಿ ಎಬ್ಬಿಸಿರುವ ಮಿಡತೆಗಳು ಮಧುಗಿರಿ ಮೂಲಕ ರಾಜ್ಯಕ್ಕೆ ಪ್ರವೇಶಿಸಿವೆ. ಮಧುಗಿರಿ ಪಟ್ಟಣದ ಗೌರಿ ಬಿದನೂರು ರಸ್ತೆಯಲ್ಲಿರುವ ಕೆಎಸ್ಐಐಡಿಸಿ ಗೋದಾಮುಗಳ ಮುಂಭಾಗದಲ್ಲಿ ಈ ಮಿಡತೆಗಳು ಪ್ರತ್ಯಕ್ಷವಾಗಿವೆ.
ಶುಕ್ರವಾರ ಕುಮಾರ ರಾಮ್ ಹಾಗೂ ಗಣೇಶ್ ನಾಯ್ಕ್ ಎಂಬುವರು ತಮ್ಮ ಕಾರ್ಖಾನೆಯ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಈ ಮಿಡತೆಗಳ ಹಿಂಡು ಕಂಡು ಬಂದಿದೆ.
ಮಹಾರಾಷ್ಟ್ರದಿಂದ ಬಂದಿರುವ ಶಂಕೆ
ಕೆಎಸ್ಐಐಡಿಸಿ ಗೋದಾಮಿಗೆ ಇತ್ತೀಚೆಗೆ ಬಂದು ಹೋಗಿರುವ ಮಹಾರಾಷ್ಟ್ರ ಮೂಲದ ಸರಕು ಸಾಗಾಣಿಕೆ ಲಾರಿಯ ಮೂಲಕ ಈ ಮಿಡತೆಗಳು ಮಧುಗಿರಿ ಯನ್ನು ಪ್ರವೇಶಿಸಿರಬಹುದೆಂದು ಶಂಕಿಸಲಾಗಿದೆ.
ಕೆಎಸ್ಐಐಡಿಸಿ ಗೋದಾಮುಗಳ ಮುಂಭಾಗದಲ್ಲಿ ಬೆಳೆದಿದ್ದ ಎಕ್ಕದ ಗಿಡಗಳಲ್ಲಿ ಆಶ್ರಯ ಪಡೆದಿರುವ ಮಿಡತೆಗಳು ಗಿಡದ ಎಲೆಗಳನ್ನು ತಿಂದು ಮುಗಿಸಿವೆ. ರೈತರಲ್ಲಿ ಮುಂದೇನು ಎಂಬ ಭೀತಿ ಕಾಡಿದೆ.
ಯಾರೂ ಕೂಡ ಇಂತಹ ವದಂತಿಗಳಿಗೆ ಹೆದರುವ ಅವಶ್ಯಕತೆಯಿಲ್ಲ, ಹಲವು ದಶಕಗಳಿಂದ ಬೇಸಾಯ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ, ಇಂತಹ ಕೀಟಗಳಿಂದ ನಮ್ಮ ವೃತ್ತಿಗೆ ಖಂಡಿತವಾಗಿಯೂ ಸಮಸ್ಯೆಯಾಗುವುದಿಲ್ಲ, ಸಾಮಾಜಿಕ ತಾಣಗಳಲ್ಲಿ ಕಂಡು ಬರುತ್ತಿರುವ ಮಿಡತೆಗಳು ನಮ್ಮ ತಾಲೂಕಿಗೆ ಹೊಸದೇನಲ್ಲ, ಆದರೆ ಅವುಗಳ ನಿಯಂತ್ರಣದ ಬಗ್ಗೆ ಈ ಮೊದಲೇ ನಮ್ಮ ಕೃಷಿ ತಜ್ಞರು ಹಾಗೂ ಹಿರಿಯರ ಅನುಭವ ರೈತರಿಗೆ ತಿಳಿದಿದೆ.
-ರಂಗಪ್ಪ, ರೈತ ಮಧುಗಿರಿ
ಶುಕ್ರವಾರ ಕುಮಾರ ರಾಮ್ ಹಾಗೂ ಗಣೇಶ್ ನಾಯ್ಕ್ ಎಂಬುವರು ತಮ್ಮ ಕಾರ್ಖಾನೆಯ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಈ ಮಿಡತೆಗಳ ಹಿಂಡು ಕಂಡು ಬಂದಿದೆ.
ಮಹಾರಾಷ್ಟ್ರದಿಂದ ಬಂದಿರುವ ಶಂಕೆ
ಕೆಎಸ್ಐಐಡಿಸಿ ಗೋದಾಮಿಗೆ ಇತ್ತೀಚೆಗೆ ಬಂದು ಹೋಗಿರುವ ಮಹಾರಾಷ್ಟ್ರ ಮೂಲದ ಸರಕು ಸಾಗಾಣಿಕೆ ಲಾರಿಯ ಮೂಲಕ ಈ ಮಿಡತೆಗಳು ಮಧುಗಿರಿ ಯನ್ನು ಪ್ರವೇಶಿಸಿರಬಹುದೆಂದು ಶಂಕಿಸಲಾಗಿದೆ.
ಮಧುಗಿರಿ ಯಲ್ಲಿ ಕಂಡುಬಂದಿರುವ ಮಿಡತೆಗಳು ಹೆಚ್ಚಾಗಿ ರಾಜಸ್ಥಾನ, ಗುಜರಾತ್ ಹಾಗೂ ಗೋವಾ ರಾಜ್ಯಗಳಲ್ಲಿ ಕಂಡು ಬರುತ್ತಲಿವೆ. ಈಗ ನಮ್ಮ ತಾಲೂಕಿನಲ್ಲಿ ಕಂಡುಬಂದಿರುವುದು ಗಮನಕ್ಕೆ ಬಂದಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಬಾರದು, ಕೀಟನಾಶಕಗಳನ್ನು ಸಿಂಪಡಣೆ ಮಾಡಲು ಕ್ರಮವಹಿಸಲಾಗುವುದು, ಅತಿ ಹೆಚ್ಚಿನ ಪ್ರಮಾಣದಲ್ಲಿ ಈ ಮಿಡತೆಗಳು ಕಂಡು ಬಂದರೆ ತೊಂದರೆ ಹೆಚ್ಚಾಗಿರುತ್ತದೆ.
ಕೆಎಸ್ಐಐಡಿಸಿ ಗೋದಾಮುಗಳ ಮುಂಭಾಗದಲ್ಲಿ ಬೆಳೆದಿದ್ದ ಎಕ್ಕದ ಗಿಡಗಳಲ್ಲಿ ಆಶ್ರಯ ಪಡೆದಿರುವ ಮಿಡತೆಗಳು ಗಿಡದ ಎಲೆಗಳನ್ನು ತಿಂದು ಮುಗಿಸಿವೆ. ರೈತರಲ್ಲಿ ಮುಂದೇನು ಎಂಬ ಭೀತಿ ಕಾಡಿದೆ.
ಯಾರೂ ಕೂಡ ಇಂತಹ ವದಂತಿಗಳಿಗೆ ಹೆದರುವ ಅವಶ್ಯಕತೆಯಿಲ್ಲ, ಹಲವು ದಶಕಗಳಿಂದ ಬೇಸಾಯ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ, ಇಂತಹ ಕೀಟಗಳಿಂದ ನಮ್ಮ ವೃತ್ತಿಗೆ ಖಂಡಿತವಾಗಿಯೂ ಸಮಸ್ಯೆಯಾಗುವುದಿಲ್ಲ, ಸಾಮಾಜಿಕ ತಾಣಗಳಲ್ಲಿ ಕಂಡು ಬರುತ್ತಿರುವ ಮಿಡತೆಗಳು ನಮ್ಮ ತಾಲೂಕಿಗೆ ಹೊಸದೇನಲ್ಲ, ಆದರೆ ಅವುಗಳ ನಿಯಂತ್ರಣದ ಬಗ್ಗೆ ಈ ಮೊದಲೇ ನಮ್ಮ ಕೃಷಿ ತಜ್ಞರು ಹಾಗೂ ಹಿರಿಯರ ಅನುಭವ ರೈತರಿಗೆ ತಿಳಿದಿದೆ.
-ರಂಗಪ್ಪ, ರೈತ ಮಧುಗಿರಿ