ಕೊರಟಗೆರೆಯಲ್ಲಿ ಒಂಟಿ ಮಹಿಳೆಗೆ ಕೊಲೆ ಬೆದರಿಕೆ, ದರೋಡೆ: ಆರೋಪಿ ಬಂಧನ
ಅ.15ರಂದು ಸಂಜೆ ಹಸು ಮೇಯಿಸುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಮರಿಯಪ್ಪನಪಾಳ್ಯ ಗ್ರಾಮದ ನಿವಾಸಿ ಹರೀಶ್ ಕುಮಾರ್(26) ಬಂಧಿತ ಆರೋಪಿ.
Vijaya Karnataka Web 27 Nov 2020, 1:52 pm
ಕೊರಟಗೆರೆ: ಕೃಷಿ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ಒಂಟಿ ಮಹಿಳೆಗೆ ಚಾಕು ತೋರಿಸಿ ಆಭರಣ ದೋಚಿದ್ದ ಆರೋಪಿಯನ್ನು ಕೋಳಾಲ ಪಿಎಸೈ ನವೀನ್ ಕುಮಾರ್ ನೇತೃತ್ವದಲ್ಲಿ ಪೊಲೀಸರ ತಂಡ ಬಂಧಿಸಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವ್ಯಾಪ್ತಿಯ ತಣ್ಣೇನಹಳ್ಳಿ ಗ್ರಾಮದ ರೈತ ಮಹಿಳೆ ಜಗದಾಂಬ ತನ್ನ ಜಮೀನಿನಲ್ಲಿ ಅ.15ರಂದು ಸಂಜೆ ಹಸು ಮೇಯಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಸೋಂಪುರ ಹೋಬಳಿ ವ್ಯಾಪ್ತಿಯ ಮರಿಯಪ್ಪನಪಾಳ್ಯ ಗ್ರಾಮದ ನಿವಾಸಿ ನಾರಾಯಣಪ್ಪ ಎಂಬುವವರ ಮಗ ಹರೀಶಕುಮಾರ್(26) ಬಂಧಿತ ಆರೋಪಿ.
ಅಸಲಿ ಪೊಲೀಸರಿಂದ ನಕಲಿ ರೇಡ್..! ಚಿನ್ನಾಭರಣ ದೋಚಿದ್ದ ಖಾಕಿಗಳ ಬಣ್ಣ ಬಯಲು..!
ಆರೋಪಿ ಹರೀಶನಿಂದ 1 ಲಕ್ಷ 50ಸಾವಿರ ಮೌಲ್ಯದ 30ಗ್ರಾಂ ಚೈನ್, 2ಗ್ರಾಂ ಕಿವಿಯ ಗುಂಡು, ಮೊಬೈಲ್ ಮತ್ತು ಆಕ್ಟಿವಾ ಹೊಂಡವನ್ನು ಕೋಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರಿನಲ್ಲಿ ಪೊಲೀಸರ ಮೇಲೆ ಮಚ್ಚು ಬೀಸಿದ ರೌಡಿ: ಕಾಲಿಗೆ ಗುಂಡು ಹಾರಿಸಿ ಬಂಧನ
ಪ್ರಕರಣದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪಿಎಸೈ ನವೀನ್ ಕುಮಾರ್, ಸಿಬ್ಬಂದಿಗಳಾದ ಮೋಹನಕುಮಾರ್, ಮಂಜುನಾಥ್, ರಾಮು, ಪುಟ್ಟಸ್ವಾಮಿ ಯಶಸ್ವಿಯಾಗಿದ್ದಾರೆ. ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವ್ಯಾಪ್ತಿಯ ತಣ್ಣೇನಹಳ್ಳಿ ಗ್ರಾಮದ ರೈತ ಮಹಿಳೆ ಜಗದಾಂಬ ತನ್ನ ಜಮೀನಿನಲ್ಲಿ ಅ.15ರಂದು ಸಂಜೆ ಹಸು ಮೇಯಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಸೋಂಪುರ ಹೋಬಳಿ ವ್ಯಾಪ್ತಿಯ ಮರಿಯಪ್ಪನಪಾಳ್ಯ ಗ್ರಾಮದ ನಿವಾಸಿ ನಾರಾಯಣಪ್ಪ ಎಂಬುವವರ ಮಗ ಹರೀಶಕುಮಾರ್(26) ಬಂಧಿತ ಆರೋಪಿ.
ಅಸಲಿ ಪೊಲೀಸರಿಂದ ನಕಲಿ ರೇಡ್..! ಚಿನ್ನಾಭರಣ ದೋಚಿದ್ದ ಖಾಕಿಗಳ ಬಣ್ಣ ಬಯಲು..!
ಆರೋಪಿ ಹರೀಶನಿಂದ 1 ಲಕ್ಷ 50ಸಾವಿರ ಮೌಲ್ಯದ 30ಗ್ರಾಂ ಚೈನ್, 2ಗ್ರಾಂ ಕಿವಿಯ ಗುಂಡು, ಮೊಬೈಲ್ ಮತ್ತು ಆಕ್ಟಿವಾ ಹೊಂಡವನ್ನು ಕೋಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರಿನಲ್ಲಿ ಪೊಲೀಸರ ಮೇಲೆ ಮಚ್ಚು ಬೀಸಿದ ರೌಡಿ: ಕಾಲಿಗೆ ಗುಂಡು ಹಾರಿಸಿ ಬಂಧನ
ಪ್ರಕರಣದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪಿಎಸೈ ನವೀನ್ ಕುಮಾರ್, ಸಿಬ್ಬಂದಿಗಳಾದ ಮೋಹನಕುಮಾರ್, ಮಂಜುನಾಥ್, ರಾಮು, ಪುಟ್ಟಸ್ವಾಮಿ ಯಶಸ್ವಿಯಾಗಿದ್ದಾರೆ. ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.