ಆ್ಯಪ್ನಗರ

ತುಮಕೂರು: ವಾಟರ್ ಟ್ಯಾಂಕ್‌ ಕ್ಲೀನ್‌ ಮಾಡುವ ವೇಳೆ ಏಣಿಯಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು..!

18 ವರ್ಷಗಳಿಂದ ನೀರು ವಿತರಕನಾಗಿ ಕುಟುಂಬದ ಆಧಾರಸ್ತಂಭ ಆಗಿದ್ದ ವಾಟರ್ ಮ್ಯಾನ್ ಪ್ರಕಾಶ್ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka Web 16 Jan 2021, 11:51 am
ತುಮಕೂರು: ನೀರಿನ ಟ್ಯಾಂಕ್‌ ಸ್ವಚ್ಚತೆ ಮಾಡುತ್ತಿದ್ದ ವೇಳೆ ಏಣಿಯ ಕಾಲು ಮುರಿದು ಟ್ಯಾಂಕಿನ ಮೇಲಿಂದ ಬಿದ್ದ ವಾಟರ್ ಮ್ಯಾನ್ ಸಾವನ್ನಪ್ಪಿರುವ ಘಟನೆ ನಡೆದಿದೆ.
Vijaya Karnataka Web Water Tank


ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಪ್ಪನಹಳ್ಳಿ ಗ್ರಾಮದ ನೀರು ವಿತರಕ ಪ್ರಕಾಶ್(43) ಮೃತಪಟ್ಟ ದುರ್ದೈವಿಯಾಗಿದ್ದು, ಇವರು ಸಂಕ್ರಾಂತಿ ಹಬ್ಬದ ದಿನ ನೀರಿನ ಟ್ಯಾಂಕು ತೊಳೆಯುವ ವೇಳೆ ಈ ದುರ್ಘಟನೆ‌ ನಡೆದಿದೆ. ಟ್ಯಾಂಕ್‌ ಸ್ವಚ್ಚತೆ ಮಾಡುತ್ತಿದ್ದ ವೇಳೆ ಏಣಿಯ ಕಾಲು ಮುರಿದ ಪರಿಣಾಮ ಬಂಡೆಯ ಮೇಲೆ ಬಿದ್ದ ಪ್ರಕಾಶ್‌ ಅವರ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದಾರೆ.

ಇದು ವಿಜ್ಞಾನಕ್ಕೆ ಸವಾಲ್..! ತುಮಕೂರಿನಲ್ಲಿ ಮಾನವ ಮುಖ, ಗೂಬೆ ಕಣ್ಣು ಹೋಲುವ ಮೇಕೆ ಮರಿ ಜನನ..!
ತಕ್ಷಣ ಅವರನ್ನು ತುಮಕೂರು ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರವೇ ಬೆಂಗಳೂರು ನಿಮ್ಹಾನ್ಸ್ ಗೆ ರವಾನಿಸಲಾಗಿತ್ತು. ಆದರೆ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿ ಆಗದೇ ಆಸ್ಪತ್ರೆಯಲ್ಲಿ ಪ್ರಕಾಶ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

‘ಯಾರ ಹತ್ರ ಇರದಿದ್ರೂ ನಮ್ಮ ಸ್ನೇಹಿತ ವಿಶ್ವನಾಥ್ ಹತ್ರ ಸಿ.ಡಿ ಇದ್ದೇ ಇರುತ್ತೆ’; ಟಿಬಿ ಜಯಚಂದ್ರ
18ವರ್ಷಗಳಿಂದ ನೀರು ವಿತರಕನಾಗಿ ಕುಟುಂಬದ ಆಧಾರಸ್ತಂಭ ಆಗಿದ್ದ ವಾಟರ್ ಮ್ಯಾನ್ ಪ್ರಕಾಶ್ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ