ಆ್ಯಪ್ನಗರ

ವೈದ್ಯಕೀಯ ಲೋಕಕ್ಕೆ ಅರ್ಥವಾಗುತ್ತಿಲ್ಲ ಶ್ರೀಗಳ ವಿಲ್ ಪವರ್

ಗಳು ಚೇತರಿಸಿಕೊಳ್ತಿರೋದು ಪವಾಡವೇ ಸರಿ. ಅವರ ವಿಲ್ ಪವರ್ ನೋಡಿದ್ರೆ ನಿಜಕ್ಕೂ ಆಶ್ಚರ್ಯವಾಗತ್ತೆ ಎಂದು ಶಾಸಕ ಎನ್. ಮಹೇಶ್ ಹೇಳಿದ್ದಾರೆ.

Vijaya Karnataka Web 18 Jan 2019, 2:52 pm
ತುಮಕೂರು: ಶ್ರೀಗಳ ಆತ್ಮವಿಶ್ವಾಸವನ್ನು ವೈದ್ಯಕೀಯ ಲೋಕ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ. ಪವಾಡದಂತೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು
Vijaya Karnataka Web Sri 2

ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರ ಮಾಹಿತಿಯಂತೆ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡಿದೆ. ನಮಗೆ ಆಶಾಭಾವನೆ ಮೂಡಿಸಿದೆ.ಬೆಳಗ್ಗೆ ನಾವೇ ಇಷ್ಟಲಿಂಗ ಪೂಜೆ ನೆರವೇರಿಸಿದ್ದೇವೆ ಎಂದರು.

ಶ್ರೀಗಳ ಆತ್ಮಶಕ್ತಿ ದಂಗಾಗಿಸಿತು: ಎನ್ ಮಹೇಶ್

ಶ್ರೀಗಳ ಆತ್ಮಶಕ್ತಿ ಕಂಡು ನಿಜಕ್ಕೂ ದಂಗಾಗಿದ್ದೇನೆ ಎಂದು ಶಾಸಕ ಎನ್ ಮಹೇಶ್ ಹೇಳಿದ್ದಾರೆ.

ಇಂದು ಶ್ರೀಗಳ ದರ್ಶನ ಮಾಡಿ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಗಳು ಚೇತರಿಸಿಕೊಳ್ತಿರೋದು ಪವಾಡವೇ ಸರಿ. ಅವರ ವಿಲ್ ಪವರ್ ನೋಡಿದ್ರೆ ನಿಜಕ್ಕೂ ಆಶ್ಚರ್ಯವಾಗತ್ತೆ. ಅವರ ಹೆಬ್ಬೆರಳನ್ನು ಪ್ರೆಸ್ ಮಾಡಿದೆ. ಆಗ ಉಬ್ಬು ಚಲನೆಯಾಗೋದನ್ನ ಗಮನಿಸಿದೆ. ವಿಲ್ ಪವರ್ ಇಷ್ಟು ಪ್ರಬಲವಾಗಿರುವರೆಗೆ ಶ್ರೀ ಜೀವಂತವಾಗಿರುತ್ತಾರೆ ಎಂದು ಅವರು ಹೇಳಿದರು.

1990ರಲ್ಲಿ ಅವರ ಸಂಸ್ಥೆಗೆ ಸರಕಾರದಿಂದ ಅನುದಾನ ಬಿಡುಗಡೆ ಮಾಡಿದ್ದೆ ಎಂಬುದನ್ನು ಅವರು ನೆನಪಿಸಿಕೊಂಡರು.

ಒಂದು ಗಂಟೆ ಸಹಜ ಉಸಿರಾಟ ನಡೆಸಿದ ಸಿದ್ಧಗಂಗಾ


ಶ್ರೀಗಳ ಆರೋಗ್ಯ ಸ್ಥಿತಿ ಚೇತರಿಕೆ ಕಾಣುತ್ತಿದ್ದು, ಇಂದು ಬೆಳಗ್ಗೆಯೂ ಸಹಜ ಉಸಿರಾಟ ನಡೆಸಿದ್ದಾರೆ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ತಿಳಿಸಿದರು.
ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ಒಂದು ಗಂಟೆಗಳ ಕಾಲ ಸಹಜ ಉಸಿರಾಟ ನಡೆಸಿದ್ದಾರೆ. ಆಲ್ಬಮಿನ್ ಪ್ರಮಾಣ ನಿರೀಕ್ಷಿತ ಪ್ರಗತಿಯಾಗಿಲ್ಲ. ರಕ್ತ ಪರೀಕ್ಷೆಯಲ್ಲಿ ಸೋಂಕು ಕಡಿಮೆಯಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದರು.

ಇಂದು ಯಾವುದೇ ದ್ರವರೂಪದ ಆಹಾರ ನೀಡಿಲ್ಲ. ಕಿರಿಯ ಶ್ರೀಗಳು ಹಿರಿಯ ಶ್ರೀಗಳ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ