ಆ್ಯಪ್ನಗರ

ಮಧ್ಯಾಹ್ನದ ಬಿಸಿಯೂಟಕ್ಕೆ ಸಿದ್ದಗಂಗಾ ಶ್ರೀಗಳ ಹೆಸರು: ಬಸವರಾಜ ಬೊಮ್ಮಾಯಿ ಭರವಸೆ

ಈ ನೆಲದಲ್ಲಿ ಶ್ರೀಗಳ ಸ್ಫೂರ್ತಿ, ಪ್ರೇರಣೆ ಇದೆ. ಶ್ರೀಗಳ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 88 ವರ್ಷಗಳ ಕಾಲ ದಾಖಲೆಯ ಸೇವೆ ದೇಶದಲ್ಲೇ ಯಾರೂ ಮಾಡಿಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Vijaya Karnataka Web 1 Apr 2022, 1:03 pm
ತುಮಕೂರು: ಮಧ್ಯಾಹ್ನದ ಬಿಸಿಯೂಟಕ್ಕೆ ಶ್ರೀಗಳ ಹೆಸರಿಡಲಾಗುವುದು. ಈ ಸಂಬಂಧ ಸರಕಾರದ ಆದೇಶವನ್ನು ಅತಿ ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
Vijaya Karnataka Web ಗುರುವಂದನಾ ಕಾರ್ಯಕ್ರಮ
ಗುರುವಂದನಾ ಕಾರ್ಯಕ್ರಮ


ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಶಿವಕುಮಾರ ಶ್ರೀಗಳ 115 ನೇ ಜನ್ಮದಿನೋತ್ಸವ, ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರು.

ಇದು ನಮ್ಮ ಸೌಭಾಗ್ಯ. ಶ್ರೀಗಳು ನಡೆದಾಡಿದ ಮಣ್ಣಿನಲ್ಲಿ ಭಕ್ತನಾಗಿ ಬಂದು ಅಳಿಲು ಸೇವೆ ಸಲ್ಲಿಸುವುದು ಪುಣ್ಯ ಎಂದು ಭಾವಿಸಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.

ಶಿವಕುಮಾರ ಸ್ವಾಮೀಜಿ ಜನ್ಮೋತ್ಸವ: ಮುಸ್ಲಿಮ್‌ ಮಗು ಸೇರಿ 115 ಮಕ್ಕಳಿಗೆ ಶ್ರೀಗಳ ಹೆಸರು, ಮೋದಿ ಟ್ವೀಟ್‌ ನಮನ

ಈ ನೆಲದಲ್ಲಿ ಶ್ರೀಗಳ ಸ್ಫೂರ್ತಿ, ಪ್ರೇರಣೆ ಇದೆ. ಸಿದ್ದಲಿಂಗ ಶ್ರೀಗಳು ಶ್ರೀಗಳ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 88 ವರ್ಷಗಳ ಕಾಲ ದಾಖಲೆಯ ಸೇವೆ ದೇಶದಲ್ಲೇ ಯಾರೂ ಮಾಡಿಲ್ಲ ಎಂದು ತಿಳಿಸಿದರು.

ಅವರು ಹಚ್ಚಿದ ಒಲೆಯ ಕಿಚ್ಚು ಇಂದೂ ಉರಿಯುತ್ತಿದೆ. ಎಲ್ಲಿಯವರೆಗೆ ಆ ಕಿಚ್ಚು ಅದುವರೆಗೆ ಬಡವರ ಹೊಟ್ಟೆಯ ಕಿಚ್ಚು ತಣಿಯುತ್ತದೆ ಅನ್ನ ,ಅಕ್ಷರ, ವಸತಿ ದಾಸೋಹ ಪ್ರೇರಣೆ. ಅವರ ನಡೆನುಡಿ ಈ‌ ನಾಡಿಗೆ ಎಂದೆಂದಿಗೂ ದಾರಿದೀಪ ಎಂದು ಬೊಮ್ಮಾಯಿ ತಿಳಿಸಿದರು.

ಶ್ರೀಗಳು ಧರ್ಮಗುರುಗಳು ಮಾತ್ರವಲ್ಲ ಬದುಕು ಕಟ್ಟಿಕೊಟ್ಟ ಪೂಜ್ಯರು. ದೂರದ ಉತ್ತರ ಕರ್ನಾಟಕದ ಬಡ ಮಕ್ಕಳ ಶಿಕ್ಷಣ ನೀಡಿ ಸ್ಮರಣೀರಾಗಿದ್ದಾರೆ. 10 ಸಾವಿರ ಮಕ್ಕಳು ಶಿಕ್ಷಣ ಪಡೀತಾ ಇದ್ದಾರೆ ಇವತ್ತು ಶ್ರದ್ಧೆ ಮತ್ತು ನಿಷ್ಠೆ, ಪರಿಶ್ರಮ ಶ್ರೀಗಳ ಧ್ಯೇಯ .ಅದನ್ನು ಪರಿಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಎಲ್ಲಾ ಧರ್ಮದ ಜನರನ್ನು ,ಸಮುದಾಯದವರನ್ನು ಪ್ರೀತಿ ಮಾಡ್ತಿದ್ರು, ಬದುಕು ಕಟ್ಟಿಕೊಟ್ಟಿದ್ದಾರೆ. ಸರ್ವೋದಯ, ಅಂತ್ಯೋದಯವನ್ನು ಮಠದಲ್ಲಿ ‌ಕಾಣುತ್ತಿದ್ದೇವೆ. ಇದು ಇಡೀ ಕರ್ನಾಟಕದಲ್ಲಿ ಆಗುತ್ತಿದೆ.

ಸಿದ್ಧಗಂಗಾ ಮಠದಲ್ಲಿ ಜನ್ಮೋತ್ಸವ: ರಾಹುಲ್‌ ಗಾಂಧಿ ಭೇಟಿ

ಯಡಿಯೂರಪ್ಪ ಅವರ ಮಾತಿನಂತೆ ದಾಸೋಹ ದಿನ ಕೋರಿದ್ದರು. ನಾವು ಮಾಡಿದ್ದೇವೆ ಎಂದು ತಿಳಿಸಿದರು.

ಮಧ್ಯಾಹ್ನದ ಬಿಸಿಯೂಟಕ್ಕೆ ಶ್ರೀಗಳ ಹೆಸರು ವಿಜಯೇಂದ್ರ ಮನವಿ ಮಾಡಿದ್ದಾರೆ. ಅದರಂತೆ ನಾವು ಸರಕಾರದಿಂದ ಆ ಹೆಸರು ಇಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ