ಆ್ಯಪ್ನಗರ

ಕರ್ನಾಟಕಕ್ಕೆ ಮಿಡತೆ ಕಾಟವಿಲ್ಲ, ಆತಂಕ ಪಡಬೇಡಿ ಎಂದ ಬಿ.ಸಿ ಪಾಟೀಲ್

ಮರುಭೂಮಿಯ ಮಿಡತೆಗಳ ಕಾಟ ಕರ್ನಾಟಕಕ್ಕೆ ಇಲ್ಲ, ಈ ನಿಟ್ಟಿನಲ್ಲಿ ರೈತರು ಆತಂಕ ಪಡಬೇಕಾಗಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್‌ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಈ ಕುರಿತಾಗಿ ಹೇಳಿದಿಷ್ಟು.

Vijaya Karnataka Web 1 Jun 2020, 12:09 pm
ತುಮಕೂರು: ರಾಜ್ಯಕ್ಕೆ ಮರುಭೂಮಿಯ ಮಿಡತೆಯ ಕಾಟವಿಲ್ಲ. ರೈತರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಮಿಡತೆ ದಾಳಿಯನ್ನು ಎದುರಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೆವು. ಆದರೆ ಗಾಳಿಯ ದಿಕ್ಕು ಬದಲಾದ ಕಾರಣದಿಂದಾಗಿ ಮಧ್ಯಪ್ರದೇಶದ ಕಡೆಗೆ ಮಿಡತೆಗಳು ಸಾಗಿವೆ. ಪರಿಣಾಮ ನಮ್ಮ ರಾಜ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
Vijaya Karnataka Web bc patil


ಬಲುಚಿಸ್ಥಾನ್‌ ಭಾಗದಿಂದ ಗಾಳಿಯ ದಿಕ್ಕನ್ನು ಆಧರಿಸಿ ಭಾರತಕ್ಕೆ ಲಗ್ಗೆ ಇಟ್ಟಿದ್ದ ಮರುಭೂಮಿಯ ಮಿಡತೆಗಳು ಕರ್ನಾಟಕದ ರೈತರಲ್ಲೂ ಆತಂಕ ಸೃಷ್ಟಿಸಿದ್ದವು. ಇದನ್ನು ಎದುರಿಸಲು ಕೃಷಿ ಇಲಾಖೆಯೂ ಸಿದ್ಧತೆಯನ್ನು ನಡೆಸಿತ್ತು. ಜಿಲ್ಲಾಡಳಿತಕ್ಕೂ ಸಚಿವ ಬಿ.ಸಿ ಪಾಟೀಲ್ ಸಿದ್ದತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಕೋಲಾರ ಬಳಿಕ ದಕ್ಷಿಣ ಕನ್ನಡದಲ್ಲಿ ಮಿಡತೆ ಹಾವಳಿ; ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ

ಬಂಡಾಯವಿಲ್ಲ, ಸರ್ಕಾರ ಸುಭದ್ರ

ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು. ಇಂದು ಯಾರ ಮನೆಗೂ ಊಟಕ್ಕೆ ಹೋಗುವುದು ಕಷ್ಟ. ಲಾಕ್‌ಡೌನ್ ಕಾರಣದಿಂದಾಗಿ ಹೋಟೇಲ್‌ ಹೋಗಲು ಸಾಧ್ಯವಾಗದೆ ಉಮೇಶ್ ಕತ್ತಿ ಮನೆಗೆ ಕೆಲವರು ಊಟಕ್ಕೆ ಹೋಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಾವೆಲ್ಲರು ಬಂದ ಮೇಲೆ ಸರ್ಕಾರ ಸುಭದ್ರವಾಗಿದೆ. ಆಂತರಿಕ ಭಿನ್ನಭಿಪ್ರಾಯ ಸಹಜ. ಆದರೆ ಯಾವುದೇ ಗಾಬರಿ ಪಡುವ ಅವಷ್ಯಕತೆ ಇಲ್ಲ ಎಂದು ಸಮಜಾಯಿಷಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ