ಕೊಡಿಗೇನಹಳ್ಳಿ (ತುಮಕೂರು): ಶಾಸಕ ವೀರಭದ್ರಯ್ಯನವರು ಹಸಿರು ಬಣ್ಣ ಬದಲಾಯಿಸಿ ಕೆಂಪು ಬಣ್ಣ ಹಾಕಿಕೊಂಡರೆ ನಾನು ಈ ಭಾಗದ ಬಣ್ಣ ಬದಲಾಯಿಸುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ಶಾಸಕ ಎಂವಿ ವೀರಭದ್ರಯ್ಯ ಅವರನ್ನು ಸಚಿವ ಮಾಧುಸ್ವಾಮಿ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನಿಸಿದ್ದಾರೆ. ಮಧುಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಮಂಗಳವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಬರುವಾಗ ವೀರಭಧ್ರಯ್ಯನವರು ಈ ಭಾಗದ ಕೆರೆಗಳನ್ನು ತೋರಿಸಿದರು. ಆಗ ವೀರಭಧ್ರಯ್ಯನವರಿಗೆ ಹಸಿರು ಬಣ್ಣ ಬದಲಾಯಿಸಿ ಕೆಂಪು ಬಣ್ಣ ಹಾಕಿಕೊಳ್ಳಿ ಎಂದು ಹೇಳಿದ್ದೇನೆ. ವೀರಭದ್ರಯ್ಯನವರು ಬಣ್ಣ ಬದಲಾಯಿಸಿದರೆ ಈ ಭಾಗದ ಬಣ್ಣವನ್ನು ನಾನು ಬದಲಾಯಿಸುತ್ತೇನೆ. ಈ ಬಗ್ಗೆ ಯಾವುದೆ ಅನುಮಾನ ಇಟ್ಟುಕೊಳ್ಳಬೇಡಿ ಎಂದು ಹೇಳಿದರು.
ಆಡಳಿತವೇ ಶ್ರೇಷ್ಠ ಎನ್ನುವ ಕಾಲ ಮುಗಿದಿದೆ. ಇದೀಗ ಅಭಿವೃದ್ಧಿಯೇ ಶ್ರೇಷ್ಠ, ಗಾಂಧೀಜಿಯವರು ಸ್ವಾತಂತ್ರ ಬೇಕು ಎಂದಿದ್ದು ಪ್ರತಿ ವ್ಯಕ್ತಿಯ ಶ್ರೇಯಸ್ಸಿಗೆ ಎಂದ ಮಾಧುಸ್ವಾಮಿ, ಆರೋಗ್ಯ ಇಲಾಖೆಯ ಸೇವೆ ದೇವರ ಸೇವೆ ಎಂದು ಭಾವಿಸಬೇಕು. ಮೋದಿಯವರು ಅಟಲ್ ಭೂಜಲ್ ಯೋಜನೆಯಡಿ ಜಿಲ್ಲೆಗೆ 1208 ಕೋಟಿ ರೂ. ಅನುದಾನ ನೀಡಿದ್ದು, ತಾಲೂಕುಗಳಲ್ಲಿ ಅನುಷ್ಠಾನ ಮಾಡಲಿದ್ದೇವೆ ಎಂದು ತಿಳಿಸಿದರು.
ಶಾಸಕ ಎಂವಿ ವೀರಭದ್ರಯ್ಯ ಮಾತನಾಡಿ, ಈ ಭಾಗಕ್ಕೆ ಈ ಆರೋಗ್ಯ ಕೇಂದ್ರ ಅತ್ಯವಶ್ಯಕವಾಗಿತ್ತು. ಬಹುದಿನಗಳ ಬೇಡಿಕೆ ಈಡೇರಿದೆ. ಯಾವ ಕಾಲದಲ್ಲೂ 3 ತಿಂಗಳು ಸಿದ್ದಾಪುರ ಕೆರೆಗೆ ನೀರು ಹರಿದಿರಲಿಲ್ಲ, ಸತತವಾಗಿ 3 ತಿಂಗಳು ಹೇಮಾವತಿ ನೀರು ಹರಿಯಲು ಮಾಧುಸ್ವಾಮಿ ಅವರೇ ಕಾರಣ. ಈ ಭಾಗದ ರೈತರ ಬವಣೆ ಬಗ್ಗೆ ಅವರಿಗೆ ಅರಿವಿದ್ದು, ಹೆಚ್ಚು ಅನುದಾನದ ಮೂಲಕ ಈ ಭಾಗದ ಕರೆಗಳ ಸುಧಾರಣೆ ಮಾಡುವ ಭರವಸೆ ಇದೆ ಎಂದರು.
ಮತ್ತೆ ಗರಂ ಆದ ಸಚಿವ
ಕಾರ್ಯಕ್ರಮದಲ್ಲಿ ರೈತ ಮುಖಂಡ ಸೈಯದ್ ನಾಸೀರ್ ಎದ್ದು ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆರಳಿದ ಸಚಿವ ಮಾಧುಸ್ವಾಮಿ "ಜಿಲ್ಲೆ ಮಾಡಿದರೆ ಯಾರೋ ಡಿಸಿ ಬರ್ತಾರೆ ರೀ, ರೈತರ ಬೋರು ಓಂದು ಓಡಲ್ಲಾ, ಬೋರ್ವೆಲ್ ಬಗ್ಗೆ ಮಾತಾಡಿ ಅಂದರೆ ನೀವು ಎದ್ದು ಜಿಲ್ಲೆ ಮಾಡಿ ಅಂದ್ರೇ, ಅವರ್ ತೀಟೆ ತೀರಿಸೋಕೆ ಜಿಲ್ಲೆ ಮಾಡೋ ಭಾಷಣ ಮಾಡೋಣ, ಅದರಿಂದ ನಮಗೆ ರೈತರಿಗೆ ಯಾವುದೆ ಪ್ರಯೋಜನ ಆಗಲ್ಲಪ್ಪ" ಎಂದು ಗರಂ ಆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್, ಎಸ್ಪಿ ಡಾ. ಕೆ.ವಂಶಿಕೃಷ್ಣ, ಎಸಿ ಸೋಮಪ್ಪ ಕಡಕೋಳ, ತಾಪಂ ಅಧ್ಯಕ್ಷೆ ಇಂದಿರಾ ದೇನನಾಯ್ಕ್, ಡಿಎಚ್ಒ ನಾಗೇಂದ್ರಪ್ಪ, ತಹಶೀಲ್ದಾರ್ ಡಾ. ಜಿ ವಿಶ್ವನಾಥ್, ಟಿಎಚ್ಒ ರಮೇಶ್ ಬಾಬು, ಜಿಪಂ ಸದಸ್ಯೆ ಮಂಜುಳಾ ಆದಿನಾರಾಯಣ ರೆಡ್ಡಿ, ಪಿಡಿಒ ನವೀನ್ ಕುಮಾರ್ ಇದ್ದರು.
ಆಡಳಿತವೇ ಶ್ರೇಷ್ಠ ಎನ್ನುವ ಕಾಲ ಮುಗಿದಿದೆ. ಇದೀಗ ಅಭಿವೃದ್ಧಿಯೇ ಶ್ರೇಷ್ಠ, ಗಾಂಧೀಜಿಯವರು ಸ್ವಾತಂತ್ರ ಬೇಕು ಎಂದಿದ್ದು ಪ್ರತಿ ವ್ಯಕ್ತಿಯ ಶ್ರೇಯಸ್ಸಿಗೆ ಎಂದ ಮಾಧುಸ್ವಾಮಿ, ಆರೋಗ್ಯ ಇಲಾಖೆಯ ಸೇವೆ ದೇವರ ಸೇವೆ ಎಂದು ಭಾವಿಸಬೇಕು. ಮೋದಿಯವರು ಅಟಲ್ ಭೂಜಲ್ ಯೋಜನೆಯಡಿ ಜಿಲ್ಲೆಗೆ 1208 ಕೋಟಿ ರೂ. ಅನುದಾನ ನೀಡಿದ್ದು, ತಾಲೂಕುಗಳಲ್ಲಿ ಅನುಷ್ಠಾನ ಮಾಡಲಿದ್ದೇವೆ ಎಂದು ತಿಳಿಸಿದರು.
ಶಾಸಕ ಎಂವಿ ವೀರಭದ್ರಯ್ಯ ಮಾತನಾಡಿ, ಈ ಭಾಗಕ್ಕೆ ಈ ಆರೋಗ್ಯ ಕೇಂದ್ರ ಅತ್ಯವಶ್ಯಕವಾಗಿತ್ತು. ಬಹುದಿನಗಳ ಬೇಡಿಕೆ ಈಡೇರಿದೆ. ಯಾವ ಕಾಲದಲ್ಲೂ 3 ತಿಂಗಳು ಸಿದ್ದಾಪುರ ಕೆರೆಗೆ ನೀರು ಹರಿದಿರಲಿಲ್ಲ, ಸತತವಾಗಿ 3 ತಿಂಗಳು ಹೇಮಾವತಿ ನೀರು ಹರಿಯಲು ಮಾಧುಸ್ವಾಮಿ ಅವರೇ ಕಾರಣ. ಈ ಭಾಗದ ರೈತರ ಬವಣೆ ಬಗ್ಗೆ ಅವರಿಗೆ ಅರಿವಿದ್ದು, ಹೆಚ್ಚು ಅನುದಾನದ ಮೂಲಕ ಈ ಭಾಗದ ಕರೆಗಳ ಸುಧಾರಣೆ ಮಾಡುವ ಭರವಸೆ ಇದೆ ಎಂದರು.
ಮತ್ತೆ ಗರಂ ಆದ ಸಚಿವ
ಕಾರ್ಯಕ್ರಮದಲ್ಲಿ ರೈತ ಮುಖಂಡ ಸೈಯದ್ ನಾಸೀರ್ ಎದ್ದು ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆರಳಿದ ಸಚಿವ ಮಾಧುಸ್ವಾಮಿ "ಜಿಲ್ಲೆ ಮಾಡಿದರೆ ಯಾರೋ ಡಿಸಿ ಬರ್ತಾರೆ ರೀ, ರೈತರ ಬೋರು ಓಂದು ಓಡಲ್ಲಾ, ಬೋರ್ವೆಲ್ ಬಗ್ಗೆ ಮಾತಾಡಿ ಅಂದರೆ ನೀವು ಎದ್ದು ಜಿಲ್ಲೆ ಮಾಡಿ ಅಂದ್ರೇ, ಅವರ್ ತೀಟೆ ತೀರಿಸೋಕೆ ಜಿಲ್ಲೆ ಮಾಡೋ ಭಾಷಣ ಮಾಡೋಣ, ಅದರಿಂದ ನಮಗೆ ರೈತರಿಗೆ ಯಾವುದೆ ಪ್ರಯೋಜನ ಆಗಲ್ಲಪ್ಪ" ಎಂದು ಗರಂ ಆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್, ಎಸ್ಪಿ ಡಾ. ಕೆ.ವಂಶಿಕೃಷ್ಣ, ಎಸಿ ಸೋಮಪ್ಪ ಕಡಕೋಳ, ತಾಪಂ ಅಧ್ಯಕ್ಷೆ ಇಂದಿರಾ ದೇನನಾಯ್ಕ್, ಡಿಎಚ್ಒ ನಾಗೇಂದ್ರಪ್ಪ, ತಹಶೀಲ್ದಾರ್ ಡಾ. ಜಿ ವಿಶ್ವನಾಥ್, ಟಿಎಚ್ಒ ರಮೇಶ್ ಬಾಬು, ಜಿಪಂ ಸದಸ್ಯೆ ಮಂಜುಳಾ ಆದಿನಾರಾಯಣ ರೆಡ್ಡಿ, ಪಿಡಿಒ ನವೀನ್ ಕುಮಾರ್ ಇದ್ದರು.