ಆ್ಯಪ್ನಗರ

CT Ravi Car Accident: ಸ್ಥಳದಲ್ಲೇ ಯುವಕರಿಬ್ಬರ ಸಾವು

ಶಾಸಕ ಸಿ.ಟಿ ರವಿ ಅವರ ಕಾರು ಕೂಡ ಡಿಕ್ಕಿ ಹೊಡೆದು ನಂತರ ರಸ್ತೆ ಮೇಲಿಂದ ಕೆಳಗೆ ಉರುಳಿ ಬಿದ್ದು ಜಖಂ ಅಗಿದೆ. ಶಾಸಕ ಸಿ.ಟಿ ರವಿ ಅವರಿಗೆ ಸಣ್ಣ ಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Vijaya Karnataka Web 19 Feb 2019, 9:20 am
ಕುಣಿಗಲ್: ಶಾಸಕ‌ ಸಿ. ಟಿ. ರವಿ ಅವರು ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಕುಣಿಗಲ್‌ನ ಹೇರೂರು ಬಳಿಯ ಬೈಪಾಸ್ ನಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
Vijaya Karnataka Web Car.


ಕನಕಪುರ ತಾಲೂಕಿನ‌ ಸೂರನಹಳ್ಳಿ ಸುನಿಲ್ (28) ಹಾಗೂ ಶಶಿಕುಮಾರ್ (30) ಮೃತಪಟ್ಟಿರುವ ಯುವಕರು.

ಶಾಸಕ ಸಿ.ಟಿ ರವಿ ಅವರ ಟೊಯೊಟ ಫಾರ್ಚೂನರ್ ಕಾರು ಕೂಡ ಡಿಕ್ಕಿ ಹೊಡೆದು ನಂತರ ರಸ್ತೆ ಮೇಲಿಂದ ಕೆಳಗೆ ಉರುಳಿ ಬಿದ್ದು ಜಖಂ ಅಗಿದೆ. ಶಾಸಕ ಸಿ.ಟಿ ರವಿ ಅವರಿಗೆ ಸಣ್ಣ ಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಡ್ಯ ಜಿಲ್ಲೆ ಅಡಿಷನಲ್ ಎಸ್ಪಿ ಬಲರಾಮೇಗೌಡ ಅವರ ಕುಟುಂಬದ ಕಾರು ಚಾಲಕ ಜಯಚಂದ್ರನ ಹುಟ್ಟುಹಬ್ಬದ ಅಂಗವಾಗಿ ಸೂರನಹಳ್ಳಿ ಗ್ರಾಮದ ಒಟ್ಟು 13 ಸ್ನೇಹಿತರು ಕುಂದಾಪುರಕ್ಕೆ ಪ್ರವಾಸಕ್ಕೆ ತೆರಳಿ ಹುಟ್ಟು ಅಚರಣೆ ಮಾಡಿಕೊಂಡು ವಾಪಾಸ್ ಬರುವಾಗ ಅಪಘಾತ ಸಂಭವಿಸಿದೆ.

ಕುಣಿಗಲ್ ತಾಲೂಕಿನ ಹೇರೂರು ಬಳಿ ರಸ್ತೆ ಬದಿ‌ ಕಾರುಗಳನ್ನು ನಿಲ್ಲಿಸಿಕೊಂಡು ಲಗೇಜ್‌ಳನ್ನು ಬದಲಾಯಿಸಿಕೊಳ್ಳತ್ತಿರುವಾಗ ಚಿಕ್ಕ ಮಂಗಳೂರು ಕಡೆಯಿಂದ ವೇಗವಾಗಿ ಬಂದ ಸಿ. ಟಿ. ರವಿ ಅವರಿದ್ದ ಕಾರು ಡಿಕ್ಕಿ ಹಿಡೆದು ಅವಘಡ ಸಂಭವಿಸಿದೆ.

ಅಪಘಾತದ ಬಳಿಕ ಸಿ ಟಿ ರವಿ ಬೆಳಗಿನ ಜಾವ 3:30ಕ್ಕೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಡಿಸ್ಚಾರ್ಜ್‌ ಆಗಿದ್ದಾರೆ ಎನ್ನಲಾಗಿದೆ. ಅಪಘಾತದ ಬಳಿಕ ಸ್ಥಳದಿಂದ ಸಿಟಿ ರವಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಶಾಸಕರ ವಿರುದ್ಧ ಘೋಷಣೆ ಕೂಗಿ ಮಂಗಳವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ್ದಾರೆ.


ಮೃತ ಯುವಕರ ಸಂಬಂಧಿಕರು ಹಾಗೂ ಸ್ನೇಹಿತರು ಕುಣಿಗಲ್ ಸಾರ್ವಜನಿಕ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ಶಾಸಕ ಸಿ.ಟಿ ರವಿ ಹಾಗೂ ಕಾರಿನಲ್ಲಿದ್ದವರು ಕುಡಿದು ಮತ್ತಿನಲ್ಲಿ ಕಾರು ಚಾಲನೆ ಮಡಿಕೊಂಡು ಬಂದು ರಸ್ತೆ ಬದಿಯಲ್ಲಿ‌ ನಿಂತ್ತಿದ್ದ ಯುವಕರ ಪ್ರಾಣ ತೆಗೆದಿದೆ ಎಂದು ಅರೋಪಿಸಿದ್ದಾರೆ.

ಯುವಕರು ಸಾವನಪ್ಪಿದರೂ ಹಾಗೂ ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲಿಸದೇ ಗೂಂಡಾ ರೀತಿ ವರ್ತಿಸಿದರು. ಸಿ.ಟಿ.ರವಿ ಅವರ ವಿರುದ್ದ ಕಾನೂನು ಕ್ರಮ ಜರುಗಿಬೇಕೆಂದು ಮೃತ ಸುನಿಲ್ ಸಂಬಂದಿ ಪ್ರಸಾದ್ ಗೌಡ ಅರೋಪಿಸಿದರು.

ಸಿಟಿ ರವಿ ವಿರುದ್ಧ ದೂರು ದಾಖಲುಅಪಘಾತದ ಬಳಿಕ ಸ್ಥಳದಿಂದ ತೆರಳಿರುವ ಶಾಸಕ ಸಿ.ಟಿ ರವಿ ವಿರುದ್ದ ಕುಣಿಗಲ್‌ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಅರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ